11:17 PM (IST) Mar 02

India Latest News Live:ಹಾರ್ಮುಜ್ ಜಲಸಂಧಿ ದಾಟದ ತೈಲ ಹಡಗು - ಭಾರತ ಸೇರಿದಂತೆ ಜಗತ್ತಿಗೆ ಕಾದಿದೆಯೇ ಪೆಟ್ರೋಲ್, ಗ್ಯಾಸ್ ಸಂಕಷ್ಟ?

ವಿಶ್ವದ ಶೇ. 20-30ರಷ್ಟು ತೈಲ ಸಾಗಿಸುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸುಳಿವನ್ನು ಇರಾನ್ ನೀಡಿದೆ. ಈ ಕಿರಿದಾದ ಸಮುದ್ರ ಮಾರ್ಗ ಬಂದ್ ಆದರೆ, ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿ ಜಾಗತಿಕ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. 

Read Full Story
10:54 PM (IST) Mar 02

India Latest News Live:ಇರಾನ್‌ ಬಳಿಕ ಮತ್ತೊಂದು ದೇಶದ ಮೇಲೆ ದಾಳಿ ಮಾಡುವ ಸುಳಿವು ನೀಡಿದ ಅಮೆರಿಕ!

After Iran, Is Cuba Donald Trump's Next Target? US Senator Reveals ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಟ್ರಂಪ್ ಆಡಳಿತವು ಈಗ ಕ್ಯೂಬಾವನ್ನು ಗುರಿಯಾಗಿಸಿಕೊಂಡಿದೆ ಎಂದು ಅಮೆರಿಕದ ಸಂಸದ ಲಿಂಡ್ಸೆ ಗ್ರಹಾಂ ಬಹಿರಂಗಪಡಿಸಿದ್ದಾರೆ. 

Read Full Story
10:35 PM (IST) Mar 02

India Latest News Live:ಇರಾನ್‌ಗೆ ಆಸರೆಯಾದ ರಷ್ಯಾದ ಗೇಮ್‌ಚೇಂಜರ್‌ ಅಸ್ತ್ರ; 18 ಲಕ್ಷದ ಡ್ರೋನ್‌ ಮೂಲಕ 818 ಕೋಟಿಯ ಯುದ್ಧವಿಮಾನ ಉಡೀಸ್‌!

ಮಧ್ಯಪ್ರಾಚ್ಯದಲ್ಲಿ ಇರಾನ್ ತನ್ನ ಅಪಾಯಕಾರಿ 'ಷಾಹೆದ್-136' ಡ್ರೋನ್‌ಗಳನ್ನು ಬಳಸಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಕಡಿಮೆ ವೆಚ್ಚದಲ್ಲಿ ತಯಾರಾಗುವ ಈ ಡ್ರೋನ್‌ಗಳು ಭಾರಿ ಹಾನಿ ಉಂಟುಮಾಡುತ್ತಿದೆ.

Read Full Story
10:04 PM (IST) Mar 02

India Latest News Live:ಐಫೋನ್ 17e ರಿಲೀಸ್‌ - ಕೇವಲ ₹64,900ಕ್ಕೆ ಲಭ್ಯ! ಸ್ಯಾಟಲೈಟ್ ಫೀಚರ್ ಮತ್ತು ಸೂಪರ್ ಫಾಸ್ಟ್ A19 ಚಿಪ್!

ಆಪಲ್ ತನ್ನ ಬಹುನಿರೀಕ್ಷಿತ 'ಐಫೋನ್ 17' ಸರಣಿಯಲ್ಲಿ 'iPhone 17e' ಎಂಬ ಹೊಸ, ಕಡಿಮೆ ಬೆಲೆಯ ಮಾದರಿಯನ್ನು ಪರಿಚಯಿಸಿದೆ. ಈ ಫೋನ್ A19 ಚಿಪ್, 48MP ಕ್ಯಾಮೆರಾ, ಮತ್ತು ಸೆರಾಮಿಕ್ ಶೀಲ್ಡ್ 2 ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ₹64,900 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
Read Full Story
09:24 PM (IST) Mar 02

India Latest News Live:ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿ ಸಾವನ್ನು ಭಾರತ ಖಂಡಿಸಿಲ್ಲವೇಕೆ ? - ಇಲ್ಲಿದೆ ಹಲವು ಕಾರಣ

ಇರಾನ್ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಭಾರತ ಸರ್ಕಾರವು ಸಂತಾಪ ಸೂಚಿಸದೆ ರಾಜತಾಂತ್ರಿಕ ಮೌನವನ್ನು ಕಾಯ್ದುಕೊಂಡಿದೆ. ಭಾರತದ ಈ ವರ್ತನೆ ಹಿಂದೆ ಹಲವು ಕಾರಣಗಳಿದ್ದು, ಅದೇನು ಎಂಬ ಮಾಹಿತಿ ಇಲ್ಲಿದೆ.

Read Full Story
08:06 PM (IST) Mar 02

India Latest News Live:ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!

ನಟ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನಟಿ ತ್ರಿಶಾ ಜೊತೆಗಿನ ಸಂಬಂಧವನ್ನು ಆರೋಪಿಸಿದ್ದಾರೆ. ಈ ಬೆಳವಣಿಗೆಯು ತ್ರಿಶಾ ಮತ್ತು ಮಾಜಿ ಸಿಎಂ ಜಯಲಲಿತಾ ನಡುವಿನ ಸಾಮ್ಯತೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

Read Full Story
07:58 PM (IST) Mar 02

India Latest News Live:ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ - ಗಂಡ ಹೆಂಡತಿ ಮಧ್ಯೆ ವಯಸ್ಸಿಗಿಂತ ಮನಸ್ಸಿನ ಅಂತರ ಕಡಿಮೆ ಮಾಡಿಕೊಳ್ಳೋದು ಹೇಗೆ

ಪ್ರೀತಿಗೆ ವಯಸ್ಸಿನ ಹಂಗಿಲ್ಲವಾದರೂ, ದಂಪತಿಗಳ ನಡುವಿನ ದೊಡ್ಡ ವಯಸ್ಸಿನ ಅಂತರವು ಸಂಬಂಧದಲ್ಲಿ ಹಲವು ಸವಾಲುಗಳನ್ನು ತರಬಹುದು. ಸಂಶೋಧನೆಗಳ ಪ್ರಕಾರ ಆದರ್ಶ ವಯಸ್ಸಿನ ಅಂತರ ಯಾವುದು ಮತ್ತು ವಯಸ್ಸಿನ ವ್ಯತ್ಯಾಸವಿದ್ದರೂ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

Read Full Story
07:24 PM (IST) Mar 02

India Latest News Live:ಇಸ್ರೇಲ್‌ ದಾಳಿಯಲ್ಲಿ ಗಾಯಗೊಂಡಿದ್ದ ಅಯತೊಲ್ಲಾ ಖಮೇನಿ ಪತ್ನಿ ಕೂಡ ಸಾವು!

ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ ನಿಧನರಾಗಿದ್ದಾರೆ. ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Read Full Story
07:04 PM (IST) Mar 02

India Latest News Live:ನಟಿಯ ಮೇಲೆ ಲೈಂಗಿಕ ದೌರ್ಜನ್ಯ, Manjummel Boys ನಿರ್ದೇಶಕ ಅರೆಸ್ಟ್‌!

'ಮಂಜುಮ್ಮಲ್ ಬಾಯ್ಸ್' ಚಿತ್ರದ ನಿರ್ದೇಶಕ ಚಿದಂಬರಂ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಎರಡು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story
06:30 PM (IST) Mar 02

India Latest News Live:ಟಿ20 ವಿಶ್ವಕಪ್ ಸೋತ ಪಾಕ್ ಆಟಗಾರರಿಗೆ ಪಿಸಿಬಿ ಶಾಕ್; ಪ್ರತಿಯೊಬ್ಬ ಪ್ಲೇಯರ್‌ಗೂ ಕೋಟ್ಯಂತರ ದಂಡ!

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲು ವಿಫಲವಾದ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ಪಿಸಿಬಿ 5 ಮಿಲಿಯನ್ ಪಿಕೆಆರ್ ದಂಡ ವಿಧಿಸಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಜಾವೇದ್ ಮಿಯಂದಾದ್, ಮೊಹಮ್ಮದ್ ಯೂಸುಫ್ ಅವರಂತಹ ದಿಗ್ಗಜರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story
06:27 PM (IST) Mar 02

India Latest News Live:Vijay Devarakonda ಮದುವೆ ಬಳಿಕ ತಮ್ಮನಿಗೆ ಭರ್ಜರಿ ಡಿಮಾಂಡ್​ - ಯಾರೀ ಆನಂದ್​? ಮಾಡ್ತಿರೋದು ಏನು?

ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಕೂಡ ಒಬ್ಬ ನಟ. ಅಮೆರಿಕದಲ್ಲಿನ ಉನ್ನತ ಉದ್ಯೋಗವನ್ನು ತ್ಯಜಿಸಿ ನಟನೆಗೆ ಬಂದರೂ, ಅಣ್ಣನಷ್ಟು ಖ್ಯಾತಿ ಗಳಿಸಲಿಲ್ಲ. ಇತ್ತೀಚೆಗೆ ಅತ್ತಿಗೆ ರಶ್ಮಿಕಾ ಮಂದಣ್ಣ ಕುರಿತ ಪೋಸ್ಟ್‌ನಿಂದಾಗಿ ಇವರು ಮತ್ತೆ ಸುದ್ದಿಯಲ್ಲಿದ್ದಾರೆ.
Read Full Story
04:50 PM (IST) Mar 02

India Latest News Live:ಇಸ್ರೇಲ್‌ ಪ್ರಧಾನಿ ನೆತನ್ಯಾಹು ಬದುಕಿರೋದೇ ಡೌಟ್‌? ಪಿಎಂ ಕಚೇರಿ ಮೇಲೆ Kheibar ಕ್ಷಿಪಣಿ ದಾಳಿ ನಡೆಸಿದ ಇರಾನ್‌!

ಇರಾನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಈ ಸಂಘರ್ಷವು ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ್ದು, ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ಹಲವು ಕಡೆ ದಾಳಿಗಳು ನಡೆದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
Read Full Story
04:30 PM (IST) Mar 02

India Latest News Live:ಡೈವೋರ್ಸ್ ಹಂತದಲ್ಲಿ ದಳಪತಿ ವಿಜಯ್-ಸಂಗೀತಾ 27 ವರ್ಷಗಳ ದಾಂಪತ್ಯ; 600 ಕೋಟಿ ಆಸ್ತಿಯಲ್ಲಿ ಪತ್ನಿಗೆ ಸಿಗುವ ಪಾಲೆಷ್ಟು?

ನಟ ವಿಜಯ್ ಪತ್ನಿ ಸಂಗೀತಾ, ವಿವಾಹೇತರ ಸಂಬಂಧ ಆರೋಪದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ, ವಿಜಯ್ ಅವರ 600 ಕೋಟಿ ರೂ. ಆಸ್ತಿಯಲ್ಲಿ ಸಂಗೀತಾ ಅವರಿಗೆ 50% ಪಾಲು ಸಿಗುವುದೇ ಮತ್ತು ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ.

Read Full Story
04:02 PM (IST) Mar 02

India Latest News Live:ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ - ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ

ತನ್ನ ನಾಯಕನ ಹತ್ಯೆಯ ನಂತರ ಇರಾನ್, ಸೌದಿ ಅರೇಬಿಯಾದ ರಾಸ್ ತನುರಾ ತೈಲ ಘಟಕ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಈ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ ಇದರಿಂದ ಜಾಗತಿಕವಾಗಿ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದೆ.

Read Full Story
04:00 PM (IST) Mar 02

India Latest News Live:ಅಣ್ವಸ್ತ್ರ ಸಮರದತ್ತ ಮಧ್ಯಪ್ರಾಚ್ಯ ಫೈಟ್‌, ಇರಾನ್‌ನ ನಟಾನ್ಜ್ ಪರಮಾಣು ಕೇಂದ್ರದ ಮೇಲೆ ಮಿಸೈಲ್‌ ದಾಳಿ?

ಇರಾನ್‌ನ ನಟಾನ್ಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿರುವುದಾಗಿ ಇರಾನ್ ಆರೋಪಿಸಿದೆ. ಆದರೆ, ವಿಶ್ವಸಂಸ್ಥೆಯ ಪರಮಾಣು ಸಂಸ್ಥೆ ಇದನ್ನು ನಿರಾಕರಿಸಿದೆ. ಇದೇ ವೇಳೆ, ಇಬ್ಬರು ಹಿರಿಯ ಇರಾನಿನ ಗುಪ್ತಚರ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಖಚಿತಪಡಿಸಿದೆ.

Read Full Story
03:51 PM (IST) Mar 02

India Latest News Live:ಮದುವೆಯ ಹಲ್ದೀ-ಸಂಗೀತಾ ಕಾರ್ಯಕ್ರಮ ಬಿಟ್ಟು ಲಖನೌ ಜೆರ್ಸಿ ಅನಾವರಣದಲ್ಲಿ ಪಾಲ್ಗೊಂಡ ಅರ್ಜುನ್ ತೆಂಡೂಲ್ಕರ್!

ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೀಗಿರುವಾಗಲೇ ತಮ್ಮ ವೈಯುಕ್ತಿಕ ಜೀವನಕ್ಕಿಂತ ಮಿಗಿಲಾಗಿ ವೃತ್ತಿಜೀವನ ಮುಖ್ಯ ಎನ್ನುವ ಸಂದೇಶ ಸಾರಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

Read Full Story
03:44 PM (IST) Mar 02

India Latest News Live:ತಮ್ಮದೇ ನಾಯಕನ ಸಾವಿಗೆ ಕಾರಣರಾದ ಟ್ರಂಪ್​ಗೆ ಹೃದಯಾಳದ ಧನ್ಯವಾದ - ಆಗಸದಲ್ಲಿ ಥ್ಯಾಂಕ್ಯೂ ಸಂದೇಶ!

ಇರಾನಿನ ಸರ್ವಾಧಿಕಾರಿ ಅಲಿ ಖಮೇನಿ ಅವರ ಸಾವಿಗೆ ಜಗತ್ತಿನಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶೋಕವನ್ನು ಆಚರಿಸಿದರೆ, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಇರಾನಿಗರು ಬೀದಿಗಳಲ್ಲಿ ನೃತ್ಯ ಮಾಡಿ, ಟ್ರಂಪ್‌ಗೆ ಧನ್ಯವಾದ ಸಲ್ಲಿಸುವ ಮೂಲಕ ಸಂಭ್ರಮಿಸಿದ್ದಾರೆ.

Read Full Story
02:54 PM (IST) Mar 02

India Latest News Live:ಅಪ್ಪ ಅಮ್ಮನ ಡಿವೋರ್ಸ್‌ ಗಲಾಟೆ ಮಧ್ಯೆ ಅಪ್ಪ ದಳಪತಿ ವಿಜಯ್ ಅನ್‌ಫಾಲೋ ಮಾಡಿದ ಮಗ

ನಟ ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಮ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಅವರ ಪುತ್ರ ಜೇಸನ್ ಸಂಜಯ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಂದೆಯನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಅವರ ವಿವಾಹೇತರ ಸಂಬಂಧವೇ ಈ ಬಿರುಕಿಗೆ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ.

Read Full Story
02:41 PM (IST) Mar 02

India Latest News Live:ಮಾಡು ಇಲ್ಲವೇ ಮಡಿ ಮ್ಯಾಚ್‌ನಲ್ಲಿ ಭಾರತವನ್ನು ಏಕಾಂಗಿಯಾಗಿ ಗೆಲ್ಲಿಸಿದ ಸಂಜು ಸ್ಯಾಮ್ಸನ್! ಉಲ್ಟಾ ಹೊಡೆದ ಕೋಚ್ ಗೌತಮ್ ಗಂಭೀರ್

ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್ ಆಟವನ್ನು ಕೋಚ್ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ. ಸಂಜು ಅವರ ಪ್ರದರ್ಶನವನ್ನು 'ವಿಶ್ವದರ್ಜೆಯದ್ದು' ಎಂದು ಬಣ್ಣಿಸಿದ್ದಾರೆ.

Read Full Story
02:39 PM (IST) Mar 02

India Latest News Live:ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಕೊನೆಗೂ ಮೌನ ಮುರಿದ ಚೀನಾ; ಖಡಕ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?

ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಚೀನಾ ಒತ್ತಾಯಿಸಿದೆ. ಟೆಹ್ರಾನ್ ಸ್ಫೋಟದಲ್ಲಿ ತನ್ನ ಪ್ರಜೆಯೊಬ್ಬರು ಸಾವನ್ನಪ್ಪಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ಯುದ್ಧವು ಬೇರೆ ದೇಶಗಳಿಗೆ ಹರಡದಂತೆ ತಡೆಯುವುದೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ.

Read Full Story