12:41 PM (IST) Jul 19

India News Live 19th July: ಹಾಕಿದ ಬಂಡವಾಳ ಒಂದೇ ತಿಂಗಳಲ್ಲಿ ವಾವಸ್​ - ಕೆಲ್ಸ ಬಿಟ್ಟು ಟೀ ಅಂಗಡಿ ಇಟ್ಟ ಯುವಕನ ಇನ್​ಸ್ಪೈರಿಂಗ್​ ಸ್ಟೋರಿ

₹38,000 ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಂತ ಚಹಾ ಅಂಗಡಿ ಆರಂಭಿಸಿದ ಯುವಕನೊಬ್ಬನ ಸ್ಪೂರ್ತಿದಾಯಕ ಕಥೆಯಿದು. ಕೇವಲ ₹2 ಲಕ್ಷ ಹೂಡಿಕೆಯಿಂದ ತಿಂಗಳಿಗೆ ₹1 ಲಕ್ಷ ನಿವ್ವಳ ಲಾಭ ಗಳಿಸಿ, ಇದೀಗ ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

Read Full Story
12:32 PM (IST) Jul 19

India News Live 19th July: ಟ್ಯಾಟೂ ಪಾರ್ಲರ್‌ನ ಸಣ್ಣ ನಿರ್ಲಕ್ಷ್ಯಕ್ಕೆ ಯುವತಿಯ ಬದುಕು ಕತ್ತಲು; ಹಚ್ಚೆ ಹಾಕಿಸಿಕೊಂಡ ಬೆನ್ನಲ್ಲೇ HIV ಪಾಸಿಟಿವ್!

ದೆಹಲಿಯ ಟ್ಯಾಟೂ ಪಾರ್ಲರ್‌ನಲ್ಲಿ ಹಚ್ಚೆ ಹಾಕಿಸಿಕೊಂಡ ಕಾನ್ಪುರದ ಮಹಿಳೆಯೊಬ್ಬರಿಗೆ ಎಚ್‌ಐವಿ ಸೋಂಕು ತಗುಲಿದೆ. ಸೋಂಕಿತ ಸೂಜಿಯ ಬಳಕೆಯೇ ಇದಕ್ಕೆ ಕಾರಣವೆಂದು ವೈದ್ಯರು ಶಂಕಿಸಿದ್ದು, ಮಹಿಳೆಗೆ ಎಆರ್‌ಟಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story
12:11 PM (IST) Jul 19

India News Live 19th July: Ramayana-Pratham Sankalp - ಯಶ್ & ಟೀಂ ಬಿಗ್ ಪ್ಲಾನ್.. 'ರಾಮಾಯಣ' ಸಿನಿಮಾದ 'ಪ್ರಥಮ ಸಂಕಲ್ಪ' ಎಂದರೇನು?

ನಮಿತ್ ಮಲ್ಹೋತ್ರಾರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್‌ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ‘ರಾಮಾಯಣ’ ಸಿನಿಮಾ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. ನಿತೇಶ್ ತಿವಾರಿ ನಿರ್ದೇಶಕರು..

Read Full Story
12:05 PM (IST) Jul 19

India News Live 19th July: EPFO Alert - ಪಿಎಫ್ ಖಾತೆಯಲ್ಲಿ ತಕ್ಷಣವೇ ಪ್ರೊಫೈಲ್ ಫೋಟೋ ಅಪ್‌ಡೇಟ್ ಮಾಡಿ; ಇಲ್ಲದಿದ್ದರೆ ಕ್ಲೇಮ್ ಕಷ್ಟವಾಗಬಹುದು

ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್ ಖಾತೆಯ ಪ್ರೊಫೈಲ್ ಫೋಟೋವನ್ನು ಅಪ್‌ಡೇಟ್‌ ಮಾಡುವುದು ಅತ್ಯಗತ್ಯ. ಇ-ನಾಮಿನೇಷನ್, ಪಿಎಫ್ ಕ್ಲೇಮ್‌ನಂತಹ ಆನ್‌ಲೈನ್ ಸೇವೆಗಳ ಪರಿಶೀಲನೆಗೆ ಇದು ಸಹಕಾರಿಯಾಗಿದೆ. ಮನೆಯಲ್ಲೇ ಕುಳಿತು ಯುನಿಫೈಡ್ ಮೆಂಬರ್ ಪೋರ್ಟಲ್ ಮೂಲಕ ಫೋಟೋವನ್ನು ಸುಲಭವಾಗಿ ಬದಲಾಯಿಸಬಹುದು.

Read Full Story
11:41 AM (IST) Jul 19

India News Live 19th July: ಗೋಲುಗಳ ಸುರಿಮಳೆ! ಫ್ರಾನ್ಸ್ ಮಣಿಸಿದ ಇಂಗ್ಲೆಂಡ್‌ಗೆ ಫಿಫಾ ವಿಶ್ವಕಪ್‌ನಲ್ಲಿ 3ನೇ ಸ್ಥಾನ!

ಫಿಫಾ ವಿಶ್ವಕಪ್ 2026ರ ಮೂರನೇ ಸ್ಥಾನಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್, ಫ್ರಾನ್ಸ್ ತಂಡವನ್ನು 6-4 ಗೋಲುಗಳಿಂದ ಸೋಲಿಸಿತು. ಇಂಗ್ಲೆಂಡ್ ಪರ ಬುಕಾಯೊ ಸಾಕಾ ಹ್ಯಾಟ್ರಿಕ್ ಸಾಧಿಸಿದರೆ, ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಎರಡು ಗೋಲು ಗಳಿಸಿ ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ಟಾಪ್ ಸ್ಕೋರರ್ ಆದರು.
Read Full Story
11:24 AM (IST) Jul 19

India News Live 19th July: ಪತಂಜಲಿ ಸಾಮ್ರಾಜ್ಯದ ಮೇಲೆ ಕುಮಾರ್ ವಿಶ್ವಾಸ್ ಕಣ್ಣು; ಉತ್ತರಾಧಿಕಾರಿ ಪಟ್ಟಕ್ಕೆ ಬಾಬಾ ರಾಮದೇವ್ ಇಟ್ಟ ಷರತ್ತೇನು?

'ರಾಮಾಯಣಂ' ಚಿತ್ರದ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮದೇವ್ ಮತ್ತು ಕವಿ ಕುಮಾರ್ ವಿಶ್ವಾಸ್ ನಡುವೆ ಸ್ವಾರಸ್ಯಕರ ಮಾತುಕತೆ ನಡೆದಿದೆ. ಪತಂಜಲಿ ಸಂಸ್ಥೆಯ ಉತ್ತರಾಧಿಕಾರಿಯಾಗಲು ಕುಮಾರ್ ವಿಶ್ವಾಸ್ ಬಯಸಿದ್ದಾರೆ ಎಂದು ರಾಮದೇವ್ ತಮಾಷೆ ಮಾಡಿದ್ದಾರೆ.

Read Full Story
11:00 AM (IST) Jul 19

India News Live 19th July: ಒಂದೂವರೆ ವರ್ಷದ ಪ್ರಶಸ್ತಿ ಬರ ನೀಗಿಸಿಕೊಂಡ ಪಿವಿ ಸಿಂಧು - ಜಪಾನ್ ಓಪನ್ ಮುಡಿಗೇರಿಸಿಕೊಂಡ ಭಾರತದ ಮೊದಲ ಷಟ್ಲರ್‌!

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಜಪಾನ್ ಓಪನ್ 2026 ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಫೈನಲ್‌ನಲ್ಲಿ ಅಕಾನೆ ಯಮಗುಚಿ ಅವರನ್ನು ಸೋಲಿಸಿ 19 ತಿಂಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡರು.
Read Full Story
09:45 AM (IST) Jul 19

India News Live 19th July: ಗೌತಮ್‌ ಗಂಭೀರ್‌ರನ್ನು ಕೋಚ್ ಆಗಿ ಟೀಂ ಇಂಡಿಯಾಗೆ ಕರೆತಂದಿದ್ದೇ ರೋಹಿತ್ ಶರ್ಮಾ! ಆಗೊಂದು ಡಿಮ್ಯಾಂಡ್ ಇಟ್ಟಿದ್ದ ಗೌತಿ

ಟೀಂ ಇಂಡಿಯಾ ಕೋಚ್ ಆಗುವಂತೆ ಗೌತಮ್ ಗಂಭೀರ್ ಅವರನ್ನು ರೋಹಿತ್ ಶರ್ಮಾ ಆಹ್ವಾನಿಸಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಇಬ್ಬರ ನಡುವಿನ ಸಂಬಂಧ ಹಳಸಿದ್ದು, ಪರಸ್ಪರ ನಂಬಿಕೆ ಮುರಿದುಬಿದ್ದಿದೆ ಎಂದು ವರದಿಗಳು ಹೇಳುತ್ತಿವೆ. ರೋಹಿತ್ ಅವರ ನಿವೃತ್ತಿ ಚಿಂತನೆ ಮತ್ತು ಹೇಳಿಕೆಗಳು ಈ ಬಿರುಕಿಗೆ ಕಾರಣವಾಗಿವೆ.
Read Full Story
08:54 AM (IST) Jul 19

India News Live 19th July: ನೇಪಾಳ ಎಮ್ಮೆಗಳಿಗೆ ಭಾರತದ ಕೋಣಗಳ ವೀರ್ಯದಾನ!

ಭಾರತವು ನೇಪಾಳಕ್ಕೆ 50,000 ಡೋಸ್ ಮುರ್ರಾ ಕೋಣಗಳ ವೀರ್ಯವನ್ನು ದಾನವಾಗಿ ನೀಡಿದೆ. ಈ ಯೋಜನೆಯು ನೇಪಾಳದಲ್ಲಿ ಉನ್ನತ ತಳಿಯ ಎಮ್ಮೆಗಳನ್ನು ಉತ್ಪಾದಿಸಿ, ಹಾಲಿನ ಇಳುವರಿಯನ್ನು ಹೆಚ್ಚಿಸುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ನೆರವಾಗುವ ಗುರಿ ಹೊಂದಿದೆ.
Read Full Story
08:52 AM (IST) Jul 19

India News Live 19th July: 'ವೈಶು ಕಥೆ ಮುಗಿಯಿತು' - ಮಾಜಿ ಪ್ರೇಯಸಿಯ ಚುಚ್ಚಿಚುಚ್ಚಿ ಕೊಂದ! ಲೈವ್‌ನಲ್ಲೇ ಚೀರಾಟ ಕೇಳಿಸಿಕೊಂಡ ಭಾವಿ ಪತಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿ, ತನ್ನ ಮಾಜಿ ಪ್ರೇಯಸಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾದ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಯುವಕನೊಬ್ಬ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಕೊಲೆಯಾಗುವ ಮುನ್ನ ಯುವತಿ ತನ್ನ ಭಾವಿ ಪತಿಗೆ ಫೋನ್ ಮಾಡಿದ್ದು, ಆತ ಇಡೀ ವಾಗ್ವಾದವನ್ನು ಫೋನ್‌ನಲ್ಲಿ ಕೇಳಿಸಿಕೊಂಡಿದ್ದಾನೆ.

Read Full Story
08:21 AM (IST) Jul 19

India News Live 19th July: ಅರ್ಜೆಂಟೀನಾ ಅಬ್ಬರ Vs ಸ್ಪೇನ್ ಗೋಡೆ; FIFA ವಿಶ್ವಕಪ್ ಫೈನಲ್‌ನಲ್ಲಿ ಗೆಲ್ಲೋರು ಯಾರು?

23ನೇ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗಲಿವೆ. ಲಿಯೋನಲ್ ಮೆಸ್ಸಿ ನೇತೃತ್ವದ ಅನುಭವಿ ಅರ್ಜೆಂಟೀನಾ ತಂಡದ ಅಬ್ಬರದ ಆಟಕ್ಕೆ, ಲ್ಯಾಮಿನೆ ಯಮಲ್ ಎಂಬ ಯುವ ಪ್ರತಿಭೆಯುಳ್ಳ ಸ್ಪೇನ್‌ನ ಬಲಿಷ್ಠ ಡಿಫೆನ್ಸ್ ಸವಾಲೊಡ್ಡಲಿದೆ.
Read Full Story
07:53 AM (IST) Jul 19

India News Live 19th July: ₹100 ಕೋಟಿ ಮೌಲ್ಯದ ಆಸ್ತಿ 2 ಕೋಟಿಗೆ ಸೇಲ್‌, ಪಳನಿ ದೇಗುಲದಲ್ಲೂ ಅಕ್ರಮದ ಆರೋಪ

ತಮಿಳುನಾಡಿನ ಪಳನಿ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲಕ್ಕೆ ಸೇರಿದ ₹100 ಕೋಟಿ ಮೌಲ್ಯದ ಜಮೀನನ್ನು ಕೇವಲ ₹2 ಕೋಟಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬೃಹತ್ ಹಗರಣದ ಸಂಬಂಧ ಸಬ್‌ ರಿಜಿಸ್ಟ್ರಾರ್‌ ಸೇರಿದಂತೆ ಹಲವರ ಮೇಲೆ ಸಿಬಿ-ಸಿಐಡಿ ದಾಳಿ ನಡೆಸಿದೆ.

Read Full Story