ಚಿತ್ರರಂಗದಲ್ಲಿ ಪ್ರತಿ ವರ್ಷ ನೂರಾರು ಬಾಲನಟರು ಪರಿಚಯವಾಗುತ್ತಾರೆ. ಅವರಲ್ಲಿ ಕೆಲವರು ಮಾತ್ರ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಾರೆ. ಅಂತಹವರ ಸಾಲಿನಲ್ಲಿ ಕೇಳಿಬರುವ ಒಂದು ಪ್ರಮುಖ ಹೆಸರು ಶ್ರಿಯಾ ಶರ್ಮಾ. ಹದಿನೈದು ವರ್ಷಗಳ ಹಿಂದಿನ ಬಾಲನಟಿ ಈಗೆಲ್ಲಿದ್ದಾರೆ? ಈ ಸ್ಟೋರಿ ನೋಡಿ…
- Home
- News
- India News
- India Latest News Live: ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?
India Latest News Live: ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶಾದ್ಯಂತ ಸೃಷ್ಟಿಯಾಗಿರುವ ಇಂಧನ ಅಭಾವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋ ದ್ಯಮ ನಿಗಮಕ್ಕೂ(ಐಆರ್ಸಿಟಿಸಿ) ತಟ್ಟಿದೆ. ಚಲಿಸುವ ರೈಲಿನಲ್ಲಿ ಎಲ್ಪಿಜಿ ಬಳಸಿ ಮಾಡುತ್ತಿದ್ದ ಅಡುಗೆಗೆ ಇತಿಶ್ರೀ ಹಾಡಿ ಇನ್ಮುಂದೆ ಇಂಡ ಕ್ಷನ್ ಸೌವ್ ಬಳಸಲು ನಿರ್ಧರಿಸಿದೆ. ಪ್ರತಿನಿತ್ಯ 1400 ರೈಲಲ್ಲಿ 17 ಲಕ್ಷ ಪ್ಲೇಟ್ ಊಟವನ್ನು ಪೂರೈಸಲಾಗುತ್ತಿದೆ. ಆದರೆ ದಿನಕ್ಕೆ 1000 ಸಿಲಿಂಡರ್ ನೆಚ್ಚಿಕೊಂಡಿದ್ದ ಐಆರ್ಸಿಟಿಸಿಗೆ ಯುದ್ಧದಿಂದ ಹೊಡೆತ ಬಿದ್ದಿದೆ. ಹೀಗಾಗಿ ಪರ್ಯಾಯ ಆಯ್ಕೆಯ ಮೊರೆ ಹೋಗಿದೆ. ಈಗಾಗಲೇ ಶೇ.60ರಷ್ಟು ರೈಲುಗಳಲ್ಲಿ ಇಂಡಕ್ಷನ್ ವ್ಯವಸ್ಥೆ ಜಾರಿಯಾಗಿದೆ.
India Latest News Live 11 June 2026ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?
India Latest News Live 11 June 202643ರಲ್ಲೂ 20ರ ಲಲನೆಯಂತೆ ಮಿಂಚುವ ತ್ರಿಷಾ.. ಸೌಂದರ್ಯದ ಸಲುವಾಗಿ ನಟಿ ಇಷ್ಟೆಲ್ಲಾ ಮಾಡ್ತಾರೆ, ಈಸಿ ಅಲ್ಲ!
ಈ ವಯಸ್ಸಿನಲ್ಲೂ ತ್ರಿಷಾ ಅಷ್ಟು ಎನರ್ಜಿಟಿಕ್ ಆಗಿ, ಯಂಗ್ ಆಗಿ ಮತ್ತು ಫಿಟ್ ಆಗಿ ಇರೋದು ಹೇಗೆ? ಈ ಪ್ರಶ್ನೆಗೆ ಸ್ವತಃ ತ್ರಿಷಾ ಅವರೇ ಇತ್ತೀಚೆಗೆ ಉತ್ತರ ನೀಡಿದ್ದಾರೆ. ಅದು ಅಂತಿಂಥ ರಹಸ್ಯವಲ್ಲ, ಪ್ರತಿಯೊಂದು ಹುಡುಗಿ, ನಟಿ ಕೂಡ ಈ ರಹಸ್ಯ
India Latest News Live 11 June 2026ಈ ಹಳ್ಳಿಯ 40 ಹುಡುಗರಿಗೆ ಯಾರೂ ಹೆಣ್ಣು ಕೊಡಲ್ಲ - ಕಾರಣ ಕೇಳಿದ್ರೆ ನೀವೇ ಶಾಕ್ ಆಗ್ತೀರಾ?
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮುದ್ರಾ ಗ್ರಾಮದ ಯುವಕರಿಗೆ ಯಾಕೆ ಹೆಣ್ಣು ಸಿಗುತ್ತಿಲ್ಲ? ಇಡೀ ಊರನ್ನೇ ಬೆಚ್ಚಿಬೀಳಿಸಿರುವ ಈ ದುಸ್ಥಿತಿಯ ಹಿಂದೆ ಯಾವುದೇ ಶಾಪ ಅಥವಾ ಸಂಪ್ರದಾಯವಿಲ್ಲ. ಬದಲಿಗೆ, ಇದು ಕೇವಲ ಕುಡಿಯುವ ನೀರಿನ ಸಮಸ್ಯೆ ಎಂದರೆ ನೀವು ನಂಬುತ್ತೀರಾ?
India Latest News Live 11 June 2026'ಎಲೆಕ್ಟ್ರಿಷಿಯನ್ ಆಗ್ತೀನಿ'.. ಸಿನಿಮಾಗಳಿಗೆ ಗುಡ್ಬೈ ಹೇಳ್ತಾರಾ ಅಕ್ಷಯ್ ಕುಮಾರ್? ಸಿನಿ ಇಂಡಸ್ಟ್ರಿಯೇ ಶಾಕ್!
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾಗಳಿಂದ ಯಾವಾಗ ರಿಟೈರ್ ಆಗ್ತಾರೆ? ಈ ಪ್ರಶ್ನೆಗೆ ಅಕ್ಕಿ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ತಮ್ಮ ರಿಟೈರ್ಮೆಂಟ್ ಬಗ್ಗೆ ಅಕ್ಷಯ್ ಹೇಳಿದ್ದೇನು? ಇಲ್ಲಿದೆ ಪೂರ್ತಿ ಡೀಟೇಲ್ಸ್.
India Latest News Live 11 June 2026'ಪೆದ್ದಿ' ಚಿತ್ರದಿಂದ ಜಾನ್ವಿ ಕಪೂರ್ಗೆ ಬಂಪರ್ - ವೃತ್ತಿಜೀವನದ ಅತಿದೊಡ್ಡ ಸಂಭಾವನೆ ಸುದ್ದಿ ವೈರಲ್!
ರಾಮ್ ಚರಣ್ ಜೊತೆಗಿನ 'ಪೆದ್ದಿ' ಚಿತ್ರಕ್ಕಾಗಿ ಜಾನ್ವಿ ಕಪೂರ್ ತಮ್ಮ ವೃತ್ತಿಜೀವನದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 'ದೇವರ' ಚಿತ್ರದ ಯಶಸ್ಸಿನ ನಂತರ ಅವರ ಬೇಡಿಕೆ ಹೆಚ್ಚಾಗಿದ್ದು, ಸಂಭಾವನೆಯಲ್ಲೂ ಭಾರಿ ಏರಿಕೆಯಾಗಿದೆ.
India Latest News Live 11 June 2026Vijay-Sangeetha Reunion - ಆಗಿದ್ದೆಲ್ಲ ಆಗೋಯ್ತು, ನಟ ದಳಪತಿ ವಿಜಯ್-ಸಂಗೀತಾ ಮತ್ತೆ ಒಂದಾದ್ರಾ?
Thalapathy Vijay Wife: ನಟನೆಯಿಂದ ರಾಜಕೀಯಕ್ಕೆ ಬಂದಿರುವ ವಿಜಯ್, ಪತ್ನಿ ಸಂಗೀತಾ ಕುರಿತ ಹೊಸ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಹಲವು ತಿಂಗಳುಗಳಿಂದ ಹಬ್ಬಿದ್ದ ಬೇರ್ಪಡುವಿಕೆಯ ಊಹಾಪೋಹಗಳ ನಂತರ ದಂಪತಿ ಮತ್ತೆ ಒಂದಾಗಿದ್ದಾರೆ?
India Latest News Live 11 June 2026'ಗ್ರೀನ್ ರೂಮ್' ಬದಲು 'ಜನರೇಟರ್ ವ್ಯಾನ್'ನಲ್ಲಿ ಬಟ್ಟೆ ಬದಲಿಸಿದ ರವೀನಾ ಟಂಡನ್; ಆ ಸೀಕ್ರೆಟ್ ಬಿಚ್ಚಿಟ್ಟ ಈ ನಟ!
"ವರ್ಷಗಳು ಕಳೆದಂತೆ ರವೀನಾ ಅವರಲ್ಲಿ ಏನು ಬದಲಾಗಿದೆ?" ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್, "ರವೀನಾ ಅಂದು ಹೀರೋಯಿನ್ ಆಗಿದ್ದರು, ಆದರೆ ಇಂದು ಅವರು ಒಬ್ಬ ನಾಯಕಿಯ ತಾಯಿಯಾಗಿದ್ದಾರೆ!" ಎಂದು ತಮಾಷೆ ಮಾಡಿದರು.
India Latest News Live 11 June 2026'ರಘುವರನ್ಗೆ ನಾನು ನಟಿಸುವುದು ಇಷ್ಟವಿರಲಿಲ್ಲ' - 7 ವರ್ಷ ಸಿನಿಮಾ ಬಿಟ್ಟಿದ್ದ ಕಾರಣ ಬಿಚ್ಚಿಟ್ಟ ನಟಿ ರೋಹಿಣಿ!
ನನ್ನ ಹೆಂಡತಿ ನನ್ನ ರಕ್ಷಣೆಯಲ್ಲಿ ಇರಬೇಕು ಅನ್ನೋದು ರಘುವರನ್ ಮನಸ್ಥಿತಿಯಾಗಿತ್ತು. ಮದುವೆಯಾದ 7 ವರ್ಷಗಳ ಕಾಲ ನಾನು ಯಾಕೆ ಸಿನಿಮಾದಿಂದ ದೂರ ಉಳಿದಿದ್ದೆ ಅನ್ನೋದಕ್ಕೆ ಇದೇ ಕಾರಣ ಅಂತ ನಟಿ ರೋಹಿಣಿ ಇದೀಗ ಸತ್ಯ ಬಿಚ್ಚಿಟ್ಟಿದ್ದಾರೆ.
India Latest News Live 11 June 2026370 ರೂ. ಬಿರಿಯಾನಿ ಕಥೆ - ಕಾಮಿಡಿ ಶೋನ ಅಸಲಿ 'ಜೋಕ್'ಗೆ ಪೂನಂ ಪಾಂಡೆ ಖಡಕ್ ಉತ್ತರ ಹೀಗಿತ್ತು!
ಸ್ಟ್ಯಾಂಡ್ಅಪ್ ಕಾಮಿಡಿ ಶೋದಲ್ಲಿ ಮಹಿಳೆಯರ ಬಗ್ಗೆ ಮಾಡಿದ ವಿವಾದಾತ್ಮಕ ಕಾಮೆಂಟ್ಗೆ ನಟಿ ಪೂನಂ ಪಾಂಡೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 370 ರೂ. ಬಿರಿಯಾನಿ ವಿವಾದ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
India Latest News Live 11 June 2026ಆಲಿಯಾ ಭಟ್ 'ಆಲ್ಫಾ' ಫ್ರೆಂಚ್ ಸಿನಿಮಾ ಕಾಪಿನಾ? ನೆಟ್ಟಿಗರು ಹುಡುಕಿದ ಶಾಕಿಂಗ್ ಹೋಲಿಕೆಯೇನು?
ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ 'ಆಲ್ಫಾ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಆದರೆ, ಇದು ಫ್ರೆಂಚ್ ಥ್ರಿಲ್ಲರ್ 'ಲಾ ಫೆಮ್ಮೆ ನಿಕಿತಾ' ಚಿತ್ರದ ಕಾಪಿ ಎಂಬ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.
India Latest News Live 11 June 2026ಟಾಟಾ ನ್ಯಾನೋಗಿಂತಲೂ ಅಗ್ಗದ ಎಲೆಕ್ಟ್ರಿಕ್ ಕಾರ್ ಲಾಂಚ್ಗೆ ರೆಡಿ! - ಚಾರ್ಜಿಂಗ್ ಟೆನ್ಷನ್ ಇಲ್ಲ, ಕೇವಲ 2 ನಿಮಿಷದಲ್ಲಿ ಬ್ಯಾಟರಿ ಸ್ವಾಪ್ ಮಾಡಿ!
ಹೊಸ ಸ್ಟಾರ್ಟ್ಅಪ್ ಕಂಪನಿ Blinq Mobility ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತರಲಿದೆ. ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ಹೊಂದಿರುವ ಈ ಕಾರು, ಪ್ರತಿ ಚಾರ್ಜ್ಗೆ 250 ಕಿ.ಮೀ ರೇಂಜ್ ನೀಡಲಿದ್ದು, ಕೇವಲ 2 ನಿಮಿಷ 48 ಸೆಕೆಂಡುಗಳಲ್ಲಿ ಬ್ಯಾಟರಿ ಬದಲಾಯಿಸಬಹುದು.
India Latest News Live 11 June 20261993ರ ಬಾಂಬ್ ಸ್ಫೋಟಕ್ಕೂ ಮುನ್ನ ದಾವೂದ್ ಜೊತೆ 2 ಬಾರಿ ಭೇಟಿಯಾಗಿದ್ದ ರಿಷಿ ಕಪೂರ್ - ಕಾರಣವೇನು?
ತಮ್ಮ ಆತ್ಮಚರಿತ್ರೆ 'ಖುಲ್ಲಂ ಖುಲ್ಲಾ'ದಲ್ಲಿ ರಿಷಿ ಕಪೂರ್, 1993ರ ಮುಂಬೈ ಸ್ಫೋಟಕ್ಕೂ ಮುನ್ನ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಎರಡು ಬಾರಿ ಭೇಟಿಯಾಗಿದ್ದ ಘಟನೆ ಬಗ್ಗೆ ಬಹಿರಂಗವಾಗಿ ಬರೆದಿದ್ದರು. ಆ ಭೇಟಿಯ ಸಂಪೂರ್ಣ ಕಥೆ ಇಲ್ಲಿದೆ.
India Latest News Live 11 June 2026ತಾಯ್ತನದ ಬ್ರೇಕ್ ಮುಗೀತು, ಮತ್ತೆ ತೆರೆಗೆ ಬರ್ತಾರಾ ಕತ್ರಿನಾ ಕೈಫ್? OTT ಎಂಟ್ರಿ ಬಗ್ಗೆ ಭಾರೀ ಚರ್ಚೆ!
ತಾಯ್ತನದ ಖುಷಿಯಲ್ಲಿ ನಟನೆಗೆ ಬ್ರೇಕ್ ಕೊಟ್ಟಿದ್ದ ಕತ್ರಿನಾ ಕೈಫ್, ಈಗ ಮತ್ತೆ ಕಮ್ಬ್ಯಾಕ್ಗೆ ರೆಡಿಯಾಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸದ್ಯ ಸ್ಕ್ರಿಪ್ಟ್ಗಳನ್ನು ಓದುತ್ತಿದ್ದು, 2027ರಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
India Latest News Live 11 June 2026ಇದಪ್ಪಾ ನ್ಯಾಯ ಅಂದ್ರೆ - ಆಸ್ತಿ ಸಿಕ್ಕ ಬೆನ್ನಲ್ಲೇ ಅಜ್ಜಿಯನ್ನ ಬೀದಿಗೆ ತಳ್ಳಿದ ಮೊಮ್ಮಕ್ಕಳು; 89ರ ವೃದ್ಧೆಗೆ ಜಮೀನು ವಾಪಾಸ್ ಕೊಟ್ಟ ಕೋರ್ಟ್
ಮಹಾರಾಷ್ಟ್ರದ ಲಾತೂರ್ನಲ್ಲಿ, 89 ವರ್ಷದ ವೃದ್ಧೆಯೊಬ್ಬರು ತಮ್ಮನ್ನು ನೋಡಿಕೊಳ್ಳುತ್ತಾರೆಂಬ ನಂಬಿಕೆಯ ಮೇಲೆ ಮೊಮ್ಮಕ್ಕಳಿಗೆ 7.5 ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಆಸ್ತಿ ಪಡೆದ ನಂತರ ಮೊಮ್ಮಕ್ಕಳು ಅವರನ್ನು ಅಲಕ್ಷಿಸಿದಾಗ ಕೋರ್ಟ್ ಮೆಟ್ಟಿಲೇರಿ ಗೆಲುವು ಕಂಡಿದ್ದಾರೆ.
India Latest News Live 11 June 2026ಪ್ರಣೀತ್ ಮೋರೆ ಕಾಮಿಡಿ ಶೋನಲ್ಲಿ ಪುರುಷ ಶವದ ಖಾಸಗಿ ಅಂಗಗಳ ಸೈಜ್ ಬಗ್ಗೆ ಮಾತನಾಡಿ ಆಕ್ರೋಶಕ್ಕೆ ಗುರಿಯಾದ ಲೇಡಿ ಡಾಕ್ಟರ್
ಸ್ಟ್ಯಾಂಡ್ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಅವರ ಶೋನಲ್ಲಿ, ಮಹಿಳಾ ವೈದ್ಯೆ ಸೆಜಾಲ್ ಪವಾರ್ ಅವರು ಪುರುಷರ ಶವಗಳ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರ ಟೀಕೆಗೆ ಗುರಿಯಾದ ನಂತರ, ವೈದ್ಯೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
India Latest News Live 11 June 2026Fifa World Cup 2026 - 300 ಕೆಜಿ ಮೀನು, 6000 ಕಿತ್ತಳೆ ಹಣ್ಣು..! ವಿಶ್ವಕಪ್ ಟೂರ್ನಿಗಾಗಿ ತಾಯ್ನಾಡಿನ ಆಹಾರ ತಂದ ಟೀಮ್
India Latest News Live 11 June 2026ನಿರುದ್ಯೋಗಿಗಳಿಗೆ ಬಾಗಿಲು ಕ್ಲೋಸ್ ಮಾಡಿದ TCS ಕಂಪೆನಿ - ಲವ್ ಜಿಹಾದ್ ಬೆನ್ನಲ್ಲೇ ಏನಿದು ಮತ್ತೊಂದು ಶಾಕ್
ಟಾಟಾ ಒಡೆತನದ ಟಿಸಿಎಸ್ ಕಂಪನಿಯು ಇನ್ನು ಮುಂದೆ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸುವ ಮೂಲಕ ನಿರುದ್ಯೋಗಿಗಳಿಗೆ ಆಘಾತ ನೀಡಿದೆ. ಕೃತಕ ಬುದ್ಧಿಮತ್ತೆ (AI) ಮೇಲೆ ಭಾರಿ ಹೂಡಿಕೆ ಮಾಡುತ್ತಿರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.
India Latest News Live 11 June 2026ಅಕ್ಷಯ್ ಕುಮಾರ್ ಕೈ ತಳ್ಳಿದರಾ ಜಾಕಿ ಶ್ರಾಫ್? ವೈರಲ್ ವಿಡಿಯೋ ನೋಡಿ ನೆಟ್ಟಿಗರಲ್ಲಿ ಭಾರೀ ಚರ್ಚೆ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಜಾಕಿ ಶ್ರಾಫ್ ನಡುವಿನ ಒಂದು ಚಿಕ್ಕ ವಿಡಿಯೋ ಈಗ ಆನ್ಲೈನ್ನಲ್ಲಿ ಚರ್ಚೆಯ ವಿಷಯವಾಗಿದೆ. ಅಕ್ಷಯ್ ಕೈಯನ್ನು ಜಾಕಿ ತಳ್ಳಿದಂತೆ ಕಾಣುವ ಈ ದೃಶ್ಯ, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
India Latest News Live 11 June 2026IPL ಅದ್ಭುತ ಪ್ರದರ್ಶನದ ಹೊರತಾಗಿಯೂ ಭುವನೇಶ್ವರ್ ಕುಮಾರ್ಗೆ ಭಾರತ ತಂಡದಲ್ಲಿಲ್ಲ ಸ್ಥಾನ! ಕೊನೆಗೂ ಮೌನ ಮುರಿದ RCB ವೇಗಿ
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೀಗಿದ್ದೂ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಭುವನೇಶ್ವರ್ ಕುಮಾರ್ ಮೌನ ಮುರಿದಿದ್ದಾರೆ.
India Latest News Live 11 June 2026ಪೆಟ್ರೋಲ್ ಬಂಕ್ ಉದ್ಯೋಗಿ, ಪುಟ್ಟಣ್ಣ ಕಣಗಾಲ್ ಶಿಷ್ಯ, ಅಪೂರ್ವ ನಿರ್ದೇಶಕ ಭಾರತಿರಾಜ
ಭಾರತಿರಾಜ ಅವರು ಪುಟ್ಟಣ್ಣ ಕಣಗಾಲ್ ಅವರ ‘ರಂಗನಾಯಕಿ’ ಚಿತ್ರದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದವರು. ಹೀಗಾಗಿಯೇ ಭಾರತಿರಾಜ ಅವರನ್ನು ಪುಟ್ಟಣ್ಣ ಕಣಗಾಲ್ ಶಿಷ್ಯ ಅಂತಲೇ ಗುರುತಿಸುತ್ತಾರೆ.