11:51 PM (IST) May 07

Breaking News: ರಾಜ್ಯದ ಜಲಾಶಯಗಳಿಗೆ ಬಿಗಿ ಭದ್ರತೆ ಒದಗಿಸಲು ರಾಜ್ಯ ಸರ್ಕಾರದಿಂದ ತುರ್ತು ಆದೇಶ!

ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಅಣೆಕಟ್ಟುಗಳಿಗೆ ಬಿಗಿ ಭದ್ರತೆ ಒದಗಿಸಲು ಆದೇಶಿಸಿದೆ. ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ, 24/7 ಗಸ್ತು, ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಜಾರಿಗೊಳಿಸಲಾಗುವುದು.

ಪೂರ್ತಿ ಓದಿ
11:51 PM (IST) May 07

ಆಪರೇಶನ್ ಸಿಂದೂರ್‌ಗೆ ಐಪಿಎಲ್ ಪಂದ್ಯದಲ್ಲಿ ಟ್ರಿಬ್ಯೂಟ್, ಲೆ.ಕರ್ನಲ್ ಧೋನಿಗೆ ಗೆಲುವಿನ ಗೌರವ

ಭಾರತೀಯ ಸೇನೆಗೆ ಐಪಿಎಲ್ ಪಂದ್ಯದಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ಪಾಕಿಸ್ತಾನ ಉಗ್ರ ತಾಣಗಳ ಮೇಲೆ ಸೇನೆ ನಡೆಸಿದ ಆಪರೇಶನ್ ಸಿಂದೂರ್‌ಗೆ ಬಿಸಿಸಿಐ ವಿಶೇಷ ರೀತಿಯಲ್ಲಿ ಟ್ರಿಬ್ಯೂಟ್ ಸಲ್ಲಿಸಿದೆ.

ಪೂರ್ತಿ ಓದಿ
11:43 PM (IST) May 07

ಚೆನ್ನೈ ಎದುರು ಸೋತ ಹಾಲಿ ಚಾಂಪಿಯನ್‌ ಕೆಕೆಆರ್ ಪ್ಲೇ ಆಫ್ ಹಾದಿ ಬಹುತೇಕ ಬಂದ್!

ನೂರ್ ಅಹಮದ್ ಮಾರಕ ಬೌಲಿಂಗ್ ಹಾಗೂ ಡೆವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ಎದುರು 2 ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಕೆಕೆಆರ್ ಪ್ಲೇ ಆಫ್ ಕನಸು ಬಹುತೇಕ ಬಂದ್ ಆಗಿದೆ.

ಪೂರ್ತಿ ಓದಿ
11:19 PM (IST) May 07

ಭಾರತ ಪಾಕಿಸ್ತಾನದ ಮಧ್ಯೆ ಪರಮಾಣು ಯುದ್ಧ ಶುರುವಾದ್ರೆ ಸಾಮಾನ್ಯ ಜನರು ಬಚಾವ್‌ ಆಗಲು ಏನೇನು ಮಾಡಬೇಕು? Tips

ಫಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಭಾರತವು ಮಾಕ್ ಡ್ರಿಲ್ಸ್ ನಡೆಸುತ್ತಿದ್ದು, ಪರಮಾಣು ದಾಳಿಯ ಸಾಧ್ಯತೆಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಪೂರ್ತಿ ಓದಿ
11:08 PM (IST) May 07

ಇಂಡಿಗೋದಿಂದ ಮೇ.10ರ ವರೆಗೆ ಭಾರತದ 11 ನಗರಗಳಿಗೆ ವಿಮಾನ ಸೇವೆ ರದ್ದು

ಭಾರತದ ಆಪರೇಶನ್ ಸಿಂದೂರ ಬಳಿಕ ಪಾಕಿಸ್ತಾನ ಗಡಿ ತೀರದಲ್ಲಿ ಭಾರಿ ಗುಂಡಿನ ದಾಳಿ ನಡೆಸುತ್ತಿದೆ. ಪಾಕಿಸ್ತಾನ ಇದೀಗ ಯುದ್ಧಕ್ಕೆ ಸನ್ನದ್ಧಗೊಂಡಿದೆ. ಇದರ ಪರಿಣಾಮ ಮೇ.10 ರ ವೆರೆಗೆ ಭಾರತದ 11 ನಗರಗಳಿಗೆ ಇಂಡಿಗೋ ವಿಮಾನ ಸೇವೆ ರದ್ದಾಗಿದೆ. 

ಪೂರ್ತಿ ಓದಿ
11:06 PM (IST) May 07

ಶೌಚಾಲಯದಲ್ಲಿ ಮೊಬೈಲ್ ಇರಿಸಿ ಸ್ತ್ರೀಯರ ವಿಡಿಯೋ ಸೆರೆ; ಬಿಹಾರ ಮೂಲದ ಆರೋಪಿ ಬಂಧನ

ಕೋರಮಂಗಲದ ಸಿಹಿ ತಿನಿಸು ಮಳಿಗೆಯ ಶೌಚಾಲಯದಲ್ಲಿ ಮಹಿಳೆಯ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಪೂರ್ತಿ ಓದಿ
10:37 PM (IST) May 07

'ಆಪರೇಷನ್​ ಸಿಂದೂರ'ದ ಹೀರೋ, ರಫೇಲ್​ ಯುದ್ಧ ವಿಮಾನದ ರೋಚಕ ಮಾಹಿತಿ ಇಲ್ಲಿದೆ...

ಉಗ್ರರ ನೆಲೆಯನ್ನು ನೆಲಸಮಗೊಳಿಸುವ ಮೂಲಕ 'ಆಪರೇಷನ್​ ಸಿಂದೂರ'ದ ಹೀರೋ ಆಗಿ ಮಿಂಚಿರುವ ರಫೇಲ್​ ಯುದ್ಧ ವಿಮಾನದ ರೋಚಕ ಮಾಹಿತಿ ಇಲ್ಲಿದೆ..

ಪೂರ್ತಿ ಓದಿ
10:25 PM (IST) May 07

ಟೆಸ್ಟ್ ಅವಕಾಶಕ್ಕೆ 6 ವರ್ಷ ಕಾದಿದ್ದ ರೋಹಿತ್, 6 ನಿಮಿಷದಲ್ಲಿ ವಿದಾಯ ನಿರ್ಧಾರ

ಏಕದಿನದಲ್ಲಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗಲು ಬರೋಬ್ಬರಿ 6 ವರ್ಷ ಕಾದಿದ್ದರು, 108 ಏಕದಿನ ಪಂದ್ಯ ಆಡಿದ ಬಳಿಕ ರೋಹಿತ್ ಶರ್ಮಾಗೆ ಮೊದಲ ಟೆಸ್ಟ್ ಪಂದ್ಯಕ್ಕೆ ಅವಕಾಶ ಸಿಕ್ಕಿತ್ತು. ಆದರೆ ಟೆಸ್ಟ್ ವಿದಾಯ ನಿರ್ಧಾರವನ್ನು ಕೇವಲ 6 ನಿಮಿಷದಲ್ಲಿ ತೆಗೆದುಕೊಂಡ್ರಾ?

ಪೂರ್ತಿ ಓದಿ
10:19 PM (IST) May 07

ಹಣ ಉಳಿಸಲು ಸೆಕೆಂಡ್ ಹ್ಯಾಂಡ್ ಬಟ್ಟೆ ಖರೀದಿಸ್ತೀರಾ? ಈ ಯುವಕನ ಚರ್ಮರೋಗ ಕೇಳಿದ್ರೆ ಶಾಕ್!

ಅಂಗಡಿಯಿಂದ ಖರೀದಿಸಿದ ಹಳೆಯ ಬಟ್ಟೆಗಳನ್ನು ತೊಳೆಯದೆ ಪದೇ ಪದೇ ಧರಿಸಿದ ನಂತರ ತನಗೆ ಚರ್ಮ ರೋಗ ಬಂದಿದೆ ಎಂದು ಯುವಕ ಟಿಕ್‌ಟಾಕ್‌ನಲ್ಲಿ ಬಹಿರಂಗಪಡಿಸಿದ್ದಾನೆ.

ಪೂರ್ತಿ ಓದಿ
10:10 PM (IST) May 07

ಪಂಜರದಲ್ಲಿ ಗಂಡನ ತಲೆ- ಹೆಂಡ್ತಿಯ ಬಳಿ ಕೀಲಿ ಕೈ: ಕಾರಣ ಅಷ್ಟೇ ಕುತೂಹಲ!

ಪಂಜರದಲ್ಲಿ ಗಂಡನ ತಲೆ- ಹೆಂಡ್ತಿಯ ಬಳಿ ಕೀಲಿ ಕೈ: ಕಾರಣ ಅಷ್ಟೇ ಕುತೂಹಲ! ಇದನ್ನು ಕೇಳಿದ್ರೆ ಪುರುಷರು ಹೌಹಾರೋದು ಗ್ಯಾರೆಂಟಿ. ಅಂಥದ್ದೇನಿದೆ ಅಂತೀರಾ? 

ಪೂರ್ತಿ ಓದಿ
10:00 PM (IST) May 07

ಧಾರವಾಡ ಸೇರಿ ದೇಶದ 5 ಐಐಟಿಗಳ ವಿಸ್ತರಣೆಗೆ ಅಸ್ತು; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ

ಐದು ಐಐಟಿಗಳಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ₹11,828.79 ಕೋಟಿ ಅನುದಾನ ನೀಡಿದೆ. ಈ ಯೋಜನೆಯಿಂದ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ ದೊರೆಯಲಿದೆ.

ಪೂರ್ತಿ ಓದಿ
09:41 PM (IST) May 07

ಯುದ್ಧ ನಡೆದರೆ ಚೀನಾ ಹೊರತುಪಡಿಸಿ ಪಾಕ್ ಬೆಂಬಲಕ್ಕೆ ನಿಲ್ಲುವ ಭಾರತದ ಶತ್ರು ದೇಶಗಳು ಇವೇ ನೋಡಿ!

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿದೆ. ಇಸ್ರೇಲ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದರೆ, ಚೀನಾ, ಟರ್ಕಿ ಮತ್ತು ಅಜೆರ್ಬೈಜಾನ್ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿವೆ. ಈ ಕಾರ್ಯಾಚರಣೆಯಿಂದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

ಪೂರ್ತಿ ಓದಿ
07:58 PM (IST) May 07

ಆಪರೇಷನ್ ಸಿಂದೂರ್: ಮಧ್ಯರಾತ್ರಿಯಿಂದ ಈವರೆಗೆ ಭಾರತ-ಪಾಕ್ ನಡುವಿನ ಪ್ರಮುಖ 10 ಬೆಳವಣಿಗೆಗಳು

ಭಾರತೀಯ ಸೇನೆಯು 'ಆಪರೇಷನ್ ಸಿಂದೂರ್' ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆನಲ್ಲಿ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆ. ಇದರ ನಂತರ ಭಾರತ ಮತ್ತು ಪಾಕ್ ನಡುವೆ ನಡೆದ 10 ಪ್ರಮುಖ ಘಟನೆಗಳು ಇಲ್ಲಿವೆ ನೋಡಿ..

ಪೂರ್ತಿ ಓದಿ
07:47 PM (IST) May 07

ನನ್ಗೆ ವಯಸ್ಸಾಗಿದೆ ಆದ್ರೆ ಅವಕಾಶ ಸಿಕ್ರೆ ಪಾಕಿಸ್ತಾನ ಮುಗಿಸುತ್ತೇನೆ, ಕರ್ನಲ್ ಸೋಫಿಯಾ ತಂದೆ ಹೇಳಿಕೆ ವೈರಲ್

ಮಗಳ ಬಗ್ಗೆ ಅತೀವ ಹೆಮ್ಮೆ ಇದೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಂದೆ ಹೇಳಿದ್ದಾರೆ. ಇದೇ ವೇಳೆ ಪಾಕಿಸ್ತಾನ ನಿರ್ನಾಮ ಮಾಡುವ ಕುರಿತು ಸೋಫಿಯಾ ತಂದೆ ನೀಡಿದ ಹೇಳಿಕೆ ಭಾರಿ ವೈರಲ್ ಆಗಿದೆ.

ಪೂರ್ತಿ ಓದಿ
07:45 PM (IST) May 07

ಜನ್ಮದಿನಕ್ಕೆ ಅನುಗುಣವಾಗಿ ಈ ಮೊಬೈಲ್​ ನಂಬರ್​ ಆಯ್ಕೆ ಮಾಡಿದ್ರೆ ಅದೃಷ್ಟವೋ ಅದೃಷ್ಟ...

ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಒಂಬತ್ತು ವಿಭಿನ್ನ ಪ್ರಕಾರಗಳಿವೆ. ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಗಳ ಮೊತ್ತದ ಆಧಾರದ ಮೇಲೆ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯಬಹುದು.

ಪೂರ್ತಿ ಓದಿ
07:42 PM (IST) May 07

'ನಾನಿಲ್ಲದೆ ಅಲ್ಲಿಗೆ ಹೋಗಬೇಡ..' ಶಾರುಖ್ ಖಾನ್ ಇಲ್ಲಿಯವರೆಗೆ ಕಾಶ್ಮೀರಕ್ಕೆ ಹೋಗದೇ ಇರಲು ಕಾರಣ ಬಹಿರಂಗ!

ಶಾರುಖ್ ಖಾನ್ ಅವರ ಕಾಶ್ಮೀರದೊಂದಿಗಿನ ಸಂಬಂಧವು ಆಳವಾದ ಭಾವನಾತ್ಮಕ ನಂಟನ್ನು ಹೊಂದಿದೆ. ತಂದೆಯೊಂದಿಗಿನ ಭರವಸೆಯಿಂದಾಗಿ ಅವರು ಇನ್ನೂ ಕಾಶ್ಮೀರಕ್ಕೆ ಭೇಟಿ ನೀಡಿಲ್ಲ. ಪಹಲ್ಗಾಮ್ ದಾಳಿಯ ಬಗ್ಗೆ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
07:17 PM (IST) May 07

ಮಗಳು ದಾರಿ ತಪ್ಪದಿರಲು 16 ವರ್ಷಕ್ಕೆ ಸೆಕ್ಸ್‌ಟಾಯ್ ಕೊಡಿಸಿದ ಭಾರತದ ಏಕೈಕ ನಟಿ!

ಗೌತಮಿ ಕಪೂರ್ ತಮ್ಮ ಮಗಳಿಗೆ 16ನೇ ವರ್ಷದ ಹುಟ್ಟುಹಬ್ಬಕ್ಕೆ ಸೆಕ್ಸ್ ಟಾಯ್ ಉಡುಗೊರೆಯಾಗಿ ನೀಡುವ ಬಗ್ಗೆ ಚರ್ಚಿಸಿದ್ದಾರೆ. ಈ ಘಟನೆ ಭಾರತೀಯ ಪೋಷಕರಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಮಕ್ಕಳೊಂದಿಗೆ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವ ಅಗತ್ಯವನ್ನು ಗೌತಮಿ ಒತ್ತಿ ಹೇಳಿದ್ದಾರೆ.

ಪೂರ್ತಿ ಓದಿ
07:00 PM (IST) May 07

EXCLUSIVE: ಟೀಮ್‌ ಇಂಡಿಯಾ ಟೆಸ್ಟ್‌ ನಾಯಕತ್ವದಿಂದ ರೋಹಿತ್‌ ಶರ್ಮಗೆ ಗೇಟ್‌ಪಾಸ್‌

ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಶರ್ಮಾ ಅವರನ್ನು ಭಾರತದ ಟೆಸ್ಟ್ ತಂಡದ ನಾಯಕ ಸ್ಥಾನದಿಂದ ವಜಾ ಮಾಡಲು ರಾಷ್ಟ್ರೀಯ ಆಯ್ಕೆದಾರರು ನಿರ್ಧರಿಸಿದ್ದಾರೆ. ಕಳಪೆ ಫಾರ್ಮ್ ಮತ್ತು ರೆಡ್-ಬಾಲ್ ಕ್ರಿಕೆಟ್‌ನಲ್ಲಿನ ಪ್ರದರ್ಶನವೇ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ, ರೋಹಿತ್ ಏಕದಿನ ತಂಡದಲ್ಲಿ ಮುಂದುವರಿಯಲಿದ್ದಾರೆ.

ಪೂರ್ತಿ ಓದಿ
06:53 PM (IST) May 07

'ಇದು ಚಿಕ್ಕ ಟ್ರೀಸರ್..' ಪಾಕಿಸ್ತಾನಕ್ಕೆ ಚಂದನ್ ಶೆಟ್ಟಿ ಎಚ್ಚರಿಕೆ! ಸೋನು ನಿಗಮ್‌ಗೂ ವಾರ್ನ್!

ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತ ನಡೆಸಿದ ವಾಯು ದಾಳಿಯನ್ನು ಶ್ಲಾಘಿಸಿದ ಚಂದನ್ ಶೆಟ್ಟಿ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ, ಅವರ ಮಾನಸಿಕ ಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ
06:48 PM (IST) May 07

ಆಪರೇಶನ್ ಸಿಂಧೂರ್‌ಗೆ ಯುಕೆ ಮಾಜಿ ಪ್ರಧಾನಿ ಬೆಂಬಲ, ಸಂಚಲನ ಸೃಷ್ಟಿಸಿದ ಕಾಶ್ಮೀರ ಹೇಳಿಕೆ

ಭಾರತದ ನಡೆಸಿದ ಆಪರೇಶನ್ ಸಿಂಧೂರ್ ದಾಳಿಯನ್ನು ಬ್ರಿಟನ್ ಮಾಜಿ ಪ್ರಧಾನಿ ಬೆಂಬಲಿಸಿದ್ದಾರೆ. ಭಾರತದ ನಡೆ ಸರಿಯಾಗಿದೆ ಎಂದಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಕಾಶ್ಮೀರ ಕುರಿತು ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.

ಪೂರ್ತಿ ಓದಿ