11:08 PM (IST) Mar 28

India Latest News Live 28 March 2026IPL 2026 - ಚಿನ್ನಸ್ವಾಮಿಯಲ್ಲಿ RCB ವಿಜಯದುಂದುಭಿ - ಕೊಹ್ಲಿ-ಪಡಿಕ್ಕಲ್ ಅಬ್ಬರಕ್ಕೆ ಸನ್‌ರೈಸರ್ಸ್ ಧೂಳೀಪಟ!

ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ ಗೆಲುವು ಕಂಡಿದೆ.

Read Full Story
10:50 PM (IST) Mar 28

India Latest News Live 28 March 2026ಭಾರತೀಯ ಸೇನೆಗೆ 'ಪ್ರಹಾರ' ಬಲ - 2,000 ಲೈಟ್ ಮೆಷಿನ್ ಗನ್‌ಗಳ ಮೊದಲ ಬ್ಯಾಚ್ ಹಸ್ತಾಂತರಿಸಿದ ಅದಾನಿ ಡಿಫೆನ್ಸ್!

ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಕಂಪನಿಯು 2,000 'ಪ್ರಹಾರ' ಲೈಟ್ ಮೆಷಿನ್ ಗನ್‌ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಗ್ವಾಲಿಯರ್‌ನಲ್ಲಿ ತಯಾರಾದ ಈ 7.62 ಎಂಎಂ ಕ್ಯಾಲಿಬರ್‌ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿಗದಿತ ಸಮಯಕ್ಕಿಂತ 11 ತಿಂಗಳು ಮುಂಚಿತವಾಗಿ ವಿತರಿಸಲಾಗಿದೆ.

Read Full Story
10:37 PM (IST) Mar 28

India Latest News Live 28 March 2026ಸಿಚುಯೇಷನ್‌ಶಿಪ್ ಅಂದ್ರೆ ಏನು? Gen Z ಕಾಲದ ಹೊಸ ಲವ್ ಸ್ಟೋರಿ ಇದು!

ಕಾಲ ಬದಲಾದಂತೆ ಸಂಬಂಧಗಳ ಸ್ವರೂಪವೂ ಬದಲಾಗುತ್ತಿದೆ. ಮೊದಲು ಪ್ರೀತಿ, ಮದುವೆ ಅಂತ ಸ್ಪಷ್ಟವಾದ ಸಂಬಂಧಗಳು ಹೆಚ್ಚಾಗಿದ್ದವು. ಆದರೆ ಈಗ 'ಸಿಚುಯೇಷನ್‌ಶಿಪ್' (Situationship) ಅನ್ನೋ ಹೊಸ ಬಗೆಯ ಸಂಬಂಧದ ಬಗ್ಗೆ ಹೆಚ್ಚು ಕೇಳಿಬರುತ್ತಿದೆ. ಹಾಗಿದ್ರೆ ಏನಿದು?
Read Full Story
10:09 PM (IST) Mar 28

India Latest News Live 28 March 2026RCB vs SRH - ಆರ್‌ಸಿಬಿ ಪಾಲಿನ 'ಸ್ಪೈಡರ್ ಮ್ಯಾನ್' - ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್‌ಗಳಿಗೆ ಅಭಿಮಾನಿಗಳು ಶಾಕ್!

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸನ್ ಅಬ್ಬರಿಸಿದರೂ, ಫಿಲ್ ಸಾಲ್ಟ್ ಹಿಡಿದ ಎರಡು ಅದ್ಭುತ ಕ್ಯಾಚ್‌ಗಳು ಪಂದ್ಯದ ಗತಿಯನ್ನೇ ಬದಲಿಸಿದವು. ಈ ಕ್ಯಾಚ್‌ಗಳಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 201 ರನ್‌ಗಳಿಗೆ ನಿಯಂತ್ರಣಗೊಂಡಿತು.
Read Full Story
09:52 PM (IST) Mar 28

India Latest News Live 28 March 2026IPL 2026 - ಇಶಾನ್ ಕಿಶನ್ ಆರ್ಭಟಕ್ಕೆ ಬೆಚ್ಚಿದ ಬೆಂಗಳೂರು - RCB ಗೆಲುವಿಗೆ ಬೇಕಿದೆ 202 ರನ್!

ಐಪಿಎಲ್ 2026ರ ಮೊದಲ ಪಂದ್ಯದಲ್ಲಿ, ಆರಂಭಿಕ ಕುಸಿತದ ಹೊರತಾಗಿಯೂ ನಾಯಕ ಇಶಾನ್ ಕಿಶನ್ (80) ಮತ್ತು ಅನಿಕೇತ್ ವರ್ಮಾ (43) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.

Read Full Story
08:21 PM (IST) Mar 28

India Latest News Live 28 March 2026ಬಾಲಯ್ಯ ಜೊತೆ ಸಿನಿಮಾ ಮಾಡಲು ಭಯ - ಸೂಪರ್ ಸ್ಟಾರ್ ಕೃಷ್ಣರ ಫ್ಲಾಪ್ ಚಿತ್ರದ ಬಗ್ಗೆ ನಾಗಾರ್ಜುನ ವ್ಯಂಗ್ಯ!

ತೆಲುಗಿನ ಕ್ಲಾಸಿಕ್ ಸಿನಿಮಾಗಳ ರೀಮೇಕ್ ಬಗ್ಗೆ ಮಾತನಾಡಿದ ನಟ ನಾಗಾರ್ಜುನ, ಸೂಪರ್ ಸ್ಟಾರ್ ಕೃಷ್ಣ ಅವರ ಫ್ಲಾಪ್ ಚಿತ್ರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಬಾಲಕೃಷ್ಣ ಬಗ್ಗೆಯೂ ಮಾತನಾಡಿದ್ದಾರೆ. ಏನಿದು ವಿಚಾರ? ಇಲ್ಲಿದೆ ವಿವರ.

Read Full Story
08:08 PM (IST) Mar 28

India Latest News Live 28 March 2026Vi ನಿಂದ 2 ವಿಶೇಷ ರೀಚಾರ್ಜ್ ಪ್ಲಾನ್ ಲಾಂಚ್; ಏರ್‌ಟೆಲ್-ಜಿಯೋಗೆ ಹೆಚ್ಚಿದ ಟೆನ್ಶನ್!

ವೊಡಾಫೋನ್ ಐಡಿಯಾ ತನ್ನ 20 ಕೋಟಿ ಗ್ರಾಹಕರಿಗಾಗಿ ಹೊಸ ವಿಶೇಷ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ₹670 ಮತ್ತು ₹1005 ಬೆಲೆಯ ಈ ಪ್ಲಾನ್‌ಗಳು ಕ್ರಮವಾಗಿ 56 ಮತ್ತು 84 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‌ಲಿಮಿಟೆಡ್ ಹೈ-ಸ್ಪೀಡ್ ಡೇಟಾ, ಕಾಲಿಂಗ್ ಮತ್ತು ಹೆಚ್ಚುವರಿ OTT ಪ್ರಯೋಜನಗಳನ್ನು ನೀಡುತ್ತವೆ.

Read Full Story
08:00 PM (IST) Mar 28

India Latest News Live 28 March 2026ಪ್ರಭಾಸ್ ಜೊತೆ ಆ ಪಾತ್ರ ಮಾಡಲ್ಲ, ಬೇರೆ ಯಾವುದಾದ್ರೂ ಓಕೆ... ಸ್ಪಷ್ಟನೆ ಕೊಟ್ಟ ನಟಿ ರಾಶಿ

ನಟ ಪ್ರಭಾಸ್ ಅವರ ತಾಯಿ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದರ ಬಗ್ಗೆ ನಟಿ ರಾಶಿ ಸ್ಪಷ್ಟನೆ ನೀಡಿದ್ದಾರೆ. ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾತ್ರ ಮಾಡುತ್ತಾ ಬಂದಿರುವ ಈ ತಾರೆ, ಈ ವಿವಾದದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

Read Full Story
07:37 PM (IST) Mar 28

India Latest News Live 28 March 2026ಟ್ರಾಫಿಕ್ ಜಾಮ್ ಈಗ ಹೊಸ 'ಪ್ರೈಮ್ ಟೈಮ್'! ಭಾರತದ ಮೆಟ್ರೋ ನಗರಗಳಲ್ಲಿ ರೇಡಿಯೋ ಅಬ್ಬರ!

ಬೆಂಗಳೂರು ಮತ್ತು ದೆಹಲಿಯಂತಹ ಮಹಾನಗರಗಳಲ್ಲಿ ಪ್ರಯಾಣದ ಅವಧಿ ಒಂದು ಗಂಟೆ ಮೀರಿದ್ದು, ಇದು 'ಸ್ಕ್ರೀನ್-ಫ್ರೀ' ಸಮಯವನ್ನು ಸೃಷ್ಟಿಸಿದೆ. ಈ ದೀರ್ಘಾವಧಿಯ ಪ್ರಯಾಣದಲ್ಲಿ ರೇಡಿಯೋ ಪ್ರಯಾಣಿಕರ 'ದೈನಂದಿನ ಸಂಗಾತಿ'ಯಾಗಿದೆ.

Read Full Story
06:56 PM (IST) Mar 28

India Latest News Live 28 March 20266 ವರ್ಷಗಳ ಅಪ್‌ಡೇಟ್ ಗ್ಯಾರಂಟಿ! ಸ್ಯಾಮ್‌ಸಂಗ್‌ನಿಂದ ಹೊಸ ಎ-ಸೀರೀಸ್ ಫೋನ್‌ಗಳ ಬಿಡುಗಡೆ; ಬೆಲೆ ಎಷ್ಟು?

ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಗ್ಯಾಲಕ್ಸಿ A-ಸೀರೀಸ್‌ನ ಹೊಸ Galaxy A57 ಮತ್ತು Galaxy A37 ಫೋನ್‌ಗಳನ್ನು ಪರಿಚಯಿಸಿದೆ. ಈ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು 120Hz ಡಿಸ್‌ಪ್ಲೇ, 50MP ಕ್ಯಾಮೆರಾ, ಮತ್ತು 6 ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್ ಭರವಸೆಯಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬಂದಿವೆ.
Read Full Story
06:23 PM (IST) Mar 28

India Latest News Live 28 March 2026Vijay Politics - ಮುಂದಿನ ಸಿಎಂ ವಿಜಯ್! ಜ್ಯೋತಿಷಿಗಳ ಭವಿಷ್ಯ ನಿಜವಾಗುತ್ತಾ? ಏನಿದು ರಾಜಯೋಗದ ಕಥೆ?

ನಟ ವಿಜಯ್ ಕಟಕ ರಾಶಿಯಲ್ಲಿ ಜನಿಸಿದ್ದು, ಅವರ ಜಾತಕದಲ್ಲಿ ರಾಜಯೋಗವಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. 2026ರ ಚುನಾವಣೆಯಲ್ಲಿ ಅವರು ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾರಾ? ಈ ಕುರಿತ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ.

Read Full Story
06:01 PM (IST) Mar 28

India Latest News Live 28 March 2026ತಾನು ಶಿವನ ಅವತಾರ ಎಂದು ನಂಬಿಸಿ 35ರ ಹರೆಯದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ - ಮತ್ತೊಬ್ಬ ಜ್ಯೋತಿಷಿ ಅರೆಸ್ಟ್!

ಪಾಲ್ಘರ್‌ನ ಸ್ವಘೋಷಿತ ದೇವಮಾನವ ಋಷಿಕೇಶ್ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಶಿವನ ಅವತಾರ ಎಂದು ನಂಬಿಸಿ, ಪುಣೆಯ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ದೃಶ್ಯಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಆತನ ಮೇಲಿದೆ.
Read Full Story
06:01 PM (IST) Mar 28

India Latest News Live 28 March 2026ಗೋವಾದಲ್ಲಿ 42 ಲಕ್ಷದ ಆಸ್ತಿ! ದಾಖಲೆಯಲ್ಲಿ 'ಅವಿವಾಹಿತ' ಎಂದ ನಟ ರವಿ ಮೋಹನ್ - ಏನಿದು ರಹಸ್ಯ ಡೀಲ್?

ತಮಿಳು ನಟ ಜಯಂ ರವಿ ಮತ್ತು ಗಾಯಕಿ ಕೆನಿಶಾ ಫ್ರಾನ್ಸಿಸ್ ನಡುವಿನ ಸ್ನೇಹ ಹಾಗೂ ಆಸ್ತಿ ವ್ಯವಹಾರದ ಕುರಿತ ಇತ್ತೀಚಿನ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.

Read Full Story
05:47 PM (IST) Mar 28

India Latest News Live 28 March 2026Daily Walking - ದಿನಕ್ಕೆ 1 ಕಿ.ಮೀ. ನಡೆದರೆ ಸಾಕು, ನಿಮ್ಮ ದೇಹದಲ್ಲಿ ಆಗುತ್ತೆ ಈ ಅದ್ಭುತ ಬದಲಾವಣೆ!

ಪ್ರತಿದಿನ ಒಂದು ಕಿಲೋಮೀಟರ್ ನಡೆಯುವುದು ಚಿಕ್ಕ ಅಭ್ಯಾಸದಂತೆ ಕಂಡರೂ, ಇದು ದೇಹದ ಚಲನೆಯನ್ನು ಉತ್ತೇಜಿಸಿ ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಇದರಿಂದ ಆಗುವ ಬದಲಾವಣೆಗಳೇನು ಎಂಬುದನ್ನು ಇಲ್ಲಿ ನೋಡೋಣ.

Read Full Story
05:31 PM (IST) Mar 28

India Latest News Live 28 March 2026ರಜನಿಕಾಂತ್‌ಗೆ ಹೆದರಿ ವಿಜಯ್ ಹಿಂದೆ ಸರಿದ್ರಾ? 'ಜನ ನಾಯಗನ್' ರಿಲೀಸ್ ಬಗ್ಗೆ ಬಂತು ಶಾಕಿಂಗ್ ಅಪ್‌ಡೇಟ್

ನಟ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಬಿಡುಗಡೆಯಾಗದೆ ಬಾಕಿ ಉಳಿದಿದೆ. ಇದೀಗ ಈ ಚಿತ್ರದ ರಿಲೀಸ್ ಬಗ್ಗೆ ಹೊಸ ಮಾಹಿತಿಯೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
05:20 PM (IST) Mar 28

India Latest News Live 28 March 2026ಮಲಗಿದ್ದ ಕುದುರೆಗೆ ಈಕೆ ಎಲ್ಲರೆದುರೇ ಇದೇನು ಮಾಡಿದ್ಲು ನೋಡಿ! ಛಂಗನೆ ಎದ್ದು ಕುಣಿದಾಡಿದ ಪ್ರಾಣಿ

ಟಾಂಜಾನಿಯಾದ ವಿಚಿತ್ರ ಸಂಪ್ರದಾಯವೊಂದರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕುದುರೆಯೊಂದನ್ನು ಗುಣಪಡಿಸಲು ಕನ್ಯೆಯೊಬ್ಬಳು ಅದರ ಮೇಲೆ ಹಾರುತ್ತಾಳೆ. ಈ ಘಟನೆಯು ಪ್ರಾಣಿ ಚಿಕಿತ್ಸೆಯ ಕುರಿತಾದ ಮೂಢನಂಬಿಕೆ ಮತ್ತು ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
04:55 PM (IST) Mar 28

India Latest News Live 28 March 2026ಐಫೋನ್ ಪ್ರಿಯರಿಗೆ ಶಾಕ್ - ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು?

ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್‌ಗಳ ಬೆಲೆ ₹5,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಆಪಲ್ ಸಂಸ್ಥೆಯು ರಿಟೇಲರ್‌ಗಳಿಗೆ ನೀಡುತ್ತಿದ್ದ 'ಡಿಮ್ಯಾಂಡ್ ಜನರೇಷನ್' ಪ್ರೋತ್ಸಾಹ ಧನವನ್ನು ಹಿಂತೆಗೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ. 

Read Full Story
04:41 PM (IST) Mar 28

India Latest News Live 28 March 2026ಧುರಂಧರ್‌ ಸಿನಿಮಾ ಮಾದರಿ ಅನುಸರಿಸುತ್ತಿದ್ದರಾ ರಾಜಮೌಳಿ - ಹಾಗಿದ್ರೆ ವಾರಣಾಸಿ ಕತೆಯೇನು?

ವಾರಣಾಸಿ ಸಿನಿಮಾದ್ದು ಬಹುದೊಡ್ಡ ಕ್ಯಾನ್ವಾಸ್‌. ಆ ಕಥೆಯನ್ನು ಮೂರು ಗಂಟೆಗಳಲ್ಲಿ ಹೇಳುವುದು ಕಷ್ಟಸಾಧ್ಯ. ಹೀಗಾಗಿ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ.

Read Full Story
04:13 PM (IST) Mar 28

India Latest News Live 28 March 2026ಗ್ರಾಹಕರಿಗೆ ಮೋಸ ಮಾಡಿದ ಅಮೆಜಾನ್‌ಗೆ ₹21,000 ಕೋಟಿ ದಂಡ - ಪ್ರೈಮ್ ಸಬ್‌ಸ್ಕ್ರಿಪ್ಶನ್‌ ಹೊಂದಿವರಿಗೆ ಸಿಗಲಿದೆ ಭರ್ಜರಿ ರೀಫಂಡ್‌

ಗ್ರಾಹಕರನ್ನು ತಪ್ಪುದಾರಿಗೆಳೆಯುವ ಪ್ರೈಮ್ ಸಬ್‌ಸ್ಕ್ರಿಪ್ಶನ್‌ ತಂತ್ರಗಳಿಗಾಗಿ ಅಮೆಜಾನ್, ಅಮೆರಿಕದ ಎಫ್‌ಟಿಸಿ ಜೊತೆ ₹21,000 ಕೋಟಿ ಮೊತ್ತದ ಇತ್ಯರ್ಥಕ್ಕೆ ಒಪ್ಪಿದೆ. ಈ ಒಪ್ಪಂದದ ಅಡಿಯಲ್ಲಿ, ತಿಳಿಯದಂತೆ ಚಂದಾದಾರರಾದ ಅಥವಾ ರದ್ದುಗೊಳಿಸಲು ಕಷ್ಟಪಟ್ಟ ಅರ್ಹ ಗ್ರಾಹಕರಿಗೆ ಹಣವನ್ನು ಮರುಪಾವತಿಸಲಾಗುತ್ತದೆ.
Read Full Story
04:06 PM (IST) Mar 28

India Latest News Live 28 March 2026ತಂಗಳನ್ನ ಹೀಗೆ ತಿನ್ನಿ; ಕರುಳಿನ ಸಮಸ್ಯೆಗೆ ಹೇಳಿ ಗುಡ್​ಬೈ - ನಟ ಮಾಧವನ್ ಡಯಟೀಷಿಯನ್​ ಟಿಪ್ಸ್​ ಕೇಳಿ

ಕರುಳಿನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ, ನಟ ಮಾಧವನ್ ಅವರ ಡಯಟೀಷಿಯನ್ ಲ್ಯೂಕ್ ಕೌಟಿನ್ಹೋ ಅವರು ತಂಗಳನ್ನ ಸೇವನೆಯನ್ನು ಶಿಫಾರಸು ಮಾಡಿದ್ದಾರೆ. ರಾತ್ರಿ ನೀರಿನಲ್ಲಿ ನೆನೆಸಿಟ್ಟ ಅನ್ನಕ್ಕೆ ಬೆಳಿಗ್ಗೆ ಮೊಸರು ಅಥವಾ ಮಜ್ಜಿಗೆ ಸೇರಿಸಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಇದು ಮಾಧವನ್ ಅವರ ಫಿಟ್ನೆಸ್ ರಹಸ್ಯವೂ ಆಗಿದೆ.
Read Full Story