ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ಆಡಳಿತಾವಧಿಯ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಕುತಂತ್ರದಿಂದ 'ಹಿಂದೂ ಬೆಳವಣಿಗೆ ದರ' ಎಂದು ಕರೆಯಲಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.
- Home
- News
- India News
- India Latest News Live: ಭಾರತವನ್ನ ದುಷ್ಟರ ಬಲೆಯಿಂದ ಮುಕ್ತಗೊಳಿಸಿದ್ದೇ 12 ವರ್ಷಗಳ ಎನ್ಡಿಎ ಸರ್ಕಾರದ ಯಶಸ್ಸು - ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
LIVE NOW
India Latest News Live: ಭಾರತವನ್ನ ದುಷ್ಟರ ಬಲೆಯಿಂದ ಮುಕ್ತಗೊಳಿಸಿದ್ದೇ 12 ವರ್ಷಗಳ ಎನ್ಡಿಎ ಸರ್ಕಾರದ ಯಶಸ್ಸು - ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

ಸಾರಾಂಶ
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶಾದ್ಯಂತ ಸೃಷ್ಟಿಯಾಗಿರುವ ಇಂಧನ ಅಭಾವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋ ದ್ಯಮ ನಿಗಮಕ್ಕೂ(ಐಆರ್ಸಿಟಿಸಿ) ತಟ್ಟಿದೆ. ಚಲಿಸುವ ರೈಲಿನಲ್ಲಿ ಎಲ್ಪಿಜಿ ಬಳಸಿ ಮಾಡುತ್ತಿದ್ದ ಅಡುಗೆಗೆ ಇತಿಶ್ರೀ ಹಾಡಿ ಇನ್ಮುಂದೆ ಇಂಡ ಕ್ಷನ್ ಸೌವ್ ಬಳಸಲು ನಿರ್ಧರಿಸಿದೆ. ಪ್ರತಿನಿತ್ಯ 1400 ರೈಲಲ್ಲಿ 17 ಲಕ್ಷ ಪ್ಲೇಟ್ ಊಟವನ್ನು ಪೂರೈಸಲಾಗುತ್ತಿದೆ. ಆದರೆ ದಿನಕ್ಕೆ 1000 ಸಿಲಿಂಡರ್ ನೆಚ್ಚಿಕೊಂಡಿದ್ದ ಐಆರ್ಸಿಟಿಸಿಗೆ ಯುದ್ಧದಿಂದ ಹೊಡೆತ ಬಿದ್ದಿದೆ. ಹೀಗಾಗಿ ಪರ್ಯಾಯ ಆಯ್ಕೆಯ ಮೊರೆ ಹೋಗಿದೆ. ಈಗಾಗಲೇ ಶೇ.60ರಷ್ಟು ರೈಲುಗಳಲ್ಲಿ ಇಂಡಕ್ಷನ್ ವ್ಯವಸ್ಥೆ ಜಾರಿಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
08:31 AM (IST) Jun 11
India Latest News Live 11 June 2026ಭಾರತವನ್ನ ದುಷ್ಟರ ಬಲೆಯಿಂದ ಮುಕ್ತಗೊಳಿಸಿದ್ದೇ 12 ವರ್ಷಗಳ ಎನ್ಡಿಎ ಸರ್ಕಾರದ ಯಶಸ್ಸು - ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
Read Full Story
08:28 AM (IST) Jun 11
India Latest News Live 11 June 202623ನೇ ಸೀಸನ್ ಫಿಫಾ ವಿಶ್ವಕಪ್ - ಕಾಲ್ಚೆಂಡಿನ ಕಾಳಗಕ್ಕೆ ಇಂದು ಕಿಕ್ ಆಫ್!
23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್ಗೆ ಇಂದು ಮೆಕ್ಸಿಕೋ ಸಿಟಿಯಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ 39 ದಿನಗಳ ಕಾಲ ಒಟ್ಟು 48 ತಂಡಗಳು ಸೆಣಸಾಡಲಿವೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ ಆಗಿದ್ದು, ಬ್ರೆಜಿಲ್ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡವಾಗಿದೆ.
Read Full Story 07:27 AM (IST) Jun 11
India Latest News Live 11 June 2026ಮೇಲ್ವರ್ಗದ ಬಾಲಕಿ ಸ್ನೇಹ ಮಾಡಿದ್ದಕ್ಕೆ ದಲಿತನ ಉಗುರು ಕಿತ್ತು, ಮೊಳೆ ಮುರಿದು ಹಿಂಸೆ
ಮೇಲ್ವರ್ಗದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ದಲಿತ ಯುವಕನೊಬ್ಬನನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಬಾಲಕಿಯ ಮನೆಯವರು ಯುವಕ ಮತ್ತು ಅವನ ಸ್ನೇಹಿತನನ್ನು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದು, ಈ ಸಂಬಂಧ ಬಾಲಕಿಯ ತಂದೆ ಹಾಗೂ ಅಜ್ಜನನ್ನು ಬಂಧಿಸಲಾಗಿದೆ.
07:11 AM (IST) Jun 11
India Latest News Live 11 June 2026ಬೆಂಗಳೂರಿನಿಂದ ಕನಕಪುರ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರಕ್ಕೆ RRTCಗೆ ಸಿಎಂ ಮನವಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ, ಬೆಂಗಳೂರಿನ ಮೆಟ್ರೋ 2 ಮತ್ತು 3ನೇ ಹಂತದ ಯೋಜನೆಗಳು, ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗ ಹಾಗೂ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ (ಆರ್ಆರ್ಟಿಎಸ್) ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಸಿಎಂ ಅವರ ಪ್ರಸ್ತಾವನೆಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
Read Full Story