MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿ ಸಾವನ್ನು ಭಾರತ ಖಂಡಿಸಿಲ್ಲವೇಕೆ ?: ಇಲ್ಲಿದೆ ಹಲವು ಕಾರಣ

ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿ ಸಾವನ್ನು ಭಾರತ ಖಂಡಿಸಿಲ್ಲವೇಕೆ ?: ಇಲ್ಲಿದೆ ಹಲವು ಕಾರಣ

ಇರಾನ್ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಭಾರತ ಸರ್ಕಾರವು ಸಂತಾಪ ಸೂಚಿಸದೆ ರಾಜತಾಂತ್ರಿಕ ಮೌನವನ್ನು ಕಾಯ್ದುಕೊಂಡಿದೆ. ಭಾರತದ ಈ ವರ್ತನೆ ಹಿಂದೆ ಹಲವು ಕಾರಣಗಳಿದ್ದು, ಅದೇನು ಎಂಬ ಮಾಹಿತಿ ಇಲ್ಲಿದೆ.

3 Min read
Author : Anusha Kb
Published : Mar 02 2026, 09:24 PM IST
Share this Photo Gallery
  • FB
  • TW
  • Linkdin
  • Whatsapp
17
ಭಾರತವೇಕೆ ಖಮೇನಿ ಸಾವಿಗೆ ಸಂತಾಪ ಸೂಚಿಸಿಲ್ಲ?
Image Credit : Asianet News

ಭಾರತವೇಕೆ ಖಮೇನಿ ಸಾವಿಗೆ ಸಂತಾಪ ಸೂಚಿಸಿಲ್ಲ?

ಅಮೆರಿಕ ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿರುವ ವಿಚಾರ, ಭಾರತದಲ್ಲಿ ತೀವ್ರ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಈ ಸಾವಿನ ಬಗ್ಗೆ ಸರ್ಕಾರವು ಔಪಚಾರಿಕ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ಅಧ್ಯಯನಾತ್ಮಕ ಮೌನವನ್ನು ಕಾಯ್ದುಕೊಂಡಿದ್ದು, ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಸಂಯಮ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಆಯ್ಕೆಯನ್ನು ಆರಿಸಿಕೊಂಡಿದೆ. ಈ ನಿಲುವು ಹೆಚ್ಚಿನ ಪ್ರಮುಖ ಜಾಗತಿಕ ಶಕ್ತಿಗಳ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ ಪ್ರಧಾನಿ ಮೋದಿ

ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ)ದಲ್ಲಿನ ಪರಿಸ್ಥಿತಿ ತೀವ್ರ ಕಳವಳಕಾರಿ ವಿಷಯ ಎಂದು ಪ್ರಧಾನಿ ಮೋದಿ ಇಂದು ಹೇಳಿದ್ದಾರೆ. ಭಾರತ ಶಾಂತಿ ಮತ್ತು ಸ್ಥಿರತೆಗಾಗಿ ನಿಲ್ಲುತ್ತದೆ ಎಂದು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಇಂತಹ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತ ಯಾವಾಗಲೂ ಸಂವಾದ ಮತ್ತು ರಾಜತಾಂತ್ರಿಕತೆಯ ಮಾರ್ಗದ ಕರೆ ನೀಡಿದೆ. ಸಂಘರ್ಷಗಳ ಶಾಂತಿಯುತ ಪರಿಹಾರದ ಬಗ್ಗೆ ನವದೆಹಲಿ ಹೊಂದಿರುವ ದೀರ್ಘಕಾಲದ ನಿಲುವನ್ನು ಅವರು ಒತ್ತಿ ಹೇಳಿದರು.

27
G7 ದೇಶಗಳಿಂದಲೂ ಖಮೇನಿ ಸಾವಿಗೆ ಸಂತಾಪವಿಲ್ಲ
Image Credit : Asianet News

G7 ದೇಶಗಳಿಂದಲೂ ಖಮೇನಿ ಸಾವಿಗೆ ಸಂತಾಪವಿಲ್ಲ

ಅಲಿ ಖಮೇನಿ ಅವರ ಸಾವಿಗೆ G7 ದೇಶಗಳು ಸಂತಾಪ ಸೂಚಿಸಿಲ್ಲ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಮೇನಿ ಅವರನ್ನು ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರು ಎಂದು ಕರೆದಿದ್ದಾರೆ. ಹೀಗಾಗಿ ವಿವಿಧ ದೇಶಗಳ ಪ್ರತಿಕ್ರಿಯೆಯನ್ನು ಭಾರತವು ಗಮನಿಸುತ್ತಿದೆ ಹಾಗೂ ವಿವಿಧ ನಾಯಕರ ಪ್ರತಿಕ್ರಿಯೆ ಒಂದು ಸ್ಪಷ್ಟ ಮಾದರಿಯನ್ನು ಬಹಿರಂಗಪಡಿಸುತ್ತದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು 47 ವರ್ಷಗಳ ಕಾಲದಿಂದ ಇರಾನ್ ಆಡಳಿತವು ಇಸ್ರೇಲ್‌ಗೆ ಸಾವು ಎಂದು ಘೋಷಣೆ ಕೂಗುತ್ತಿತ್ತು. ಇಂದು ನ್ಯಾಯ ದೊರಕಿದೆ ಎಂದು ಘೋಷಿಸಿದೆ. ಅರ್ಜೆಂಟೀನಾದ ಜೇವಿಯರ್ ಮಿಲಿ ಅವರು ಖಮೇನಿ ಅವರನ್ನು ಇದುವರೆಗಿನ ಅತ್ಯಂತ ದುಷ್ಟ, ಹಿಂಸಾತ್ಮಕ ಮತ್ತು ಕ್ರೂರ ವ್ಯಕ್ತಿಗಳಲ್ಲಿ ಒಬ್ಬರು ಎಂದು ಕರೆದಿದ್ದಾರೆ. ಹಾಗೆಯೇ ಉಕ್ರೇನ್ ಸರ್ಕಾರವು ಸರ್ವಾಧಿಕಾರಿಯ ಸಾವನ್ನು ಯಾವುದೂ ಮೀರಿಸಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡಲಾಗಿದೆ.

Related Articles

Related image1
ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ
Related image2
ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ
37
ವಿವಿಧ ದೇಶಗಳ ನಾಯಕರ ಪ್ರತಿಕ್ರಿಯೆ ಹೀಗಿದೆ..
Image Credit : ANI

ವಿವಿಧ ದೇಶಗಳ ನಾಯಕರ ಪ್ರತಿಕ್ರಿಯೆ ಹೀಗಿದೆ..

ದುಷ್ಟ ಆಡಳಿತದ ನಾಯಕನಿಗೆ ಕೆಲವರು ಮಾತ್ರ ಶೋಕ ವ್ಯಕ್ತಪಡಿಸುತ್ತಾರೆ ಎಂದು ಯುಕೆ ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ಹೇಳಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಪ್ರಾಕ್ಸಿ ಬೆಂಬಲದ ಬಗ್ಗೆ ಮಾತನಾಡಿದರೆ, ಫ್ರಾನ್ಸ್‌ನ ಸರ್ಕಾರಿ ವಕ್ತಾರರು, ಅವರ ಸಾವಿನಿಂದಷ್ಟೇ ತೃಪ್ತರಾಗಬಹುದು ಎಂದು ಹೇಳಿದ್ದಾರೆ. ಕೆನಡಾದ ಮಾರ್ಕ್ ಕಾರ್ನಿ ಇರಾನ್ ಅನ್ನು ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆಯ ಪ್ರಮುಖ ಮೂಲ ಎಂದು ಕರೆದಿದ್ದಾರೆ. ಯುರೋಪಿಯನ್ ಯುನಿಯನ್‌ನ ಕಾಜ ಕಲ್ಲಾಸ್ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾರೆ.

ಒಂಬತ್ತು ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ವಲಸಿಗರಿಗೆ ಆತಿಥ್ಯ ವಹಿಸುತ್ತಿರುವ ಭಾರತದ ಪ್ರಮುಖ ಪಾಲುದಾರರಾದ ಗಲ್ಫ್ ರಾಷ್ಟ್ರಗಳು ಈ ಘಟನೆಗೆ ಮೌನವಾಗಿವೆ. ಇರಾನಿನ ದಾಳಿಗಳ ವಿರುದ್ಧ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ತುರ್ತು ಸಭೆ ನಡೆಸಿದಾಗ ಸೌದಿ ಅರೇಬಿಯಾ ಮೌನವಾಗಿತ್ತು. ಇರಾನ್‌ನಿಂದ ಕ್ಷಿಪಣಿ ದಾಳಿಗೆ ಒಳಗಾದ ಯುಎಇ, ತನ್ನ ಟೆಹ್ರಾನ್ ರಾಯಭಾರ ಕಚೇರಿಯನ್ನು ಮುಚ್ಚಿತು ಮತ್ತು ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ. ಜಪಾನ್ ಮತ್ತು ಜರ್ಮನಿ ಸ್ಥಿರತೆಗೆ ಒತ್ತಾಯಿಸಿದ್ದು, ಯುದ್ಧದ ಉಲ್ಬಣದ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಆದರೆ ಯಾವುದೇ ಶೋಕತಪ್ತ ಹೇಳಿಕೆಗಳನ್ನು ನೀಡಲಿಲ್ಲ.

47
57 ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ 10ಕ್ಕಿಂತಲೂ ಕಡಿಮೆ ಸದಸ್ಯರಿಂದ ಸಂತಾಪ
Image Credit : ANI

57 ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ 10ಕ್ಕಿಂತಲೂ ಕಡಿಮೆ ಸದಸ್ಯರಿಂದ ಸಂತಾಪ

57 ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಸದಸ್ಯರಲ್ಲಿ, 10 ಕ್ಕಿಂತ ಕಡಿಮೆ ಸದಸ್ಯರು ಸಂತಾಪ ಸೂಚಿಸಿದ್ದಾರೆ ರಷ್ಯಾ (ವ್ಲಾಡಿಮಿರ್ ಪುಟಿನ್ ಇದನ್ನು ಸಿನಿಕ ಕೊಲೆ ಎಂದು ಕರೆದರೆ, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹತ್ಯೆಯನ್ನು ಸ್ವೀಕಾರಾರ್ಹವಲ್ಲ ಎಂದಿದ್ದಾರೆ. ಉತ್ತರ ಕೊರಿಯಾ ಹಾಗೂ ಶಿಯಾ ಬಹುಸಂಖ್ಯಾತ ಇರಾಕ್ (ಮೂರು ದಿನಗಳ ಶೋಕಾಚರಣೆಗೆ ಕರೆ ನೀಡಿದೆ., ಟರ್ಕಿ ಶೋಕ ವ್ಯಕ್ತಪಡಿಸಿದೆ. ಪಾಕಿಸ್ತಾನದ ಶೆಹಬಾಜ್ ಷರೀಫ್ ಇದು ನಿಯಮಗಳ ಉಲ್ಲಂಘನೆ ಎಂದಿದೆ.

ಆದರೆ ಭಾರತದ ನಿಲುವು ರಾಷ್ಟ್ರೀಯ ಹಿತಾಸಕ್ತಿ ಆಧಾರಿತ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ವಿದೇಶಾಂಗ ಸಚಿವಾಲಯವು ಸಂಯಮ ಹಾಗೂ ಸಂಧಾನಕ್ಕೆ ಒತ್ತಾಯಿಸಿದೆ. ಯುಎಇ ಮಿತ್ರರಾಷ್ಟ್ರಗಳ ಮೇಲೆ ಇರಾನ್ ನಡೆಸಿದ ದಾಳಿಯನ್ನು ಖಂಡಿಸಿದೆ. ಇತ್ತ ಇರಾನ್‌ನ ಟೆಹ್ರಾನ್, ಕರಾಜ್, ಇಸ್ಫಹಾನ್ ಮತ್ತು ಶಿರಾಜ್ ಬೀದಿಗಳಲ್ಲಿ ಇರಾನಿಯನ್ನರ ಒಂದು ಗುಂಪು ಈ ಸಾವನ್ನು ಸಂಭ್ರಮಿಸಿದೆ. ಆದರೆ ಭಾರತದ ಮೌನಕ್ಕೆ ಭಾರತದ ವಿರೋಧ ಪಕ್ಷಗಳು ಆಕ್ಷೇಪಿಸಿದ್ದು ಕೂಮು ಸೌಹಾರ್ದತೆಯ ಕೊರತೆ ಎಂದಿದ್ದು, ಈ ವಿಚಾರವೀಗ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿಯೂ ಪ್ರತಿಧ್ವನಿಸುವಂತೆ ಮಾಡಿದೆ.

57
ಭಾರತದ ವ್ಯವಹಾರಗಳಲ್ಲಿ 4 ಬಾರಿ ಖಮೇನಿ ಹಸ್ತಕ್ಷೇಪ
Image Credit : ANI

ಭಾರತದ ವ್ಯವಹಾರಗಳಲ್ಲಿ 4 ಬಾರಿ ಖಮೇನಿ ಹಸ್ತಕ್ಷೇಪ

ನಾಲ್ಕು ಬಾರಿ ಖಮೇನಿ ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ.

ಸರ್ಕಾರಿ ಮೂಲಗಳ ಪ್ರಕಾರ, ಭಾರತದೊಂದಿಗಿನ ಖಮೇನಿ ಅವರ ಬಾಂಧವ್ಯ ಅಂತಹ ಚೆನ್ನಾಗಿಯೇನು ಇರಲಿಲ್ಲ, 2017ರಿಂದ 2024 ರವರೆಗೆ, ಅವರು ನಾಲ್ಕು ಬಾರಿ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದರು, ಇದರಿಂದಾಗಿ ಪ್ರತಿ ಬಾರಿಯೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರಾನಿನ ರಾಯಭಾರಿಗಳಿಗೆ ಸಮನ್ಸ್ ಜಾರಿ ಮಾಡಿತು.

67
ಆರ್ಟಿಕಲ್ 370 ರದ್ದು ವಿರೋಧಿಸಿದ್ದ ಖಮೇನಿ
Image Credit : ANI

ಆರ್ಟಿಕಲ್ 370 ರದ್ದು ವಿರೋಧಿಸಿದ್ದ ಖಮೇನಿ

2017 ರಲ್ಲಿ ಅವರು ಪಾಕಿಸ್ತಾನವನ್ನು ಪ್ರತಿಧ್ವನಿಸುತ್ತಾ ದಮನಿತ ಕಾಶ್ಮೀರಿಗಳಿಗಾಗಿ ಮುಸ್ಲಿಮರನ್ನು ಒಟ್ಟುಗೂಡಿಸಿದರು. 2019 ರಲ್ಲಿ 370 ನೇ ವಿಧಿ ರದ್ದತಿಯ ನಂತರ, ಅವರು "ನ್ಯಾಯಯುತ ನೀತಿ ಜಾರಿಗೆ ಒತ್ತಾಯಿಸಿದರು. 2020 ರ ದೆಹಲಿ ಗಲಭೆಯ ಸಮಯದಲ್ಲಿ, ಅವರು ಉಗ್ರಗಾಮಿ ಹಿಂದೂಗಳಿಂದ ಮುಸ್ಲಿಮರ ಹತ್ಯಾಕಾಂಡ ಎಂದು ಟ್ವಿಟ್ ಮಾಡಿದ್ದರು, #IndianMuslimsInDanger ಎಂದ ಹ್ಯಾಷ್‌ಟ್ಯಾಗ ಬಳಸಿದ್ದರು. ಆದರೆ ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಂಕಷ್ಟಕ್ಕಿಡಾಗಿರುವ ಹಿಂದೂಗಳ ಬಗ್ಗೆ ಅವರು ಧ್ವನಿ ಎತ್ತಲೇ ಇಲ್ಲ. ಇರಾನ್‌ನ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂ ವಿರೋಧಿ ಎಂದು ಟೀಕಿಸಿತು. ಸೆಪ್ಟೆಂಬರ್ 2024 ರಲ್ಲಿ, ಅವರು ಟ್ವೀಟ್‌ನಲ್ಲಿ ಭಾರತವನ್ನು ಗಾಜಾ ಮತ್ತು ಮ್ಯಾನ್ಮಾರ್‌ನೊಂದಿಗೆಹೋಲಿಸಿದರು.

77
ಇರಾನ್ ವಿರುದ್ಧ ಮತ ಚಲಾಯಿಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ
Image Credit : ANI

ಇರಾನ್ ವಿರುದ್ಧ ಮತ ಚಲಾಯಿಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ

ಈಗ ಇರಾನ್ ನಾಯಕನ ಸಾವಿನ ಬಗ್ಗೆ ಭಾರತದ ಸರ್ಕಾರ ಸಂತಾಪ ಸೂಚಿಸುತ್ತಿಲ್ಲ ಎಂದು ಬೇಸರಿಸುತ್ತಿರುವ ವಿರೋಧ ಪಕ್ಷವು(ಯುಪಿಎ)ಯೂ 2005, 2006, 2009 ಹೀಗೆ ಮೂರು ಬಾರಿ ಇರಾನ್ ವಿರುದ್ಧ ಮತ ಚಲಾಯಿಸಿದೆ ಎಂಬುದನ್ನು ಸರ್ಕಾರಿ ದಾಖಲೆಗಳು ತಿಳಿಸುತ್ತವೆ. 1 ಲಕ್ಷ ಕೋಟಿ ರೂ. ಎಲ್‌ಎನ್‌ಜಿ ಒಪ್ಪಂದ ರದ್ದು ಮಾಡುವುದಾಗಿ ಇರಾನ್ ಬೆದರಿಕೆಯ ನಡುವೆಯೂ ಯುಎಸ್ ಪರಮಾಣು ಒಪ್ಪಂದದ ಮಾತುಕತೆಯ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಇರಾನ್ ವಿರುದ್ಧ ಮೂರು ಬಾರಿ ಮತ ಚಲಾಯಿಸಿದೆ ಎಂದು ಸರ್ಕಾರಿ ದಾಖಲೆಗಳು ಸೂಚಿಸಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಕೊಲ್ಲಿ ಯುದ್ಧ
ಇರಾನ್
ಯುಎಸ್ ಸುದ್ದಿ
ಅಯತೊಲ್ಲಾ ಅಲಿ ಖೊಮೆನಿ

Latest Videos
Recommended Stories
Recommended image1
ಗಲೀಜು ಟಾಯ್ಲೆಟ್‌, ಕೆಟ್ಟ ಊಟ, ನೆಲದ ಮೇಲೆ ನಿದ್ರೆ: ತಿಹಾರ್ ಜೈಲಲ್ಲಿ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಕನ್ನಡ ಸಿನಿಮಾ ನಟಿ!
Recommended image2
ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!
Recommended image3
ನಟಿಯ ಮೇಲೆ ಲೈಂಗಿಕ ದೌರ್ಜನ್ಯ, Manjummel Boys ನಿರ್ದೇಶಕ ಅರೆಸ್ಟ್‌!
Related Stories
Recommended image1
ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ
Recommended image2
ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved