10:34 PM (IST) Jun 22

Karnataka Latest News Live 22 June 2026Bike Rear Seat - ಬೈಕ್‌ಗಳ ಹಿಂಬದಿ ಸೀಟ್ ಯಾಕೆ ಎತ್ತರ ಇರುತ್ತೆ? ಸ್ಟೈಲ್ ಅಲ್ಲ, ಇದರ ಹಿಂದಿದೆ ದೊಡ್ಡ ಸೈನ್ಸ್

Bike Rear Seat: ಹಿಂಬದಿ ಸೀಟ್ ಎತ್ತರವಾಗಿರೋದೇಕೆ ಗೊತ್ತಾ? ಸ್ಟೈಲ್ ಅಂದುಕೊಂಡ್ರೆ ತಪ್ಪು, ಇದರ ಹಿಂದೆ ಇದೆ ಸಖತ್ ಸೈನ್ಸ್! ಬೈಕ್‌ಗಳಲ್ಲಿ ಸವಾರನ ಸೀಟಿಗಿಂತ ಹಿಂಬದಿ ಸೀಟ್ ಸ್ವಲ್ಪ ಎತ್ತರದಲ್ಲಿರುವುದನ್ನು ನೀವು ಗಮನಿಸಿರಬಹುದು.

Read Full Story
09:45 PM (IST) Jun 22

Karnataka Latest News Live 22 June 2026HDK vs DKS - 'ವಿಧಾನಸೌಧಕ್ಕೆ ಅಲ್ಲ, ಬಿಡದಿಗೆ ಬನ್ನಿ' - ಸಿಎಂ ಡಿಕೆಶಿಗೆ ಎಚ್‌ಡಿಕೆ ತಿರುಗೇಟು

Bidadi Township Project: ವಿಧಾನಸೌಧಕ್ಕೆ ಬರುವ ಬದಲು, ಯೋಜನೆಯಿಂದ ನೇರವಾಗಿ ಪರಿಣಾಮಕ್ಕೆ ಒಳಗಾಗುತ್ತಿರುವ ಜನರ ಮಧ್ಯೆ ಚರ್ಚೆ ನಡೆಸೋಣ ಎಂದು ಡಿಕೆಶಿಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Read Full Story
08:55 PM (IST) Jun 22

Karnataka Latest News Live 22 June 2026Bidadi Township Row - 'ನನ್ನ ಆಫೀಸಿಗೆ ಬನ್ನಿ' - ಮೊದಲ ಬಾರಿ ಎಚ್‌ಡಿಕೆಗೆ ಪತ್ರ ಬರೆದ ಸಿಎಂ ಡಿಕೆಶಿ

Bidadi Township Row: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ಇದೀಗ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಯೋಜನೆ ಕುರಿತು ನಡೆಯುತ್ತಿರುವ..

Read Full Story
08:42 PM (IST) Jun 22

Karnataka Latest News Live 22 June 2026ನಿರ್ಮಾಪಕರಿಗೆ ಶಿಕ್ಷಣ ಅಗತ್ಯ - Actor Sathish Ninasam ಮಾತಿಗೆ ಕೆನಲಿ ಕೆಂಡವಾದ ನಿರ್ಮಾಪಕರು!

Actor Sathish Ninasam Press Conference: ಇತ್ತೀಚೆಗೆ ಅಯೋಗ್ಯ 2 ಸಿನಿಮಾದ ಹಾಡಿನ ರಿಲೀಸ್‌ ಆಗಿದೆ. ಆ ವೇಳೆ ಕನ್ನಡ ಸಿನಿಮಾಗಳ ಅಳಿವು ಉಳಿವಿನ ಬಗ್ಗೆ ಸತೀಶ್‌ ನೀನಾಸಂ ಅವರು ಮಾತನಾಡುತ್ತ, ನಿರ್ಮಾಪಕರಿಗೆ ಎಜ್ಯುಕೇಶನ್‌ ಬೇಕು ಎಂದಿದ್ದಾರೆ. ಈ ಬಗ್ಗೆ ದೊಡ್ಡ ಚರ್ಚೆ ಆಗಿದ್ದು,

Read Full Story
07:49 PM (IST) Jun 22

Karnataka Latest News Live 22 June 2026Ishaani Krishna - ತಾತ ತೀರಿಕೊಂಡ ಮೇಲೆ ಆ ಯೋಚನೆ ಬಂತು, ನಾನು ಲಕ್ಕಿ ಎಂದ ನಟಿ ಇಶಾನಿ!

Ishaani Krishna: ನಟಿ ಇಶಾನಿ ಕೃಷ್ಣ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಂದೆ ಕೃಷ್ಣಕುಮಾರ್ ಅವರ ಸೋಲೊಪ್ಪದ ಗುಣ ಹಾಗೂ ತಾಯಿಯ ಸಮರ್ಪಣಾ ಮನೋಭಾವ ತಮಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.

Read Full Story
07:22 PM (IST) Jun 22

Karnataka Latest News Live 22 June 2026Kodagu - 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಉಸಿರಾಟ ಇರಲ್ಲ - ಸಿದ್ದರಾಮಯ್ಯ ವಿರುದ್ಧ ಯದುವೀರ್ ವಾಗ್ದಾಳಿ

Yaduveer Wadiyar: ಕಾಂಗ್ರೆಸ್ ಗೆ ಉಸಿರಾಡುವುದಕ್ಕೆ ದೇಶದಲ್ಲಿ ಇರುವುದು ಇದೊಂದೇ ರಾಜ್ಯ. 28 ರಲ್ಲಿ ಚುನಾವಣೆಯಲ್ಲಿ ಅದು ಕೂಡ ಇಲ್ಲದಂತೆ ಆಗುವ ಆತಂಕ ಅವರಿಗೆ ಇದೆ. ಆ ಮಾಹಿತಿ ಅವರಿಗೆ ಈಗಾಗಲೇ ಗೊತ್ತಾಗಿದೆ.

Read Full Story
06:34 PM (IST) Jun 22

Karnataka Latest News Live 22 June 2026Chanakya Niti - ಗಂಡ-ಹೆಂಡತಿ ಮಧ್ಯೆ ಯಾಕೆ ದೂರ ಜಾಸ್ತಿಯಾಗುತ್ತೆ? ಚಾಣಕ್ಯ ಹೇಳಿದ್ರು 4 ಕಾರಣಗಳು!

Chanakya Niti: ನಿಮ್ಮ ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ಮಧ್ಯೆ ಅಂತರ ಹೆಚ್ಚಾಗ್ತಿದ್ರೆ, ಹುಷಾರಾಗಿರಿ. ಯಾಕಂದ್ರೆ, ಆಚಾರ್ಯ ಚಾಣಕ್ಯರು ಇದಕ್ಕೆ ನಾಲ್ಕು ಮುಖ್ಯ ಕಾರಣಗಳನ್ನು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Read Full Story
06:08 PM (IST) Jun 22

Karnataka Latest News Live 22 June 2026Chikkamagaluru - ಪೊಲೀಸ್ ವಿಚಾರಣೆ, ತಾಯಿಗೆ ಸಂದೇಶ, ನಂತರ ಆತ್ಮ*ಹ*ತ್ಯೆ - ಚಂದನ್ ಸಾವಿಗೆ ಕಾರಣವೇನು?

Breaking News Karnataka: ಪೊಲೀಸ್ ವಿಚಾರಣೆಯ ನಂತರ ಯುವಕನೊಬ್ಬ ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ.

Read Full Story
06:05 PM (IST) Jun 22

Karnataka Latest News Live 22 June 2026ಅರ್ಜಿ ಹಾಕುವವರೆಗೂ ಗೃಹಲಕ್ಷ್ಮಿ, ಗೃಹಜ್ಯೋತಿ ನಿಲ್ಲತ್ತಾ? ಅರ್ಜಿ ಸಲ್ಲಿಕೆ ಯಾವಾಗ? ಸರ್ಕಾರದ ಸ್ಪಷ್ಟನೆ

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿನ ಅಕ್ರಮಗಳನ್ನು ತಡೆಯಲು ಸರ್ಕಾರವು ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಸದ್ಯದ ಫಲಾನುಭವಿಗಳಿಗೆ ಸೌಲಭ್ಯಗಳು ಮುಂದುವರೆಯಲಿವೆ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.

Read Full Story
05:53 PM (IST) Jun 22

Karnataka Latest News Live 22 June 2026Anekal - ಸಿನಿಮಾ ಸ್ಟೈಲ್‌ನಲ್ಲಿ ಲಾರಿ ದರೋಡೆ - 24 ಗಂಟೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?

Anekal: ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದ ರಾಬರಿ ದೃಶ್ಯವೊಂದು ಇದೀಗ ನಿಜ ಜೀವನದಲ್ಲೂ ನಡೆದಿದ್ದು, ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಗ್ಯಾಂಗ್‌ನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳಲ್ಲೇ ಬಂಧಿಸಿದ್ದಾರೆ.

Read Full Story
05:40 PM (IST) Jun 22

Karnataka Latest News Live 22 June 2026ಕಾಗದದ ಮೇಲಷ್ಟೇ ಉಳಿದ ಯೋಜನೆಗಳು - ಸಣ್ಣ ಜಲವಿದ್ಯುತ್ ವಲಯದಲ್ಲಿ ಕರ್ನಾಟಕ ನಂ.1 ಆಗಿದ್ದರೂ ನೂರಾರು ಪ್ರಾಜೆಕ್ಟ್ ರದ್ದು!

ನವೀಕರಿಸಬಹುದಾದ ಇಂಧನದಲ್ಲಿ, ವಿಶೇಷವಾಗಿ ಸಣ್ಣ ಜಲವಿದ್ಯುತ್ ಯೋಜನೆಗಳ ಸ್ಥಾಪನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೂ, ನೂರಾರು ಯೋಜನೆಗಳು ರದ್ದಾಗಿವೆ. ಖಾಸಗಿ ಸಂಸ್ಥೆಗಳಿಗೆ ಹಂಚಿಕೆಯಾಗಿದ್ದ ಈ ಯೋಜನೆಗಳು, ಶಾಸನಬದ್ಧ ಅನುಮತಿ ಪಡೆಯಲು ವಿಫಲವಾದ ಕಾರಣ ಮತ್ತು ರಾಜಕೀಯ ನಂಟಿನ ಆರೋಪಗಳ ನಡುವೆ ಕಾಗದದ ಮೇಲಷ್ಟೇ ಉಳಿದು, ಸರ್ಕಾರದ ಕ್ರಮಕ್ಕೆ ಗುರಿಯಾಗಿವೆ.
Read Full Story
05:13 PM (IST) Jun 22

Karnataka Latest News Live 22 June 2026Muhurta - ಯಾರು ಯಾರಿಗೆ ಒಳ್ಳೇದು, ಕೆಟ್ಟದ್ದು ಮಾಡ್ತಾರೆ... ಕೆಎ-18ನಲ್ಲಿ ಆ ರಹಸ್ಯ ಬಿಚ್ಚಿಟ್ಟ ತನಿಷಾ ಕುಪ್ಪಂಡ!

KA-18 Kannada Movie: ಶೀರ್ಷಿಕೆಯಿಂದಲೇ ಗಮನ ಸೆಳೆದ ‘ಕೆಎ-18’ ಚಿತ್ರಕ್ಕೆ ಮುಹೂರ್ತ ಆಗಿದೆ. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ ಅವರು ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

Read Full Story
04:35 PM (IST) Jun 22

Karnataka Latest News Live 22 June 2026ಹಣವಂತರಿಗೆ ಗಾಳ ಹಾಕ್ತಿದ್ದ ಕಿರುತೆರೆ ನಟಿ ಅರೆಸ್ಟ್; ಆಭರಣ ಬಿಡಿಸೋ ನೆಪದಲ್ಲಿ ಲಕ್ಷ ಲಕ್ಷ ವಂಚಿಸುತ್ತಿದ್ದ ‘ಕಿಲಾಡಿ’ ವನಿತಾ

ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಣವಂತರನ್ನು ವಂಚಿಸುತ್ತಿದ್ದ ವನಿತಾ ಎಂಬಾಕೆಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ತನ್ನ ಆಭರಣ ಅಡವಿಟ್ಟಿದ್ದು, ಬಿಡಿಸಿಕೊಳ್ಳಲು ಹಣ ಬೇಕೆಂದು ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಈಕೆ ಪರಾರಿಯಾಗುತ್ತಿದ್ದಳು. 

Read Full Story
04:28 PM (IST) Jun 22

Karnataka Latest News Live 22 June 2026ನನ್ನದು ಒಂದೇ ಒಂದು ಆಸೆ...... ಭಾವನಾತ್ಮಕ ಪತ್ರ ಬರೆದು ತುಮಕೂರಿನಲ್ಲಿ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವು!

ತುಮಕೂರಿನ ಎಸ್‌ಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ವೆಂಕಟೇಶ್, ಬಿಸಿಎಂ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್‌ನಲ್ಲಿ, ತನ್ನ ಕುಟುಂಬದ ಐದು ಮಂದಿ ಸದಾ ಒಟ್ಟಾಗಿರಬೇಕೆಂಬ ಕೊನೆಯಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುಟುಂಬ ಕಲಹದ ಶಂಕೆಯನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
04:24 PM (IST) Jun 22

Karnataka Latest News Live 22 June 2026Sathish Ninasam - ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾದ 'ಅಯೋಗ್ಯ 2' ನಟ; ನೀನಾಸಂ ಸತೀಶ್ ವಿರುದ್ಧ ಕ್ರಮ?

ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಮೂರ್ತಿ ಹಾಗು ಪಧಾದಿಕಾರಿಗಳು ಭಾಗಿಯಾಗಿರುವ ಸಭೆಯಲ್ಲಿ ಇದೀಗ ಈ ನಟ ತಾವು ಆಡಿರುವ ಮಾತಿಗೆ ಸ್ಪಷ್ಟನೆ ಕೊಡಬೇಕಾಗಿದೆ. ಈ ವಿವಾದ ಇಲ್ಲಿಗೇ ತಣ್ಣಗಾಗುತ್ತದೆಯಾ? ಅಥವಾ, ಇನ್ನೇನೋ ಆಗಿ ಬೆಂಕಿ ಹೊತ್ತಿಕೊಳ್ಳಲಿದೆಯಾ? ಮುಂದೇನಾಗಲಿದೆ ಎಂಬ ಕುತೂಹಲವಂತೂ ಸೃಷ್ಟಿಯಾಗಿದೆ.

Read Full Story
04:16 PM (IST) Jun 22

Karnataka Latest News Live 22 June 2026ಬೆಂಗಳೂರು ಸಬರ್ಬನ್ ರೈಲಿಗೆ ಯುರೋಪಿಯನ್ ತಂತ್ರಜ್ಞಾನದ ಸ್ಪರ್ಶ; ಮೆಟ್ರೋ ಮಾದರಿ ಕೈಬಿಟ್ಟು ‘ETCS’ ಸಿಗ್ನಲಿಂಗ್‌ಗೆ ಸಜ್ಜಾದ ಕೆ-ರೈಡ್‌

ಬೆಂಗಳೂರಿನ 148 ಕಿ.ಮೀ. ಉಪನಗರ ರೈಲು ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸಿಬಿಟಿಸಿ ಸಿಗ್ನಲಿಂಗ್ ಬದಲು ಅತ್ಯಾಧುನಿಕ ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ (ETCS) ಅಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ಹೈ-ಸ್ಪೀಡ್ ಕಾರಿಡಾರ್‌ಗಳಾಗಿ ವಿಸ್ತರಿಸುವ ದೃಷ್ಟಿಯಿಂದ ಕೆ-ರೈಡ್ ಈ ನಿರ್ಧಾರ ಕೈಗೊಂಡಿದೆ. 

Read Full Story
04:11 PM (IST) Jun 22

Karnataka Latest News Live 22 June 2026Trailer ಕಟ್ ಮಾಡಲು ಹೆದರಿದ ಸಿಂಪಲ್ ಸುನಿ, ಮಾಧವನ್‌ಗೂ ಅಚ್ಚರಿ - ‘ಮೋಡ ಕವಿದ ವಾತಾವರಣ’ದಲ್ಲಿ ಏನಿದೆ?

Simple Suni ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಜೂನ್ 26ಕ್ಕೆ ಬಿಡುಗಡೆಯಾಗುತ್ತಿದೆ. ಶೀಲಮ್, ಮೋಕ್ಷ ಕುಶಾಲ್, ಸಾತ್ವಿಕಾ ನಟಿಸಿರುವ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ನಟ ಮಾಧವನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story
02:51 PM (IST) Jun 22

Karnataka Latest News Live 22 June 2026ನಾನು ಕೊನೇವರೆಗೂ ಸೋಲು ಒಪ್ಕೊಳ್ಳಲ್ಲ; ಪಾಕ್‌ ಮ್ಯಾಚ್‌ನ ಮಂತ್ರದಿಂದ ಹೊಸ ಹೆಜ್ಜೆ ಇಟ್ಟ Virat Kohli

Cricketer Virat Kohli: ಕ್ರಿಕೆಟ್‌ ಲೋಕದ ದಿಗಗ್ಜ ವಿರಾಟ್ ಕೊಹ್ಲಿ ಈಗ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ಬರೋದಿಲ್ಲ ಎಂದು ಹೇಳಿರುವ ಅವರು 'ಒನ್8' (One8) ಅನ್ನು 'ಅಗಿಲಿಟಾಸ್' (Agilitas) ಕ್ರೀಡಾ ಬ್ರಾಂಡ್ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದ್ದಾರೆ.

Read Full Story
02:42 PM (IST) Jun 22

Karnataka Latest News Live 22 June 2026ಕೊಪ್ಪಳದ ಅಂಜನಾದ್ರಿ - ಹನುಮನ ಜನ್ಮಭೂಮಿ ವಿವಾದ, ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಹನುಮಂತನ ಜನ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಿರಾಕರಿಸಿದ್ದು, ಪ್ರಕರಣವನ್ನು ಮತ್ತೆ ಕರ್ನಾಟಕ ಹೈಕೋರ್ಟ್‌ಗೆ ಹಿಂತಿರುಗಿಸಿದೆ. ಕರ್ನಾಟಕದ ಕಿಷ್ಕಿಂಧೆ, ಆಂಧ್ರದ ತಿರುಮಲ ಮತ್ತು ಕರ್ನಾಟಕದ ಗೋಕರ್ಣದ ನಡುವೆ ಹನುಮನ ನಿಜವಾದ ಜನ್ಮಸ್ಥಳ ಯಾವುದು 

Read Full Story
01:28 PM (IST) Jun 22

Karnataka Latest News Live 22 June 2026ಬಿಜೆಪಿ ಧರ್ಮಸ್ಥಳ ಸಭೆಗೆ ಹಿರಿಯರ ವಿರೋಧ, ಕುದುರೆ ವ್ಯಾಪಾರ ಮಾಡಿದವರು ಬಂದು ಪ್ರಮಾಣ ಮಾಡ್ಲಿ ಎಂದ ಆರ್ ಅಶೋಕ್

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನವು ಬಿಜೆಪಿಯಲ್ಲಿ ತೀವ್ರ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ನಿರ್ಧಾರಕ್ಕೆ ಪಕ್ಷದ ಹಿರಿಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದು, ಈ ವಿವಾದ ಇದೀಗ ದೆಹಲಿ ಹೈಕಮಾಂಡ್ ಅಂಗಳ ತಲುಪಿದೆ. ಈ ಬೆಳವಣಿಗೆಗಳ ಬಗ್ಗೆ ಮೈತ್ರಿಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದಾರೆ.
Read Full Story