
ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
ಲಿಂಗನಮಕ್ಕಿ ಜಲಾಶಯದ ಸಮಾನಾಂತರ ಅಣೆಕಟ್ಟಾಗಿರುವ ತಲಕಳಲೆ ಹಿನ್ನೀರಿನ ಪ್ರದೇಶದಲ್ಲಿ ನೆಲೆಸಿರುವ ಶ್ರೀ ಪದ್ಮಾವತಿ ದೇವಿ, ಭಕ್ತರ ನಂಬಿಕೆ ಮತ್ತು ಭಕ್ತಿಯ ಕಾರಣದಿಂದಲೇ ‘ಬಳೆ ಪದ್ಮಾವತಿ ದೇವಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾಳೆ.
ದೇವರಿಗೆ ಹರಕೆ ಹೊತ್ತಾಗ ಸೀರೆ, ಬಂಗಾರ, ಬೆಳ್ಳಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸಮರ್ಪಿಸುವುದು ಸಾಮಾನ್ಯ. ಆದರೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಸಮೀಪದ ವಡನಬೈಲು ಗ್ರಾಮದಲ್ಲಿರುವ ಶ್ರೀ ಪದ್ಮಾವತಿ ದೇವಿಗೆ ಭಕ್ತರು ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸುತ್ತಾರೆ. ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆಯ ಕಾಣಿಕೆ! ಲಿಂಗನಮಕ್ಕಿ ಜಲಾಶಯದ ಸಮಾನಾಂತರ ಅಣೆಕಟ್ಟಾಗಿರುವ ತಲಕಳಲೆ ಹಿನ್ನೀರಿನ ಪ್ರದೇಶದಲ್ಲಿ ನೆಲೆಸಿರುವ ಶ್ರೀ ಪದ್ಮಾವತಿ ದೇವಿ, ಭಕ್ತರ ನಂಬಿಕೆ ಮತ್ತು ಭಕ್ತಿಯ ಕಾರಣದಿಂದಲೇ ‘ಬಳೆ ಪದ್ಮಾವತಿ ದೇವಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾಳೆ.
ತಮ್ಮ ಇಷ್ಟಾರ್ಥಗಳು ನೆರವೇರಲಿ, ಸಂಕಷ್ಟಗಳು ದೂರವಾಗಲಿ ಎಂಬ ನಂಬಿಕೆಯಿಂದ ಭಕ್ತರು ದೇವಿಗೆ ಬಳೆಗಳನ್ನು ಅರ್ಪಿಸುತ್ತಾರೆ. ಹರಕೆ ಈಡೇರಿದ ಬಳಿಕ ಮತ್ತೆ ದೇವಿಯ ಸನ್ನಿಧಿಗೆ ಬಂದು ಬಳೆಗಳನ್ನು ಸಮರ್ಪಿಸುವ ಸಂಪ್ರದಾಯವೂ ಇಲ್ಲಿ ನಡೆದುಕೊಂಡು ಬಂದಿದೆ. ಹೀಗಾಗಿ, ಭಕ್ತಿಯ ಸಂಕೇತವಾಗಿ ಬಳೆಗಳನ್ನೇ ಸ್ವೀಕರಿಸುವ ಈ ವಿಶಿಷ್ಟ ಶಕ್ತಿದೇವಿಯ ಕ್ಷೇತ್ರವು ಜೋಗ-ಸಾಗರ ಭಾಗದ ಧಾರ್ಮಿಕ ಪರಂಪರೆಯಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.