09:41 AM (IST) Jun 12

India News Live2 ಇಲಾಖೆಗಳ ವಿರುದ್ಧ 19 ವರ್ಷಗಳ ಹೋರಾಟ, ಬೆಂಗಳೂರಿನ ಆಟೋ ಚಾಲಕನಿಗೆ ₹25 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ

19 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮರದ ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಟೋ ಚಾಲಕನಿಗೆ ಸುಪ್ರೀಂ ಕೋರ್ಟ್ ನ್ಯಾಯ ಒದಗಿಸಿದೆ. ದೀರ್ಘಕಾಲದ ಕಾನೂನು ಹೋರಾಟದ ನಂತರ, ಚಾಲಕನಿಗೆ ಬಡ್ಡಿ ಸಮೇತ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
Read Full Story
09:19 AM (IST) Jun 12

India News Liveಇಂದಿನಿಂದ 10ನೇ ಸೀಸನ್ ಮಹಿಳಾ ಟಿ20 ವಿಶ್ವಕಪ್; ಚಾಂಪಿಯನ್ ತಂಡಕ್ಕೆ ಸಿಗಲಿದೆ ಕೋಟಿ ಕೋಟಿ ಬಹುಮಾನ

ಶುಕ್ರವಾರದಿಂದ 10ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಆರಂಭವಾಗಲಿದ್ದು, ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ನಡೆಯಲಿದೆ. ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ಭಾರತ ತಂಡ, ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ.
Read Full Story
08:40 AM (IST) Jun 12

India News LiveFIFA World Cup - 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಅದ್ಧೂರಿ ಸ್ವಾಗತ

23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಮೆಕ್ಸಿಕೊ ಸಿಟಿಯ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಗಾಯಕಿ ಶಕೀರಾ ಅವರ ಪ್ರದರ್ಶನ ಮತ್ತು ಆಕರ್ಷಕ ಲೈಟ್ ಶೋ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ಈ ಬಾರಿ ಮೂರು ದೇಶಗಳು ಆತಿಥ್ಯ ವಹಿಸುತ್ತಿದ್ದು, ಕೆನಡಾ ಮತ್ತು ಅಮೆರಿಕದಲ್ಲೂ ಪ್ರತ್ಯೇಕ ಉದ್ಘಾಟನಾ ಸಮಾರಂಭಗಳು ನಡೆಯಲಿವೆ.
Read Full Story
08:29 AM (IST) Jun 12

India News Liveಮಹಾರಾಜ ಟ್ರೋಫಿ 2026 ಟ್ರೋಫಿ ಅನಾವರಣ - ಐಪಿಎಲ್ ತಂಡಗಳ ಕಣ್ಣು ಈ ಲೀಗ್ ಮೇಲಿದೆ ಎಂದ ರಾಹುಲ್ ದ್ರಾವಿಡ್

ಕೆಎಸ್‌ಸಿಎ ಆಯೋಜಿಸುತ್ತಿರುವ 5ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಟ್ರೋಫಿಯನ್ನು ರಾಹುಲ್ ದ್ರಾವಿಡ್ ಅನಾವರಣಗೊಳಿಸಿದರು. ಜೂನ್ 20 ರಿಂದ ಆರಂಭವಾಗುವ ಈ ಲೀಗ್, ಐಪಿಎಲ್ ತಂಡಗಳು ಪ್ರತಿಭೆಗಳನ್ನು ಗುರುತಿಸಲು ಒಂದು ಪ್ರಮುಖ ವೇದಿಕೆಯಾಗಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.
Read Full Story
08:05 AM (IST) Jun 12

India News Live'ಇಂಧನ ಮಾರುಕಟ್ಟೆಯನ್ನೇ ಉಡೀಸ್ ಮಾಡ್ತೇವೆ' ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು

https://kannada.asianetnews.com/world-news/we-will-blow-up-the-energy-market-ran-warns-us-president-trump-rav/articleshow-gfs9smi