MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Yash-Ramayana: ರಾಮಾಯಣ ಸಿನಿಮಾದಿಂದ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು: ರಾಕಿಂಗ್ ಸ್ಟಾರ್ ಯಶ್

Yash-Ramayana: ರಾಮಾಯಣ ಸಿನಿಮಾದಿಂದ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು: ರಾಕಿಂಗ್ ಸ್ಟಾರ್ ಯಶ್

ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ಯಶ್, ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, "ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ" ಎಂದರು.

2 Min read
Author : Shriram Bhat
Published : Jul 19 2026, 01:28 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ದೆಹಲಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ದರ್ಬಾರ್: ‘ರಾಮಾಯಣ’ದ ಮೂಲಕ ವಿಶ್ವವನ್ನೇ ಗೆಲ್ಲಲು ಹೊರಟ ರಾಕಿ ಭಾಯ್ ಅಬ್ಬರ!

ಬಾಕ್ಸ್ ಆಫೀಸ್ ಸುಲ್ತಾನ್, ಕನ್ನಡಿಗರ ಹೆಮ್ಮೆಯ 'ರಾಕಿಂಗ್ ಸ್ಟಾರ್' ಯಶ್ (Yash) ಈಗ ಕೇವಲ ಸ್ಯಾಂಡಲ್‌ವುಡ್ ಅಥವಾ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ 'ಜಾಗತಿಕ ರಾಯಭಾರಿ' ಆಗುತ್ತಿದ್ದಾರೆ. ದೆಹಲಿಯಲ್ಲಿ ನಡೆದ 'ರಾಮಾಯಣ' (Ramayana) ಸಿನಿಮಾದ ಭವ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಯಶ್ ತಮ್ಮ ಮಾತಿನ ಮೂಲಕವೇ ಇಡೀ ದೇಶದ ಗಮನ ಸೆಳೆದಿದ್ದಾರೆ. ಇದು ಕೇವಲ ಒಂದು ಸಿನಿಮಾ ಅಲ್ಲ, ಇದು ಭಾರತದ ಅಸ್ಮಿತೆಯ 'ಪ್ರಥಮ ಸಂಕಲ್ಪ' ಎಂಬುದು ಯಶ್ ಅವರ ಮಾತಿನ ಧಾಟಿಯಲ್ಲಿ ಎದ್ದು ಕಾಣುತ್ತಿತ್ತು. ಜೊತೆಗೆ, ತಮ್ಮ ಮಾತೃಭಾಷೆ ಕನ್ನಡದಲ್ಲಿಯೇ ಮಾತು ಶುರುಮಾಡಿದ್ದು 'ಬೇರು ಮರೆಯದ' ಅವರ ಗುಣವನ್ನು ಎತ್ತಿ ತೋರಿಸುತ್ತಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Asianet News

ಹಿಂದಿಯಲ್ಲಿ ಮಾತಾಡಿ ಮನಗೆದ್ದ ಯಶ್!

ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿರುವ ಯಶ್, ಈ ಸಿನಿಮಾ ತಮಗೆ ವೈಯಕ್ತಿಕವಾಗಿ ಎಷ್ಟು ಹತ್ತಿರ ಎಂಬ ಗುಟ್ಟನ್ನು ಬಿಟ್ಟುಕೊಟ್ಟರು. ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, "ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ" ಎನ್ನುತ್ತಾ ಅಭಿಮಾನಿಗಳ ಹೃದಯ ಗೆದ್ದರು. "ರಾಮಾಯಣ ಸಿನಿಮಾದಲ್ಲಿ ನಟಿಸುವುದು ಒಂದು ವೃತ್ತಿಪರ ಕೆಲಸ ಮಾತ್ರವಲ್ಲ, ಇದು ನನ್ನ ಜೀವನದ ಮರೆಯಲಾಗದ ಪಯಣ. ನನಗೆ ಈ ಪಾತ್ರ ನೀಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ನಾನು ಚಿರಋಣಿ. ಈ ಸಿನಿಮಾದ ನೆಪದಲ್ಲಿ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು" ಎಂದು ಸಂಭ್ರಮದಿಂದ ನುಡಿದರು. ಸಾಧ್ಯವಾದಷ್ಟೂ ಹಿಂದಿಯಲ್ಲಿ ಮಾತನ್ನಾಡಿ ಗಮನಸೆಳೆದರು.

Related Articles

Related image1
Ramayana-Pratham Sankalp: ಯಶ್ & ಟೀಂ ಬಿಗ್ ಪ್ಲಾನ್.. 'ರಾಮಾಯಣ' ಸಿನಿಮಾದ 'ಪ್ರಥಮ ಸಂಕಲ್ಪ' ಎಂದರೇನು?
Related image2
Ramayana Event: ದೆಹಲಿ ನೆಲದಲ್ಲಿ ನಿಂತು ಕನ್ನಡದಲ್ಲೇ ಮಾತು ಆರಂಭಿಸಿದ ಯಶ್ 'ರಾಮಾಯಣ ಈವೆಂಟ್'ನಲ್ಲಿ ಹೇಳಿದ್ದೇನು?
35
Image Credit : Asianet News

ವಿಶ್ವದ ವೇದಿಕೆಯಲ್ಲಿ ಶ್ರೀರಾಮನ ವೈಭವ

"ಇದು ಕೇವಲ ನಮ್ಮ ಸಿನಿಮಾ ಅಲ್ಲ, ಇದು ಭಾರತದ ಕನಸು" ಎಂದ ಯಶ್, ರಾಮಾಯಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವನ್ನು ವಿವರಿಸಿದರು. "ನಾವೆಲ್ಲರೂ ಒಂದೇ ದೃಢ ನಿಶ್ಚಯದೊಂದಿಗೆ ಒಂದಾಗಿದ್ದೇವೆ. ನಮ್ಮ ದೇಶದ ಶ್ರೇಷ್ಠ ಇತಿಹಾಸ ಮತ್ತು ಪ್ರಭು ಶ್ರೀರಾಮನ ಕಥೆಯನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸುವುದು ನಮ್ಮ ಗುರಿ. ಈ ಮಹತ್ಕಾರ್ಯಕ್ಕಾಗಿ ನಾವೆಲ್ಲರೂ ನಮ್ಮ ವೈಯಕ್ತಿಕ ಆಸೆಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದೇವೆ" ಎಂದು ಹೇಳುವಾಗ ಅವರ ಕಣ್ಣಿನಲ್ಲಿ ಒಂದು ವಿಶಿಷ್ಟ ಹೊಳಪಿತ್ತು. ನಿರ್ದೇಶಕ ನಿತೇಶ್ ತಿವಾರಿ ಅವರ ಮಾರ್ಗದರ್ಶನಕ್ಕೆ ಯಶ್ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

45
Image Credit : Asianet News

ಸಹನಟರ ಬಗ್ಗೆ ಮೆಚ್ಚುಗೆಯ ಸುರಿಮಳೆ

ಇನ್ನು ಸಹನಟರ ಬಗ್ಗೆ ಮಾತನಾಡುವಾಗ ಯಶ್ ಅವರ ದೊಡ್ಡಗುಣ ಎದ್ದು ಕಾಣುತ್ತಿತ್ತು. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರನ್ನು ಶ್ಲಾಘಿಸಿದ ಯಶ್, "ರಣಬೀರ್, ನೀವು ಅದ್ಭುತ! ಈ ಪಾತ್ರಕ್ಕಾಗಿ ನೀವು ನಿಮ್ಮನ್ನು ಅರ್ಪಿಸಿಕೊಂಡ ರೀತಿ ಮತ್ತು ನೀವು ಸೃಷ್ಟಿಸಿರುವ ಮ್ಯಾಜಿಕ್ ಅನ್ನು ಇಡೀ ಭಾರತ ಸಂಭ್ರಮಿಸಲಿದೆ" ಎಂದರು. ಹಾಗೆಯೇ ಸಾಯಿ ಪಲ್ಲವಿ ಅವರ ಬಗ್ಗೆ ಮಾತನಾಡುತ್ತಾ, "ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರ ಅಭಿನಯ ನೋಡೋದೆ ಒಂದು ಹಬ್ಬ. ಅವರ ಕಣ್ಣುಗಳೇ ಎಲ್ಲವನ್ನೂ ಹೇಳುತ್ತವೆ" ಎಂದು ಬಣ್ಣಿಸಿದರು. ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಹಿರಿಯ ನಟಿ ಶೋಭನಾ ಅವರ ಪಾತ್ರಗಳೂ ಈ ಸಿನಿಮಾದ ತೂಕವನ್ನು ಹೆಚ್ಚಿಸಿವೆ ಎಂದು ಯಶ್ ಸ್ಮರಿಸಿದರು. ಲಕ್ಷ್ಮಣ ಪಾತ್ರಧಾರಿ ಹಾಗೂ ಇಡೀ ತಾರಾಗಣವನ್ನು ಮೆಚ್ಚಿ ಮಾತನ್ನಾಡಿದರು.

55
Image Credit : Asianet News

ನಕ್ಷತ್ರ ಪುಂಜಗಳ ಸಮಾಗಮ

ದೆಹಲಿಯ ಈ ಕಾರ್ಯಕ್ರಮದಲ್ಲಿ ತಾರೆಯರ ದಂಡೇ ನೆರೆದಿತ್ತು. ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ವಿವೇಕ್ ಒಬೆರಾಯ್, ಅರುಣ್ ಗೋವಿಲ್, ಅಜಿಂಕ್ಯಾ ದೇವ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಖ್ಯಾತ ಕವಿ ಕುಮಾರ್ ವಿಶ್ವಾಸ್ ಅವರು ಕಾರ್ಯಕ್ರಮವನ್ನು ಅದ್ಭುತವಾಗಿ ನಿರೂಪಿಸಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ, ಯಶ್ ಅವರ ಈ 'ರಾಮಾಯಣ' ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರಾಕಿಂಗ್ ಸ್ಟಾರ್ ಈಗ ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿಯ ತಾಕತ್ತು ತೋರಿಸಲು ಸಜ್ಜಾಗಿದ್ದಾರೆ. ಇಡೀ ಕನ್ನಡನಾಡು ನಟ ಯಶ್ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಯ ಕನಸುಗಳನ್ನು ಇಟ್ಟುಕೊಂಡು ಅದು ನನಸಾಗಲು ಕಾದು ಕುಳಿತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಯಶ್
ಬಾಲಿವುಡ್
ರಾಮಾಯಣ ಚಲನಚಿತ್ರ
ರಣಬೀರ್ ಕಪೂರ್

Latest Videos
Recommended Stories
Recommended image1
ಹದಗೆಟ್ಟಿತಾ ಸಲ್ಮಾನ್‌ ಖಾನ್‌ ಆರೋಗ್ಯ? ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ ನೋಡಿ ಫ್ಯಾನ್ಸ್‌ ಶಾಕ್‌
Recommended image2
Ramayana Trailer Leak: ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ! ಬಿಡುಗಡೆಗೂ ಮುನ್ನವೇ ಟ್ರೇಲರ್ ಲೀಕ್
Recommended image3
Ramayana-Pratham Sankalp: ಯಶ್ & ಟೀಂ ಬಿಗ್ ಪ್ಲಾನ್.. 'ರಾಮಾಯಣ' ಸಿನಿಮಾದ 'ಪ್ರಥಮ ಸಂಕಲ್ಪ' ಎಂದರೇನು?
Related Stories
Recommended image1
Ramayana-Pratham Sankalp: ಯಶ್ & ಟೀಂ ಬಿಗ್ ಪ್ಲಾನ್.. 'ರಾಮಾಯಣ' ಸಿನಿಮಾದ 'ಪ್ರಥಮ ಸಂಕಲ್ಪ' ಎಂದರೇನು?
Recommended image2
Ramayana Event: ದೆಹಲಿ ನೆಲದಲ್ಲಿ ನಿಂತು ಕನ್ನಡದಲ್ಲೇ ಮಾತು ಆರಂಭಿಸಿದ ಯಶ್ 'ರಾಮಾಯಣ ಈವೆಂಟ್'ನಲ್ಲಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved