ತೆಲಂಗಾಣದ ವಿದ್ಯುತ್ ಪ್ರಸರಣಾ ಘಟಕಗಳಲ್ಲಿ ಕೆಲಸ ಮಾಡುವ 20 ವರ್ಷಕ್ಕೂ ಹೆಚ್ಚು ಅನುಭವ ಇರುವ ಹಿರಿಯ ಸ್ವಚ್ಛತಾ ಕಾರ್ಮಿಕ ಸೇರಿ ಇತರೆ ಕ್ಲಾಸ್-4 ದರ್ಜೆಯ ಹಿರಿಯ ನೌಕರರ ವೇತನ ಸುಮಾರು 2 ಲಕ್ಷ ರುಪಾಯಿ! ಇನ್ನು ವಿದ್ಯುತ್ ಪ್ರಸರಣಾ ಇಲಾಖೆಯ ಮುಖ್ಯ ಎಂಜಿನಿಯರ್ ವೇತನ 7 ಲಕ್ಷ ರುಪಾಯಿ!!
India News Live: ಕಸ ಹೊಡೆವ ನೌಕರರಿಗೆ ₹ 2 ಲಕ್ಷ ವೇತನ ! ಇಷ್ಟೊಂದು ವೇತನ ಹೇಗೆ?

ನವದೆಹಲಿ : ಇನ್ನು ಮುಂದೆ ವಿಮಾನ ಟಿಕೆಟ್ ಅನ್ನು ಬುಕ್ ಮಾಡಿದ 48 ಗಂಟೆ ಒಳಗೆ ಟಿಕೆಟ್ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್ಲೈನ್ಸ್ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ! ಹೌದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದೀಗ ಟಿಕೆಟ್ ಬುಕ್ಕಿಂಗ್ ಕುರಿತ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಈ ಆದೇಶ ಹೊರಡಿಸಿದೆ.
India Latest News Live: ಕಸ ಹೊಡೆವ ನೌಕರರಿಗೆ ₹ 2 ಲಕ್ಷ ವೇತನ ! ಇಷ್ಟೊಂದು ವೇತನ ಹೇಗೆ?
India Latest News Live: ಟಿ20 ವಿಶ್ವಕಪ್ - ನಿನ್ನೆ ನಡೆದ ಭಾರತ-ಜಿಂಬಾಬ್ವೆ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಟಿ20 ವಿಶ್ವಕಪ್ನ ಸೂಪರ್-8 ಹಂತದ ನಿರ್ಣಾಯಕ ಪಂದ್ಯದಲ್ಲಿ, ಭಾರತವು ಜಿಂಬಾಬ್ವೆ ವಿರುದ್ಧ 72 ರನ್ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 256 ರನ್ಗಳ ಬೃಹತ್ ಮೊತ್ತ ಕಲೆಹಾಕಿದ ಭಾರತದ ಸೆಮೀಸ್ ಕನಸು ಜೀವಂತ.
India Latest News Live: ಮೋದಿಗೆ 10 ಕೋಟಿ ಇನ್ಸ್ಟಾ ಹಿಂಬಾಲಕರು - ವಿಶ್ವದ ನಂ.1!
ವಿಶ್ವದ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 10 ಕೋಟಿ ಹಿಂಬಾಲಕರನ್ನು ಗಳಿಸಿದ್ದಾರೆ. ಈ ಮೂಲಕ ಈ ಮೈಲಿಗಲ್ಲು ತಲುಪಿದ ಮೊದಲ ವಿಶ್ವನಾಯಕ ಎನ್ನಿಸಿಕೊಂಡಿದ್ದಾರೆ.
India Latest News Live: ಜನರ ಹಿತಾಸಕ್ತಿ ಮರೆತ ಸರ್ಕಾರ-ಕಾಂಗ್ರೆಸ್ ಸರ್ಕಾರವೇ ರಾಜ್ಯಕ್ಕೆ ಹೊರೆ - ಬಿಜೆಪಿ
ಪಂಚ ಗ್ಯಾರಂಟಿಗಳ ವಿಚಾರದಲ್ಲಿ ಗೊಂದಲದಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಜನಸಾಮಾನ್ಯರು ಮತ್ತು ಯುವಜನರ ಹಿತಾಸಕ್ತಿ ಮರೆತಿದೆ ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
India Latest News Live: ಹೊರೆಯಾದ್ರೂ ಗ್ಯಾರಂಟಿ ನಿಲ್ಲಲ್ಲ - ಕಾಂಗ್ರೆಸ್
ನಮಗೆ ಎಷ್ಟೇ ಕಷ್ಟವಾದರೂ ಜನರಿಗೆ ಸ್ವಾಭಿಮಾನದ ಬದುಕು ಕೊಡುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.