- Home
- Karnataka Districts
- ಅರ್ಜಿ ಹಾಕುವವರೆಗೂ ಗೃಹಲಕ್ಷ್ಮಿ, ಗೃಹಜ್ಯೋತಿ ನಿಲ್ಲತ್ತಾ? ಅರ್ಜಿ ಸಲ್ಲಿಕೆ ಯಾವಾಗ? ಸರ್ಕಾರದ ಸ್ಪಷ್ಟನೆ
ಅರ್ಜಿ ಹಾಕುವವರೆಗೂ ಗೃಹಲಕ್ಷ್ಮಿ, ಗೃಹಜ್ಯೋತಿ ನಿಲ್ಲತ್ತಾ? ಅರ್ಜಿ ಸಲ್ಲಿಕೆ ಯಾವಾಗ? ಸರ್ಕಾರದ ಸ್ಪಷ್ಟನೆ
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿನ ಅಕ್ರಮಗಳನ್ನು ತಡೆಯಲು ಸರ್ಕಾರವು ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಸದ್ಯದ ಫಲಾನುಭವಿಗಳಿಗೆ ಸೌಲಭ್ಯಗಳು ಮುಂದುವರೆಯಲಿವೆ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.

ಭಾರಿ ಅಕ್ರಮ
ಗೃಹಜ್ಯೋತಿ, ಗೃಹಲಕ್ಷ್ಮಿ (Gruhalakshmi scheme) ಯೋಜನೆಗಳಲ್ಲಿ ಭಾರಿ ಅಕ್ರಮ ನಡೆದಿರುವುದು ಇದಾಗಲೇ ಬೆಳಕಿಗೆ ಬಂದಿದೆ. ಇದರ ಅರ್ಥ ಗೃಹಲಕ್ಷ್ಮಿ ಯೋಜನೆ ಅನರ್ಹರಿಗೂ ಸಿಗುತ್ತಿದೆ. ಒಂದೇ ಮನೆಯಲ್ಲಿ ಇಬ್ಬರು, ಮೂವರು, ಆದಾಯ ತೆರಿಗೆ ಪಾವತಿದಾರರು, ಶ್ರೀಮಂತರು ಎಲ್ಲರೂ ಇದನ್ನು ಪಡೆಯುತ್ತಿದ್ದರೆ, ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ವಾಣಿಜ್ಯ ಬಳಕೆಗೆ ಉದ್ದೇಶಕ್ಕೂ ಗೃಹ ಬಳಕೆಯ ಸೌಲಭ್ಯ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಅನರ್ಹರು ಎಂಜಾಯ್
ಇದಾಗಲೇ ಮೂರು ವರ್ಷಗಳವರೆಗೆ ಅನರ್ಹರು ಕೂಡ ಈ ಎಲ್ಲಾ ಸೌಲಭ್ಯಗಳನ್ನು ಎಂಜಾಯ್ ಮಾಡುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಹೊಸ ಅರ್ಜಿಯನ್ನು ಕರೆದಿದೆ. ಇದರ ಬಗ್ಗೆ ಇದಾಗಲೇ ಜನಸಾಮಾನ್ಯರಿಗೆ ಸಾಕಷ್ಟು ಗೊಂದಲಗಳು ಉಂಟಾಗಿವೆ.
ಸೌಲಭ್ಯಗಳು ಸಿಗಲ್ವಾ?
ಒಂದು ವೇಳೆ ಅರ್ಜಿ ಸಲ್ಲಿಸದೇ ಹೋದರೆ ಅಲ್ಲಿಯವರೆಗೂ ಈ ಸೌಲಭ್ಯಗಳು ತಮಗೆ ಸಿಗಲ್ವಾ, ಅರ್ಜಿ ಸಲ್ಲಿಕೆ ಯಾವಾಗ, ಎಂದು ಎಂಬೆಲ್ಲಾ ಕನ್ಫ್ಯೂಸನ್ ಕಾಡತೊಡಗಿದೆ. ಇದಕ್ಕೆಲ್ಲಕ್ಕೂ ಇದೀಗ ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಭಯ ಪಡುವ ಅಗತ್ಯವಿಲ್ಲ
ಸದ್ಯ ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ. ಏಕೆಂದರೆ, ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಸದ್ಯಕ್ಕೆ ಹೊಸ ಅರ್ಜಿ ಸಲ್ಲಿಸುವ ಅವಕಾಶ ಇಲ್ಲ. ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ಜೊತೆ ಹೊಸ ಅರ್ಜಿ ಸಲ್ಲಿಕೆ ಕೂಡ ವಿಳಂಬವಾಗುತ್ತಿದೆ. ಆದ್ದರಿಂದ ಈಗ ಸಿಗುತ್ತಿರುವ ಸೌಲಭ್ಯಗಳು ನಿಲ್ಲುವುದಿಲ್ಲ, ಮುಂದುವರೆಯಲಿದೆ ಎಂದಿದ್ದಾರೆ.
ದಿನಾಂಕ ನಿಗದಿಯಾಗಿಲ್ಲ
ಸದ್ಯದ ಮಟ್ಟಿಗೆ ಈ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ನಿಗದಿಯಾಗಿಲ್ಲ. ಅರ್ಹ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮಾಡಬೇಕಿದೆ. ಅದು ಆದ ಮೇಲೆ ಮುಂದಿನ ಕೆಲಸ. ಅಲ್ಲಿಯವರೆಗೂ ಅರ್ಜಿ ಸಲ್ಲಿಕೆಗೆ ದಿನಾಂಕ ಘೋಷಣೆಯಾಗೋದಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಗ್ಯಾರೆಂಟಿ ನಿಲ್ಲಲ್ಲ ಎಂದಿದ್ದಾರೆ ರೇವಣ್ಣನವರು.
ಆ್ಯಪ್ ಮೂಲಕ ಗ್ಯಾರಂಟಿ ಪರಿಷ್ಕರಣೆ
ಈ ಕುರಿತು ನಡೆದಿರುವ ಸಭೆಯಲ್ಲಿ, ಪರಿಷ್ಕರಣೆ ಮುಗಿಯುವವರೆಗೂ ಅರ್ಜಿ ಆಹ್ವಾನ ಮಾಡದಿರಲು ತೀರ್ಮಾನ ಮಾಡಲಾಗಿದೆ. ಈ ಹಿನ್ನೆಲೆ ಅರ್ಜಿ ಸಲ್ಲಿಕೆಗೆ ಜನರು ಇನ್ನೂ ಕಾಯಬೇಕಾಗಿದೆ. ಆ್ಯಪ್ ಮೂಲಕ ಗ್ಯಾರಂಟಿ ಪರಿಷ್ಕರಣೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಒಂದು ವಾರದಲ್ಲಿ ಮರು ಪರಿಶೀಲನೆ ಸರ್ವೆ ಶುರುವಾಗಲಿದೆ ಎಂದು ಮಾಧ್ಯಮಗಳಿಗೆ ಅವರು ವಿವರಣೆ ನೀಡಿದ್ದಾರೆ.

