09:09 PM (IST) Jul 03

India News Live 3rd July: ದಾಳಿ ವೇಳೆ ಸೀಜ್ ಮಾಡಿದ ಖಾಸಗಿ ಜೆಟ್ ಹರಾಜು ಹಾಕಿದ ಇಡಿ, ಕೈಗೆಟುಕವ ದರದಲ್ಲಿ ವಿಮಾನ ಖರೀದಿಗೆ ಅವಕಾಶ

ಐಡಿ ಅಧಿಕಾರಿಗಳು ದಾಳಿ ವೇಳೆ ದುಬಾರಿ ಮೌಲ್ಯದ ಖಾಸಗಿ ಜೆಟ್ ಜಪ್ತಿ ಮಾಡಿದ್ದರು. ಇದೀಗ ಈ ವಿಮಾನವನ್ನು ಇಡಿ ಅಧಿಕಾರಿಗಳು ಮಾರಾಟ ಮಾಡುತ್ತಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ವಿಮಾನ ಖರೀದಿಗೆ ಅವಕಾಶ ನೀಡಿದೆ.

Read Full Story
06:48 PM (IST) Jul 03

India News Live 3rd July: 36 ವರ್ಷಗಳಲ್ಲಿ 300+ ಹೋಟೆಲ್‌ಗಳಿಗೆ ನಾಮ! ಚಾರ್ಲ್ಸ್ ಶೋಭರಾಜ್ ಹಾದಿ ತುಳಿದಿದ್ದ ವೃದ್ಧನ ಕಥೆ ಭಯಾನಕ

ಚಾರ್ಲ್ಸ್ ಶೋಭರಾಜ್‌ನಿಂದ ಪ್ರೇರಿತನಾಗಿ, 69 ವರ್ಷದ ಬಿಂಗ್ಸನ್ ಜಾನ್ ಎಂಬ ವೃದ್ಧ ಕಳೆದ ಮೂರು ದಶಕಗಳಲ್ಲಿ ದೇಶದ 300ಕ್ಕೂ ಹೆಚ್ಚು ಐಷಾರಾಮಿ ಹೋಟೆಲ್‌ಗಳಿಗೆ ವಂಚಿಸಿದ್ದಾನೆ. ರಾಯಪುರದ ಹೋಟೆಲ್‌ವೊಂದಕ್ಕೆ ಮೋಸ ಮಾಡಿ ಪರಾರಿಯಾಗಿದ್ದ ಈತನನ್ನು ಪೊಲೀಸರು ಭುವನೇಶ್ವರದಲ್ಲಿ ಬಂಧಿಸಿದ್ದಾರೆ.
Read Full Story
06:46 PM (IST) Jul 03

India News Live 3rd July: Nagabandham X Review - ನಭಾ, ಕೆಜಿಎಫ್ ಗರುಡ 'ನಾಗಬಂಧಂ'ಗೆ ಪ್ರೇಕ್ಷಕರು ಏನಂದ್ರು? ಇಲ್ಲಿದೆ ಟ್ವಿಟರ್ ವಿಮರ್ಶೆ

Nagabandham Twitter Review: ವಿರಾಟ್ ಕರ್ಣ ನಟನೆಯ 'ನಾಗಬಂಧಂ' ಸಿನಿಮಾ ಜುಲೈ 3 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.

Read Full Story
06:44 PM (IST) Jul 03

India News Live 3rd July: ಅಮೆರಿಕದಲ್ಲಿ ಶಾರುಖ್ ಖಾನ್​​ ಮಾಲೀಕತ್ವದ ಸ್ಟೇಡಿಯಂ - 200 ಕೋಟಿ ರೂ. ಕ್ರೀಡಾಂಗಣದಲ್ಲಿ ಏನೆಲ್ಲಾ ಇವೆ ನೋಡಿ

ನೈಟ್ ರೈಡರ್ಸ್ ಗ್ರೂಪ್‌ನ ಸಹ-ಮಾಲೀಕರಾದ ಶಾರುಖ್ ಖಾನ್, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ 'ಎಲ್ಎ ನೈಟ್ ರೈಡರ್ಸ್' ಕ್ರಿಕೆಟ್ ಮೈದಾನ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟದ ಪಿಚ್‌ಗಳು, ಫ್ಲಡ್‌ಲೈಟ್‌ಗಳು ಮತ್ತು 5,000 ಆಸನ ಸಾಮರ್ಥ್ಯ ಹೊಂದಿದೆ

Read Full Story
06:27 PM (IST) Jul 03

India News Live 3rd July: ರಿಕ್ಷಾ ಹತ್ತಿದ 13ರ ಬಾಲಕಿಯ ಮಾರಾಟ ಮಾಡಿದ ಡ್ರೈವರ್​! 30 ಕಾಮುಕರ ಅಟ್ಟಹಾಸ - 4 ಹೋಟೆಲ್​ ನೆಲಸಮ

ರಾಜಸ್ಥಾನದ ಶ್ರೀಗಂಗಾನಗರದಲ್ಲಿ, ಆಟೋ ಚಾಲಕನೊಬ್ಬ 13 ವರ್ಷದ ಬಾಲಕಿಯನ್ನು ₹1000ಕ್ಕೆ ಹೋಟೆಲ್‌ಗೆ ಮಾರಾಟ ಮಾಡಿದ್ದಾನೆ. ಅಲ್ಲಿ ಐದು ದಿನಗಳ ಕಾಲ 30ಕ್ಕೂ ಹೆಚ್ಚು ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿದ್ದಾರೆ. ಈ ಘೋರ ಕೃತ್ಯದ ನಂತರ, ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಆಡಳಿತವು ಆರೋಪಕ್ಕೆ ಗುರಿಯಾದ ಹೋಟೆಲ್‌ಗಳನ್ನು ಬುಲ್ಡೋಜರ್ ಬಳಸಿ ಕೆಡವಿದೆ.

Read Full Story
05:29 PM (IST) Jul 03

India News Live 3rd July: ನಾನು ಭಾರತೀಯ, ಪೌರತ್ವ ಸಾಬೀತುಪಡಿಸಲು 16 ದಾಖಲೆ ನೀಡಿದರೂ ವಿದೇಶಿ ಎಂದು ಹೈಕೋರ್ಟ್ ತೀರ್ಪು

ಅಮಿನಲ್ ಹಖ್ ತಾನು ಭಾರತೀಯ ಎಂದು ಸಾಬೀತು ಪಡಿಸಲು ಕೋರ್ಟ್‌ಗೆ 16 ದಾಖಲೆ ನೀಡಿದ್ದಾರೆ. ಆದರೆ ಹೈಕೋರ್ಟ್ ವಿದೇಶಿ ಎಂದು ಐತಿಹಾಸಿಕ ತೀರ್ಪು ನೀಡಿದೆ. ಕೋರ್ಟ್ ತೀರ್ಪಿಗೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಏನಿದು ಪ್ರಕರಣ?

Read Full Story
05:21 PM (IST) Jul 03

India News Live 3rd July: ಗರ್ಭಿಣಿಯರಿಗೆ ಟ್ರಂಪ್​ ಶಾಕ್! ಅಮೆರಿಕದ ಕನಸಿಗೆ ಬಿತ್ತು ಬ್ರೇಕ್​- ಕೋರ್ಟ್​ ತೀರ್ಪಿನ ವಿರುದ್ಧ No Entry Plan

ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡಿ ಪೌರತ್ವ ಪಡೆಯುವ 'ಪ್ರೆಗ್ನೆನ್ಸಿ ಟೂರಿಸಂ' ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸಲು ವಿಫಲರಾದ ಡೊನಾಲ್ಡ್ ಟ್ರಂಪ್, ಇದೀಗ ಹೆರಿಗೆಗಾಗಿ ಅಮೆರಿಕಕ್ಕೆ ಬರುವ ಗರ್ಭಿಣಿಯರನ್ನು ಗುರಿಯಾಗಿಸಿಕೊಂಡು ವೀಸಾ ವಂಚನೆಯಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.
Read Full Story
04:58 PM (IST) Jul 03

India News Live 3rd July: 'ವೈಭವ್‌ ಸೂರ್ಯವಂಶಿ ಭವಿಷ್ಯ ಹಾಳು ಮಾಡಬೇಡಿ' - ಟೀಂ ಇಂಡಿಯಾ ಕೋಚ್ ಮೇಲೆ ತಿರುಗಿಬಿದ್ದ ಆರ್‌ಸಿಬಿ ಆಪತ್ಬಾಂಧವ..!

15 ವರ್ಷದ ಪ್ರತಿಭಾನ್ವಿತ ಆಟಗಾರ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಅವಕಾಶ ನೀಡದ ಬಗ್ಗೆ ಚರ್ಚೆಗಳು ಜೋರಾಗಿವೆ. ವೈಭವ್ ಅವರನ್ನು ಬೆಂಚ್ ಕಾಯಿಸುತ್ತಿರುವ ಕೋಚ್ ನಿರ್ಧಾರದ ವಿರುದ್ಧ ಎಬಿ ಡಿವಿಲಿಯರ್ಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
Read Full Story
04:45 PM (IST) Jul 03

India News Live 3rd July: ಗಂಡ ತುಂಬಾ ಒಳ್ಳೆಯವ, ಆದ್ರೆ ತುಂಬಾ ಗೊರಕೆ ಹೊಡೀತಾನೆ - ಡಿವೋರ್ಸ್​ ಕೋರಿ ಪತ್ನಿ ಹೈಕೋರ್ಟ್​ ಮೊರೆ

ಭೋಪಾಲ್‌ನಲ್ಲಿ ಗಂಡನ ತೀವ್ರ ಗೊರಕೆಯಿಂದ ಬೇಸತ್ತ ಪತ್ನಿ ವಿಚ್ಛೇದನಕ್ಕೆ ಮುಂದಾದ ನೈಜ ಘಟನೆಯನ್ನು ಈ ಲೇಖನ ವಿವರಿಸುತ್ತದೆ. ಗೊರಕೆಯು ಕೇವಲ ಒಂದು ಅಭ್ಯಾಸವಲ್ಲ, ಅದು ಸ್ಲೀಪ್ ಅಪ್ನಿಯಾ ಮತ್ತು ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

Read Full Story
04:09 PM (IST) Jul 03

India News Live 3rd July: ಭಾರತದ ಮೊದಲ ಪೆಟ್ರೋಲ್ ಬಂಕ್‌ನ ರೋಚಕ ಇತಿಹಾಸ, ಅಂದು ಇಂಧನ ಕೈನಲ್ಲೇ ಹಾಕಲಾಗ್ತಿತ್ತು! ಡ್ರಮ್‌ ನಲ್ಲಿ ಇಡಲಾಗ್ತಿತ್ತು

ಭಾರತದ ಮೊದಲ ಪೆಟ್ರೋಲ್ ಬಂಕ್ 1928ರಲ್ಲಿ ಮುಂಬೈನಲ್ಲಿ 'ಬರ್ಮಾ ಶೆಲ್' ಕಂಪನಿಯಿಂದ ಸ್ಥಾಪನೆಯಾಯಿತು. ಅಂದು ಡ್ರಮ್‌ಗಳಿಂದ ಇಂಧನ ತುಂಬುವ ಕಷ್ಟಕರ ಪದ್ಧತಿಯಿಂದ, ಹಸ್ತಚಾಲಿತ ಪಂಪ್‌ಗಳ ಮೂಲಕ ವ್ಯವಸ್ಥಿತ ಮಾರಾಟಕ್ಕೆ ನಾಂದಿ ಹಾಡಲಾಯಿತು.

Read Full Story
03:53 PM (IST) Jul 03

India News Live 3rd July: Sathish Ninasam-Rachita Ram - ಸತೀಶ್-ರಚಿತಾ ಜೋಡಿಯ ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾ 'ಅಯೋಗ್ಯ 2' ರಿಲೀಸ್‌ಗೆ ಕೌಂಟ್‌ಡೌನ್!

ಮುನೇಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅಯೋಗ್ಯ-2 ಪಕ್ಕಾ ಹಳ್ಳಿ ಸೊಗಡಿನ, ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾವಾಗಿದ್ದು, ಮತ್ತದೇ ಮಂಡ್ಯದ ಸುತ್ತಮುತ್ತ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ. ಸದ್ಯ ಈ ಸಿನಿಮಾದ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಸದ್ಯವೇ ತೆರೆಗೆ ಕಾಲಿಡಲಿದೆ.

Read Full Story
03:41 PM (IST) Jul 03

India News Live 3rd July: ಅಂತಾರಾಷ್ಟ್ರೀಯ T20 ಪಂದ್ಯದಲ್ಲಿ ಒಂದೇ ಒಂದು ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆಲ್ಲದ ಟಾಪ್-5 ದಿಗ್ಗಜ ಕ್ರಿಕೆಟಿಗರಿವರು!

ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಪಂದ್ಯದ ದಿಕ್ಕು ಬದಲಾಗಿ ಹೋಗುತ್ತೆ. ಆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ 'ಪ್ಲೇಯರ್ ಆಫ್‌ ದಿ ಮ್ಯಾಚ್' ಪ್ರಶಸ್ತಿ ಗೆಲ್ಲದ ಟಾಪ್ 5 ದಿಗ್ಗಜ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

Read Full Story
03:29 PM (IST) Jul 03

India News Live 3rd July: ಹೊಟೆಲ್ ರೂಂ, ವಿಡಿಯೋ ಕಾಲ್,ಫಾರುಖ್ ಜೊತೆ ಮಾತನಾಡುತ್ತಲೇ ದುರಂತ ಅಂತ್ಯಕಂಡ ಯುವತಿ ರೇಣುಕಾ

ಹೊಟೆಲ್ ರೂಂಗೆ ಬಂದ 26ರ ಹರೆಯದ ಯುವತಿ ರೇಣುಕಾ ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾಳೆ. ಮಾತನಾಡುತ್ತಿದ್ದ ಯುವತಿ ಬುದುಕು ಅಂತ್ಯಗೊಳಿಸಿದ್ದಾರೆ. ಈ ದುರಂತಕ್ಕೆ ಕಾರಣವೇನು?

Read Full Story
03:04 PM (IST) Jul 03

India News Live 3rd July: ಬಾಲ್ಯದ ಕಹಿ ನೆನಪುಗಳು ನಿಮ್ಮನ್ನ ಹೇಗೆ ಕಾಡುತ್ತವೆ? ಮೈಗ್ರೇನ್‌ನಿಂದ ಗಂಭೀರ ಕಾಯಿಲೆವರೆಗೆ ಕನೆಕ್ಷನ್!

ಬಾಲ್ಯದ ನೆನಪುಗಳು ಕೆಲವರಿಗೆ ಕಹಿ, ಇನ್ನ ಕೆಲವರಿಗೆ ಸುಮಧುರ. ಕೆಲವು ಮಕ್ಕಳಿಗೆ ಬಾಲ್ಯ ಎನ್ನುವುದು ಭಯ, ಹಿಂಸೆ ಅಥವಾ ನಿರ್ಲಕ್ಷ್ಯದ ಕರಾಳ ಅಧ್ಯಾಯ. ಈ ಕಹಿ ಘಟನೆಗಳು ಕೇವಲ ನೆನಪುಗಳಾಗಿ ಉಳಿಯಲ್ಲ. ಬದಲಾಗಿ ಅವರು ದೊಡ್ಡವರಾದ ಮೇಲೆ ಮೈಗ್ರೇನ್, ಬೆನ್ನು ನೋವು , ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ

Read Full Story
02:49 PM (IST) Jul 03

India News Live 3rd July: ಜೂನ್‌ ಮುಗಿದ್ರೂ ಈ ವರ್ಷ 40% ಮಳೆ ಕಡಿಮೆ; ಜುಲೈ, ಆಗಸ್ಟ್‌ನಲ್ಲಿ ಮಳೆ ಆಗುತ್ತಾ? ಸಮಸ್ಯೆ ತಂದಿಟ್ಟ El Nino

Rain in india this week: ಭಾರತದಲ್ಲಿ ಕೃಷಿಗೆ ಮುಂಗಾರು ಮಳೆ ತುಂಬ ಮುಖ್ಯ. ಜೂನ್ ತಿಂಗಳ ಕೊನೆ ಆದರೂ ಕೂಡ ಹೆಚ್ಚು ಮಳೆ ಆಗಿಲ್ಲ. ನಮ್ಮ ದೇಶದಲ್ಲಿ ಶೇಕಡಾ 40 ರಷ್ಟು ಮಳೆ ಕೊರತೆಯಾಗಿದೆ. 'ಎಲ್ ನಿನೋ' (El Nino - ಜಾಗತಿಕ ಹವಾಮಾನ ಬದಲಾವಣೆ) ಪ್ರಭಾವದಿಂದಾಗಿ ಮಳೆ ಮತ್ತಷ್ಟು ಕಡಿಮೆಯಾಗಲಿದೆ.

Read Full Story
02:44 PM (IST) Jul 03

India News Live 3rd July: Operation Amistad - ವೆನಿಜುವೆಲಾದಲ್ಲಿ ಭಾರತದ 'ಆಪರೇಷನ್ ಅಮಿಸ್ಟಾಡ್'ಗೆ ಭಾರಿ ಮೆಚ್ಚುಗೆ!

ಭೂಕಂಪದಿಂದ ತತ್ತರಿಸಿದ ವೆನಿಜುವೆಲಾದಲ್ಲಿ ಭಾರತ 'ಆಪರೇಷನ್ ಅಮಿಸ್ಟಾಡ್' ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯು ಅಲ್ಲಿನ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Read Full Story
02:22 PM (IST) Jul 03

India News Live 3rd July: Last Indian Railway Station - ಭಾರತದ ಕೊನೆಯ ರೈಲ್ವೆ ನಿಲ್ದಾಣವಿದು! ಇಲ್ಲಿಂದ ಶುರುವಾಗುತ್ತೆ ಇನ್ನೊಂದು ದೇಶ

ಭಾರತೀಯ ರೈಲ್ವೆ ದೇಶದ ಪ್ರಮುಖ ಸಾರಿಗೆ ವ್ಯವಸ್ಥೆ. ನಮ್ಮ ದೇಶದಲ್ಲಿ ಸಾವಿರಾರು ರೈಲ್ವೆ ನಿಲ್ದಾಣಗಳಿವೆ. ಆದರೆ, ಭಾರತದ ಕೊನೆಯ ರೈಲ್ವೆ ನಿಲ್ದಾಣ ಯಾವುದು ಗೊತ್ತೇ? ಆ ನಿಲ್ದಾಣದ ನಂತರ ಬೇರೊಂದು ದೇಶವೇ ಆರಂಭವಾಗುತ್ತದೆ.

Read Full Story
01:43 PM (IST) Jul 03

India News Live 3rd July: ಎರಡು ವಾರದಲ್ಲೇ ಭಾರಿ ಏರಿಕೆ ಕಂಡ ಚಿನ್ನದ ದರ - ಬೆಂಗಳೂರಿನಲ್ಲಿ ರೇಟ್​ ಎಷ್ಟಾಗಿದೆ ನೋಡಿ

ಜೂನ್‌ನಲ್ಲಿ ಕುಸಿತ ಕಂಡಿದ್ದ ಚಿನ್ನದ ದರವು ಕಳೆದ ಹತ್ತು ದಿನಗಳಲ್ಲಿ ಮತ್ತೆ ಗಣನೀಯವಾಗಿ ಏರಿಕೆಯಾಗಿದೆ. ಯುಎಸ್ ಫೆಡರಲ್ ರಿಸರ್ವ್ ಹೇಳಿಕೆಯ ನಂತರ, 24, 22, ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳು ಭಾರತದಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಳವನ್ನು ಕಂಡಿವೆ.
Read Full Story
01:31 PM (IST) Jul 03

India News Live 3rd July: ಭಾರತ, ಮಲೇಷ್ಯಾ, ಸಿಂಗಾಪುರ ನಡುವೆ ಬೃಹತ್ ಕಡಲಾಳದ ಕೇಬಲ್ ಯೋಜನೆ; ಮೈಕ್ರೋಸಾಫ್ಟ್, ಟಾಟಾದಿಂದ ಜಂಟಿ ನಿರ್ಮಾಣ

ಮೈಕ್ರೋಸಾಫ್ಟ್, ಟಾಟಾ ಕಮ್ಯುನಿಕೇಷನ್ಸ್ ಒಳಗೊಂಡ ಜಾಗತಿಕ ಒಕ್ಕೂಟವು ಭಾರತ, ಮಲೇಷ್ಯಾ ಮತ್ತು ಸಿಂಗಾಪುರವನ್ನು ಸಂಪರ್ಕಿಸುವ 'ಐ-2ಎಸ್‌ಇಎ' ಎಂಬ ಹೊಸ ಸಬ್‌ಮರೀನ್ ಕೇಬಲ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. .

Read Full Story
01:15 PM (IST) Jul 03

India News Live 3rd July: ಜು.4ರಿಂದ Amazon Prime Day Sale, ಭರ್ಜರಿ ಆಫರ್‌ನೊಂದಿಗೆ ನಿಮ್ಮ ನೆಚ್ಚಿನ 'ಯೆಜ್ಡಿ ಸ್ಕ್ರಾಂಬ್ಲರ್' ಎಂಟ್ರಿ!

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್, ತನ್ನ ಜನಪ್ರಿಯ 'ಯೆಜ್ಡಿ ಸ್ಕ್ರಾಂಬ್ಲರ್' ಬೈಕ್ ಅನ್ನು ಅಮೆಜಾನ್ ಪ್ರೈಮ್ ಡೇ 2026 ಸೇಲ್‌ನಲ್ಲಿ ಮಾರಾಟಕ್ಕಿಟ್ಟಿದೆ. ಜುಲೈ 4 ರಿಂದ 6 ರವರೆಗೆ ಲಭ್ಯವಿರುವ ಈ ಬೈಕ್ ಅನ್ನು ಗ್ರಾಹಕರು ನೋ ಕಾಸ್ಟ್ ಇಎಂಐ ಮತ್ತು ಇನ್‌ಸ್ಟಂಟ್ ಡಿಸ್ಕೌಂಟ್‌ನಂತಹ ಆಕರ್ಷಕ ಆಫರ್‌ .

Read Full Story