135 ಸೀಟ್ ಗೆಲ್ಲಿಸಿದ್ರೂ ಸಿಗದ ಸಿಂಹಾಸನ! ಪಕ್ಷಕ್ಕಾಗಿ ಜೈಲು, ಅವಮಾನ ಸಹಿಸಿದ 'ಕನಕಪುರ ಬಂಡೆ' ಡಿಕೆಶಿ ರೋಚಕ ಕಥೆ

ಕಾಂಗ್ರೆಸ್ 'ಟ್ರಬಲ್ ಶೂಟರ್' ಡಿ.ಕೆ. ಶಿವಕುಮಾರ್, 2023ರ ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಜಯ ತಂದುಕೊಟ್ಟರೂ ಸಿಎಂ ಸ್ಥಾನದಿಂದ ವಂಚಿತರಾದರು. ದಶಕಗಳ ರಾಜಕೀಯ ಹೋರಾಟ, ಪಕ್ಷ ನಿಷ್ಠೆ ಮತ್ತು ಸಂಘಟನಾ ಚಾತುರ್ಯದ ಹೊರತಾಗಿಯೂ, ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿದ್ದಕ್ಕೆ ಈಗ ಸಿಎಂ ಪಟ್ಟ ದಕ್ಕಿದೆ.

Share this Video
  • FB
  • Linkdin
  • Whatsapp

ಕರ್ನಾಟಕ ರಾಜಕಾರಣದಲ್ಲಿ 'ಟ್ರಬಲ್ ಶೂಟರ್' ಎನ್ನುವ ಪದಕ್ಕೆ ಪರ್ಯಾಯ ಹೆಸರೇ ಡಿ.ಕೆ. ಶಿವಕುಮಾರ್. ಕಾಂಗ್ರೆಸ್ ಪಕ್ಷಕ್ಕೆ ಯಾವಾಗೆಲ್ಲಾ ಸಂಕಷ್ಟ ಎದುರಾಯಿತೋ, ಆಗೆಲ್ಲಾ ಎದೆಯೊಡ್ಡಿ ನಿಂತವರು ಇದೇ ಕನಕಪುರದ ಕದನ ಕಲಿ. 2023ರ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 135 ಸ್ಥಾನಗಳನ್ನು ಗೆಲ್ಲಿಸಿ, ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಕೀರ್ತಿ ಡಿಕೆಶಿಗೆ ಸಲ್ಲುತ್ತದೆ. ಆದರೆ, ಅಷ್ಟೊಂದು ಸೀಟು ಗೆಲ್ಲಿಸಿಕೊಟ್ಟರೂ ಸಿಎಂ ಸಿಂಹಾಸನ ಮಾತ್ರ ಕೈಗೆ ಬಂದು ತುತ್ತಿಗೆ ಬರಲಿಲ್ಲ. ಹೈಕಮಾಂಡ್ ಆಜ್ಞೆಯಂತೆ ಮೌನಕ್ಕೆ ಶರಣಾದ ಈ ನಾಯಕನ ಹಿಂದೆ ದಶಕಗಳ ಸುದೀರ್ಘ ಹೋರಾಟದ ಕಥೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರ್.ಸಿ. ಕಾಲೇಜಿನಿಂದ ರಾಜಕೀಯದ ಎತ್ತರದವರೆಗೆ:

ಅದು 1980ರ ದಶಕದ ಆರಂಭ. ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಸಾಧಾರಣ ಹುಡುಗನಿಗೆ ಯಾವುದೇ ದೊಡ್ಡ ರಾಜಕೀಯ ಹಿನ್ನೆಲೆ ಇರಲಿಲ್ಲ. ಆದರೆ, ಆತನ ಕಣ್ಣಿನಲ್ಲಿ ಒಂದು ಕಿಚ್ಚಿತ್ತು, ಸಂಘಟನೆಯ ಚಾತುರ್ಯವಿತ್ತು. ಅದೇ ಕಿಚ್ಚು ಮುಂದೆ ಅವರನ್ನು ಕರ್ನಾಟಕ ಕಾಂಗ್ರೆಸ್‌ನ ಅಧಿನಾಯಕನನ್ನಾಗಿ ಮಾಡಿತು. ಸಾತನೂರು ಸಮರಾಂಗಣದಲ್ಲಿ ಸಿದ್ಧಗೊಂಡು, 'ಕನಕಪುರದ ಬಂಡೆ'ಯಾಗಿ ಬೆಳೆದ ಡಿಕೆಶಿ, ಎಚ್.ಡಿ. ದೇವೇಗೌಡರಂತಹ ದಿಗ್ಗಜರ ವಿರುದ್ಧವೇ ರಾಜಕೀಯ ಸಮರ ಸಾರಿದವರು.

ಕಷ್ಟಕಾಲದ ಆಪದ್ಬಾಂಧವ:

ಪಕ್ಷಕ್ಕೆ ಕಷ್ಟ ಬಂದಾಗೆಲ್ಲಾ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ನ ಕಟ್ಟಪ್ಪನಂತೆ ಕೆಲಸ ಮಾಡಿದ್ದಾರೆ. ಗುಜರಾತ್ ಶಾಸಕರ ರಕ್ಷಣೆಯಿರಲಿ ಅಥವಾ ಮೈತ್ರಿ ಸರ್ಕಾರ ಉಳಿಸುವ ಪ್ರಯತ್ನವಿರಲಿ, ಡಿಕೆಶಿ ಸದಾ ಮುಂಚೂಣಿಯಲ್ಲಿದ್ದರು. ಇದೇ ಕಾರಣಕ್ಕೆ ಅವರು ಐಟಿ, ಇಡಿ ತನಿಖೆಗಳನ್ನು ಎದುರಿಸಬೇಕಾಯಿತು, ತಿಹಾರ್ ಜೈಲು ಸೇರಬೇಕಾಯಿತು. ಜೈಲಿನ ಕಂಬಿಗಳ ಹಿಂದೆ ಇದ್ದಾಗಲೂ ಅವರು ಪಕ್ಷದ ನಿಷ್ಠೆಯನ್ನು ಬಿಡಲಿಲ್ಲ. "ನನ್ನ ಲಾಭಕ್ಕಿಂತ ಪಾರ್ಟಿ ಮುಖ್ಯ" ಎಂಬುದು ಅವರ ಅಚಲ ನಂಬಿಕೆಯಾಗಿತ್ತು.

2023ರ ವಿಜಯ ಮತ್ತು ಮೌನ:

2023ರ ಚುನಾವಣೆಯಲ್ಲಿ ರಾಜ್ಯಾದ್ಯಂತ ಮಿಂಚಿನ ಸಂಚಲನ ಮೂಡಿಸಿ 135 ಸೀಟುಗಳನ್ನು ತಂದುಕೊಟ್ಟಾಗ, ಡಿಕೆಶಿ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಹೈಕಮಾಂಡ್‌ನ ಲೆಕ್ಕಾಚಾರವೇ ಬೇರೆಯಾಗಿತ್ತು. 10 ವರ್ಷಗಳ ಕಾಲ ತಾನು ಪಟ್ಟ ಕಷ್ಟ, ಎದುರಿಸಿದ ಅವಮಾನಗಳನ್ನು ಬದಿಗಿಟ್ಟು, ಪಕ್ಷದ ಶಿಸ್ತಿಗೆ ತಲೆಬಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅವರು ಒಪ್ಪಿಕೊಂಡರು.

ಅಧಿಕಾರಕ್ಕಿಂತ ಪಕ್ಷದ ಹಿತವೇ ಮುಖ್ಯ ಎಂದು ಭಾವಿಸಿದ ಈ 'ಬಂಡೆ', ಸದ್ಯ ಹಸ್ತಪಾಳಯದ ಆಪದ್ಬಾಂಧವನಾಗಿ ಕೆಲಸ ಮಾಡುತ್ತಿದ್ದಾರೆ. ಸಿಂಹಾಸನ ಸಿಗದಿದ್ದರೂ ಜನರ ಮನಸ್ಸಿನಲ್ಲಿ ಡಿಕೆಶಿ ಒಬ್ಬ ಅಪ್ರತಿಮ ಸಂಘಟನಾ ಚತುರನಾಗಿ ಉಳಿದಿದ್ದಾರೆ.

Related Video