ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ, ಫೈಜಾಬಾದ್ ಜಿಲ್ಲಾ ವಕೀಲರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕನ್ನಡಿಗ ಗೋಪಾಲ್ ರಾವ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹ. ಪ್ರತಿಭಟನೆ ವೇಳೆ ಬ್ಯಾರಿಕೇಡ್ ಜಿಗಿದು ಜೈ ಶ್ರೀರಾಂ ಘೋಷಣೆ.
- Home
- News
- India News
- National News Live: ಅಯೋಧ್ಯ ಅಕ್ರಮ - ಬೀದಿಗಿಳಿದ ವಕೀಲರು; ಕನ್ನಡಿಗ ಗೋಪಾಲ್ ಸೇರಿ ಮೂವರ ವಿರುದ್ಧ ಎಫ್ಐಆರ್ಗೆ ಪಟ್ಟು! ಪ್ರತಿಭಟನೆ ವೇಳೆ ಜೈ ಶ್ರೀರಾಂ ಘೋಷಣೆ
National News Live: ಅಯೋಧ್ಯ ಅಕ್ರಮ - ಬೀದಿಗಿಳಿದ ವಕೀಲರು; ಕನ್ನಡಿಗ ಗೋಪಾಲ್ ಸೇರಿ ಮೂವರ ವಿರುದ್ಧ ಎಫ್ಐಆರ್ಗೆ ಪಟ್ಟು! ಪ್ರತಿಭಟನೆ ವೇಳೆ ಜೈ ಶ್ರೀರಾಂ ಘೋಷಣೆ

ನವದೆಹಲಿ (ಜು.3): ರಾಮಮಂದಿರ ದೇಣಿಗೆ ಕದ್ದ ಆರೋಪಿಗಳ ಪರ ವಕಾಲತ್ತಿನಿಂದ ಹಿಂದೆ ಸರಿದಿದ್ದ ಫೈಜಾಬಾದ್ (ಅಯೋಧ್ಯೆ) ಜಿಲ್ಲಾ ವಕೀಲರು ಗುರುವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್ನ ನಿರ್ಗಮಿತ ಪ್ರಧಾನ ಕಾರ್ಯದರ್ಶಿ -ಚಂಪತ್ ರಾಯ್, ನಿರ್ಗಮಿತ ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಕನ್ನಡಿಗ ಟ್ರಸ್ಟಿ ಗೋಪಾಲ್ ರಾವ್ ವಿರುದ್ಧ ಎಫ್ಐಆರ್ ದಾಖಲಿಸಲು ಆಗ್ರಹಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 3rd July: ಅಯೋಧ್ಯ ಅಕ್ರಮ - ಬೀದಿಗಿಳಿದ ವಕೀಲರು; ಕನ್ನಡಿಗ ಗೋಪಾಲ್ ಸೇರಿ ಮೂವರ ವಿರುದ್ಧ ಎಫ್ಐಆರ್ಗೆ ಪಟ್ಟು! ಪ್ರತಿಭಟನೆ ವೇಳೆ ಜೈ ಶ್ರೀರಾಂ ಘೋಷಣೆ
India News Live 3rd July: 'ಟೀಂ ಇಂಡಿಯಾ ಕೇವಲ...' - ಐರ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಭಾರತ ತಂಡದ ಬಗ್ಗೆ ಪಾಕ್ ಕೋಚ್ ಅಚ್ಚರಿಯ ಹೇಳಿಕೆ..!
ಬೆಂಗಳೂರು: ಇತ್ತೀಚೆಗಷ್ಟೇ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಟಿ20 ತಂಡವು ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಟಿ20 ಸರಣಿ ವೈಟ್ವಾಷ್ ಅನುಭವಿಸಿತ್ತು. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಹೆಡ್ ಕೋಚ್ ಮೈಕ್ ಹೆಸ್ಸನ್, ಟೀಂ ಇಂಡಿಯಾ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
India News Live 3rd July: ಬೆಂಗಳೂರಿನ ನರ್ಸ್ ಸೇರಿ ಇಬ್ಬರಿಂದ ಹೃದಯಾಘಾತ ಆದವನ ರಕ್ಷಣೆ
India News Live 3rd July: FIFA World Cup 2026: 0-2ರಿಂದ 3-2ಕ್ಕೆ! ಸೆನೆಗಲ್ಗೆ ಶಾಕ್ ನೀಡಿ ಪ್ರಿ ಕ್ವಾರ್ಟರ್ಗೆ ಲಗ್ಗೆ ಇಟ್ಟ ಬೆಲ್ಜಿಯಂ
ಸೆನೆಗಲ್ ವಿರುದ್ಧ 0-2 ಗೋಲುಗಳಿಂದ ಹಿನ್ನಡೆಯಲ್ಲಿದ್ದ ಬೆಲ್ಜಿಯಂ, ಪಂದ್ಯದ ಕೊನೆಯ ನಿಮಿಷಗಳಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ 3-2 ಅಂತರದಲ್ಲಿ ಜಯಗಳಿಸಿ ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿತು. ಇನ್ನೊಂದು ಪಂದ್ಯದಲ್ಲಿ, ಬೋಸ್ನಿಯಾ ವಿರುದ್ಧ 2-0 ಅಂತರದಲ್ಲಿ ಗೆದ್ದ ಅಮೆರಿಕ ಕೂಡ ಅಂತಿಮ 16ರ ಸುತ್ತಿಗೆ ಲಗ್ಗೆ ಇಟ್ಟಿದೆ.