Will Mumbai Get Its First BJP Mayor? BMC Election Exit Polls Predict History ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶಗಳ ಮೇಲೆ ಎಲ್ಲರೂ ಗಮನಹರಿಸಿದ್ದರೂ, ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ಮಹಾಯುತಿ ಬಹುಮತ ಪಡೆಯುತ್ತದೆ ಎಂದು ಭವಿಷ್ಯ ನುಡಿದಿವೆ.
- Home
- News
- India News
- India Latest News Live: ಮುಂಬೈ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್? ಕೇಸರಿ ಪಕ್ಷದ ಬಹುದೊಡ್ಡ ಕನಸು ನನಸಾಗುತ್ತಾ..
India Latest News Live: ಮುಂಬೈ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್? ಕೇಸರಿ ಪಕ್ಷದ ಬಹುದೊಡ್ಡ ಕನಸು ನನಸಾಗುತ್ತಾ..

ನವದೆಹಲಿ: ಇರಾನ್ನಲ್ಲಿ ಕಳೆದ 18 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಯ ಬೆದರಿಕೆ ಹಾಕುತ್ತಿರುವ ಕಾರಣ, ಇರಾನ್ನಲ್ಲಿರುವ ಭಾರತೀಯರಿಗೆ ಆದಷ್ಟು ಬೇಗ ದೇಶ ತೊರೆಯುವಂತೆ ಭಾರತ ಸರ್ಕಾರ ಸೂಚಿಸಿದೆ. ಬಗ್ಗೆ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ‘ಪ್ರಸ್ತುತ ಇರಾನ್ನಲ್ಲಿರುವ ಭಾರತೀಯರು (ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು, ಪ್ರವಾಸಿಗರು) ವಾಣಿಜ್ಯ ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ಮೂಲಕ ದೇಶವನ್ನು ತೊರೆಯಿರಿ’ ಎಂದು ಒತ್ತಾಯಿಸಿದೆ.
ಜತೆಗೆ, ತುರ್ತು ಸಂದರ್ಭದಲ್ಲಿ 989128109115; 989128109109; 989128109102; 989932179359 ಅಥವಾ cons.tehran@mea.gov.in ಮೂಲಕ ತಮ್ಮನ್ನು ಸಂಪರ್ಕಿಸಲು ತಿಳಿಸಿದೆ. ದು ಕಡೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸರ್ಕಾರ ಬಲಪ್ರಯೋಗ, ಬಂಧನ, ಗಲ್ಲುಶಿಕ್ಷೆಯ ಬೆದರಿಕೆಯಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಇನ್ನೊಂದು ಕಡೆ ಅಮೆರಿಕ ಅಧ್ಯಕ್ಷ ಟ್ರಂಪ್ ದಾಳಿಯ ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಭಾರತ ಈ ಎಚ್ಚರಿಕೆ ನೀಡಿದೆ.
India Latest News Live 15 January 2026ಮುಂಬೈ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್? ಕೇಸರಿ ಪಕ್ಷದ ಬಹುದೊಡ್ಡ ಕನಸು ನನಸಾಗುತ್ತಾ..
India Latest News Live 15 January 2026Mobile history ಕ್ಲಿಯರ್ ಮಾಡಿದ್ರೂ ನೋಡಿದ್ದೆಲ್ಲಾ ಸೇವ್ ಆಗಿರತ್ತೆ - ಪರ್ಮನೆಂಟ್ ಡಿಲೀಟ್ ಮಾಡೋದು ಹೇಗೆ?
India Latest News Live 15 January 2026BMC Exit Poll - ಬಿಜೆಪಿ-ಶಿಂಧೆ ಸೇನೆಗೆ ಮುಂಬೈ ಅಧಿಕಾರ, ಮಣ್ಣುಮುಕ್ಕಿದ ಠಾಕ್ರೆ!
BMC Exit Poll Results: BJP-Shinde Alliance Likely to Sweep Mumbai ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 131-151 ವಾರ್ಡ್ಗಳಲ್ಲಿ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆ ಇದೆ ಎಂದು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.
India Latest News Live 15 January 2026ಬಹಳ ಪವಿತ್ರವಾದ ಸಂಬಂಧ ಹಾಳು ಮಾಡಿದಿರಿ - 11 ವರ್ಷದ ಮಗಳ ರೇ*ಪ್ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ
11 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾ*ಚಾರವೆಸಗಿದ ಕಾಮುಕ ತಂದೆಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಪೋಕ್ಸೋ ಕಾಯ್ದೆಯಡಿ ಅಪರಾಧಿ ಎಂದು ಸಾಬೀತಾದ ಈತನ ಕೃತ್ಯವನ್ನು 'ಪವಿತ್ರ ಸಂಬಂಧದ ನಾಶ' ಎಂದು ನ್ಯಾಯಾಲಯ ಬಣ್ಣಿಸಿದ್ದು, ಸಂತ್ರಸ್ತೆಗೆ 10.5 ಲಕ್ಷ ರೂ. ಪರಿಹಾರವನ್ನೂ ಘೋಷಿಸಿದೆ.
India Latest News Live 15 January 2026Viral Video - 'ಏನ್ ಬೇಕು ನಿನಗೆ..' ಪುಟ್ಟ ಮಗುವಿಗೆ ಕೇಳಿದ ಸಿಎಂ ಯೋಗಿ ಆದಿತ್ಯನಾಥ್, ಬಾಲಕ ನೀಡಿದ ಉತ್ತರಕ್ಕೆ ನೆಟ್ಟಿಗರು ಫಿದಾ!
Viral Video: Little Boy Asks CM Yogi Adityanath for 'Chips'; Internet Fida ಪುಟ್ಟ ಮಗುವಿನ ಮುಗ್ಧ ಬೇಡಿಕೆಯನ್ನು ಕೇಳಿದ ನಂತರ ಸಿಎಂ ಯೋಗಿ ಆದಿತ್ಯನಾಥ್ ಕೂಡ ನಗಲು ಆರಂಭಿಸಿದರು.
India Latest News Live 15 January 2026ಲವರ್ ಜೊತೆ ಅಫೇರ್ ನೋಡಿದ ಗಂಡನ ಕೊ*ಲೆ, ರುಂಡ ಕೊಯ್ದು ಖಾಲಿ ಬೋರ್ವೆಲ್ಗೆ ಹಾಕಿದ ಪತ್ನಿ!
ಫಿರೋಜಾಬಾದ್ನಲ್ಲಿ, ಪತ್ನಿಯ ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ ಪತಿಯನ್ನು ಆತನ ಪತ್ನಿ, ಆಕೆಯ ಪ್ರಿಯಕರ ಹಾಗೂ ಮತ್ತೊಬ್ಬ ವ್ಯಕ್ತಿ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಮೃತನ ಶಿರಚ್ಛೇದ ಮಾಡಿ ದೇಹದ ಭಾಗಗಳನ್ನು ಬೇರೆ ಬೇರೆಡೆ ಎಸೆದಿದ್ದಾರೆ.
India Latest News Live 15 January 2026ಆಟಗಾರರಿಂದ ಪಂದ್ಯ ಬಹಿಷ್ಕಾರ, ಟಾಸ್ಗೆ ಬಂದಿದ್ದು ಮ್ಯಾಚ್ ರೆಫರಿ ಮಾತ್ರ! ಬಾಂಗ್ಲಾ ಕ್ರಿಕೆಟ್ನಲ್ಲಿ ಇದೆಂಥಾ ಅವಸ್ಥೆ?
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯವನ್ನು ಆಟಗಾರರು ಬಹಿಷ್ಕರಿಸಿದ್ದಾರೆ. ಭಾರತ-ಬಾಂಗ್ಲಾ ಕ್ರಿಕೆಟ್ ಸಂಬಂಧ ಸರಿಪಡಿಸಲು ಸಲಹೆ ನೀಡಿದ್ದ ತಮೀಮ್ ಇಕ್ಬಾಲ್ ಅವರನ್ನು 'ಭಾರತೀಯ ಏಜೆಂಟ್' ಎಂದು ಕರೆದ ಕ್ರಿಕೆಟ್ ಮಂಡಳಿ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಟಗಾರರು ಪಟ್ಟುಹಿಡಿದಿದ್ದಾರೆ.
India Latest News Live 15 January 2026ಅಪರಾಧಿಗೆ ಜೈಲಾದರೆ, ಅವರ ದಿನನಿತ್ಯದ ಖರ್ಚನ್ನೂ ಕೇಸ್ ಹಾಕಿದೋರೇ ಕೊಡಬೇಕು! ಇಲ್ಲದಿದ್ರೆ ಏನಾಗತ್ತೆ? ಕಾನೂನು ಹೇಳೋದೇನು?
ಸಿವಿಲ್ ಪ್ರಕರಣವೊಂದರಲ್ಲಿ, ಜೈಲು ಶಿಕ್ಷೆಗೊಳಗಾದವರ ವೆಚ್ಚವನ್ನು ದೂರುದಾರರೇ ಭರಿಸಬೇಕೆಂಬ ಕೋರ್ಟ್ ಆದೇಶವು ಚರ್ಚೆಗೆ ಕಾರಣವಾಗಿದೆ. ಏನಿದು ಕಾನೂನು? ದೂರುದಾರ ಹಣ ಕೊಡದಿದ್ರೆ ಏನಾಗುತ್ತೆ?
India Latest News Live 15 January 2026ವಿದೇಶಕ್ಕೆ ತೆರಳಲು ಮುಂದಾಗಿದ್ದ ತಾಯಿ - ಶಾಲಾ ಕಟ್ಟಡದಿಂದ ಹಾರಿದ್ದ ವಿದ್ಯಾರ್ಥಿನಿ ಸಾವು
ಕೇರಳದಲ್ಲಿ ಶಾಲಾ ಕಟ್ಟಡದಿಂದ ಹಾರಿ ಆತ್ಮ*ಹತ್ಯೆಗೆ ಯತ್ನಿಸಿದ್ದ 16 ವರ್ಷದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಮಿದುಳು ನಿಷ್ಕ್ರಿಯಗೊಂಡ ನಂತರ, ಆಕೆಯ ಪೋಷಕರು ಮಗಳ ಅಂಗಾಂಗಗಳನ್ನು ದಾನ ಮಾಡಿ ಹಲವರಿಗೆ ಹೊಸ ಜೀವನ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
India Latest News Live 15 January 2026Video - ಮಧ್ಯರಾತ್ರಿ ಕಿರಿಕ್; ಮನೆಯವರೆಗೂ ತಂದು ಗ್ರಾಹಕನ ಆಹಾರ ತಿಂದ ಡೆಲಿವರಿ ಬಾಯ್
India Latest News Live 15 January 2026ಜೈಲೂಟ ತಿಂದರೂ ಬಿಡದ ಹಳೇ ಚಾಳಿ - 2 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಮತ್ತೆ ಡ್ರಗ್ ದಂಧೆಗಿಳಿದ ಯುವತಿಯ ಬಂಧನ
ಕೇರಳದ ಕಣ್ಣೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಶಿಲ್ಪಾ ಎಂಬ ಮಹಿಳೆಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಗೋವಾದಲ್ಲಿ ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ಆಕೆ, ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದಳು. ಮತ್ತೆ ಡ್ರಗ್ಸ್ ದಂಧೆಗಿಳಿದ ಆಕೆಯನ್ನು ಈಗ ಪೊಲೀಸರು ಬಂಧಿಸಿದ್ದಾರೆ.
India Latest News Live 15 January 2026ಮೇಕಪ್ ಇಲ್ಲದೇ ಪ್ರಭಾಸ್ ಹೀರೋಯಿನ್ಗಳನ್ನು ನೋಡಿದ್ದೀರಾ? ಈ 7 ನಾಯಕಿಯರನ್ನು ನೀವು ಗುರುತಿಸೋದು ಕಷ್ಟ!
ಬೆಂಗಳೂರು: 'ದಿ ರಾಜಾ ಸಾಬ್' ಸಿನಿಮಾ ಮೂಲಕ ಪ್ರಭಾಸ್ ಗಮನ ಸೆಳೆದಿದ್ದಾರೆ. ಇದೀಗ ಈ ಸಿನಿಮಾ 200 ಕೋಟಿ ಕ್ಲಬ್ ಸೇರುವ ಹೊಸ್ತಿಲಲ್ಲಿದೆ. ಹೀಗಿರುವಾಗ, ಹಲವು ಸ್ಟಾರ್ ನಟಿಯರು ಈಗಾಗಲೇ ಪ್ರಭಾಸ್ ಜತೆ ತೆರೆ ಹಂಚಿಕೊಂಡಿದ್ದಾರೆ. ಆದರೆ ನೀವು ಯಾವತ್ತಾದರೂ ಮೇಕಪ್ ಇಲ್ಲದೇ ನೋಡಿದ್ದೀರಾ?
India Latest News Live 15 January 2026ಹಬೀಬುಲ್ಲಾ ಹಬೀಬಿ ಅಂತ ಹೇಳ್ಕೊಂಡು ಗಂಗಾ ಘಾಟ್ನಲ್ಲಿ ಸುತ್ತಾಡ್ತಿದ್ದ ದುಬೈ ಇಬ್ಬರು ದುಬೈ ಶೇಕ್ಗಳ ಬಂಧನ..!
ಕೆಲವರು ಸುಮ್ಮನಿರಲಾರದೇ ಏನೋ ಮಾಡುವುದಕ್ಕೆ ಹೋಗಿ ತಮಗೆ ತಾವೇ ಹಾನಿ ಮಾಡಿಕೊಳ್ತಾರೆ. ಅದೇ ರೀತಿ ಇಲ್ಲೊಂದು ಕಡೆ ದುಬೈ ಶೇಕ್ ರೀತಿ ವೇಷ ಧರಿಸಿ ಮಜಾ ಮಾಡುವುದಕ್ಕೆ ಹೋಗಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಡಿಟೇಲ್ ಸ್ಟೋರಿ ಇಲ್ಲಿದೆ.
India Latest News Live 15 January 2026ಸಂಜು ಸ್ಯಾಮ್ಸನ್ ಬ್ಯಾಟರ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ಗೆ ಅಗತ್ಯವೇ ಇರಲಿಲ್ಲ ಎಂದ ಮಾಜಿ ಕ್ರಿಕೆಟಿಗ! ಹೀಗೆ ಹೇಳಲು ಕಾರಣವೂ ಇದೆ
ಸಂಜು ಸ್ಯಾಮ್ಸನ್ರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭಿಕ ಬ್ಯಾಟರ್ ಆಗಿ ಅಲ್ಲ, ಬದಲಿಗೆ ದಕ್ಷಿಣ ಭಾರತದಲ್ಲಿ ಅವರಿಗಿರುವ ಅಪಾರ ಅಭಿಮಾನಿ ಬಳಗ ಮತ್ತು ವಾಣಿಜ್ಯ ಹಿತಾಸಕ್ತಿಗಳಿಗಾಗಿ ಖರೀದಿಸಿದೆ ಎಂದು ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಅಭಿಪ್ರಾಯಪಟ್ಟಿದ್ದಾರೆ.
India Latest News Live 15 January 2026ಕೇರಳ ಕ್ರೀಡಾ ಹಾಸ್ಟೆಲ್ನಲ್ಲಿ ಇಬ್ಬರು ಹುಡುಗಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೇರಳದ ಕೊಲ್ಲಂನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಹಾಸ್ಟೆಲ್ನಲ್ಲಿ ಇಬ್ಬರು ಯುವ ಕ್ರೀಡಾಪಟುಗಳಾದ ಸಾಂಡ್ರಾ ಮತ್ತು ವೈಷ್ಣವಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಯು ಅನುಮಾನಾಸ್ಪದವಾಗಿದ್ದು, ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.
India Latest News Live 15 January 2026ತನ್ನ ವಾಯುಪ್ರದೇಶ ಹಠಾತ್ ಮುಚ್ಚಿದ ಇರಾನ್ - ಭಾರತ ಅಮೆರಿಕಾಗೆ ನಡುವೆ ಸಂಚರಿಸುತ್ತಿದ್ದ ಹಲವು ವಿಮಾನಗಳ ಹಾರಾಟ ರದ್ದು
ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ಇರಾನ್ ತನ್ನ ವಾಯುಪ್ರದೇಶವನ್ನು ಹಠಾತ್ ಮುಚ್ಚಿದೆ. ಈ ನಿರ್ಧಾರದಿಂದ ದೆಹಲಿ ಮತ್ತು ಮುಂಬೈನಿಂದ ನ್ಯೂಯಾರ್ಕ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಗಳು ಸೇರಿದಂತೆ ಹಲವು ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ.
India Latest News Live 15 January 2026ಇಂದಿನಿಂದ ಅಂಡರ್-19 ಏಕದಿನ ವಿಶ್ವಕಪ್ ಟೂರ್ನಿ; ವೈಭವ್ ಸೂರ್ಯವಂಶಿ ಮೇಲೆ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು!
16ನೇ ಆವೃತ್ತಿಯ ಐಸಿಸಿ ಅಂಡರ್-19 ವಿಶ್ವಕಪ್ ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ಆರಂಭಗೊಳ್ಳಲಿದೆ. ಈ ಬಾರಿ ಸೂಪರ್-6 ಹಂತದ ಹೊಸ ಮಾದರಿಯನ್ನು ಪರಿಚಯಿಸಲಾಗಿದ್ದು, 5 ಬಾರಿಯ ಚಾಂಪಿಯನ್ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ.
India Latest News Live 15 January 2026ರಾಜ್ಯ ಸರ್ಕಾರ ಒಪ್ಪಿದ್ರೂ ಆರ್ಸಿಬಿ ಚಿನ್ನಸ್ವಾಮಿಯಲ್ಲಿ ಅಡೋದು ದೌಟ್! ಕಾರಣ ಏನಿರಬಹುದು?
2026ರ ಐಪಿಎಲ್ನಲ್ಲಿ ಆರ್ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಿಸುವ ಸಾಧ್ಯತೆ ದಟ್ಟವಾಗಿದೆ. ಛತ್ತೀಸ್ಗಢದಲ್ಲಿ 2 ಪಂದ್ಯಗಳನ್ನು ಆಡಲು ನಿರ್ಧರಿಸಿದ್ದು, ಕಳೆದ ವರ್ಷದ ಕಾಲ್ತುಳಿತ ಈ ನಿರ್ಧಾರದ ಹಿಂದೆ ಇರಬಹುದೆಂದು ವಿಶ್ಲೇಷಿಸಲಾಗಿದೆ.