- Home
- News
- India News
- India Latest News Live: ಅಜ್ಜ ಸಾರ್ವಕರ್ ಕ್ಷಮಾದಾನ ಕೋರಿ ಬ್ರಿಟಿಷ್ ಸರ್ಕಾರಕ್ಕೆ 10 ಅರ್ಜಿ ಹಾಕಿದ್ರು: ಮೊಮ್ಮಗ ಸಾತ್ಯಕಿ
LIVE NOW
India Latest News Live: ಅಜ್ಜ ಸಾರ್ವಕರ್ ಕ್ಷಮಾದಾನ ಕೋರಿ ಬ್ರಿಟಿಷ್ ಸರ್ಕಾರಕ್ಕೆ 10 ಅರ್ಜಿ ಹಾಕಿದ್ರು: ಮೊಮ್ಮಗ ಸಾತ್ಯಕಿ

ಸಾರಾಂಶ
ಪುಣೆ: ‘ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅಂಡಮಾನ್ ಜೈಲಲ್ಲಿದ್ದಾಗ ಬ್ರಿಟಿಷ್ ಸರ್ಕಾರಕ್ಕೆ 10 ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅವರು ತಮ್ಮ ಶಿಕ್ಷೆ ಕಮ್ಮಿ ಮಾಡಲು ಕೋರಿದ್ದರು. ಆದರೆ ಅವರ ಸ್ವರವು ನಮ್ರತೆಯಿಂದ ಕೂಡಿರಲಿಲ್ಲ ಮತ್ತು ಆಗಿನ ಬ್ರಿಟಿಷರಿಗೆ ನಿಷ್ಠೆ ವ್ಯಕ್ತಪಡಿಸುವ ಪದಗಳನ್ನು ಅವು ಹೊಂದಿರಲಿಲ್ಲ’ ಎಂದು ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಾವರ್ಕರ್ ಕುರಿತು ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಪ್ರಶ್ನಿಸಿ ಅವರ ವಿರುದ್ಧ ಪುಣೆ ಸಂಸದ/ಶಾಸಕ ಕೋರ್ಟಲ್ಲಿ ನಡೆದಿರುವ ಮಾನಹಾನಿ ಪ್ರಕರಣದ ವಿಚಾರಣೆ ವೇಳೆ ಸಾತ್ಯಕಿ ಈ ಹೇಳಿಕೆ ನೀಡಿದರು.
‘ಕ್ಷಮಾದಾನ ಅರ್ಜಿಯು ಕಾನೂನಾತ್ಮಕ ಕ್ರಮವಾಗಿತ್ತು. ಅದು ಅಪರಾಧವಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.