Published : Aug 07, 2026, 07:41 AM ISTUpdated : Aug 07, 2026, 10:33 PM IST

National News Live: 70 ವರ್ಷಗಳಿಂದ ‘Old Monk’ ಇಷ್ಟು ಫೇಮಸ್ ಆಗಿದ್ದು ಹೇಗೆ? ಭಾರತದ ಐಕಾನಿಕ್ ರಮ್ ಕಥೆ ಗೊತ್ತಾ?

ಸಾರಾಂಶ

ಮುಂಬೈ (ಆ.7): 'ಜೆನ್ ಝೀಗಳು ಕೂಡಾ ನಮ್ಮವರೇ. ಅವರು ತಮ್ಮ ಕಳವಳಗಳ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆಂದರೆ ಅದನ್ನು ಖಂಡಿತಾ ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಜೆನ್ ಝೀಗಳು ಪ್ರತಿಭಟನೆ ನಡೆಸುತ್ತಿದ್ದಾರೆಂದ ಮಾತ್ರಕ್ಕೆ ಅವರು ದೇಶಾ ವಿರೋಧಿಗಳಾಗಲ್ಲ, ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ನ್ಯಾಯಸಮ್ಮತ ರೂಪ' ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ ಇತ್ತೀಚೆ ದೆಹಲಿಯಲ್ಲಿ ನಡೆದ ಜೆನ್ ಝೀ ಪ್ರತಿಭಟನೆ, ಅದಕ್ಕೆ ದೇಶವ್ಯಾಪಿ ವ್ಯಕ್ತವಾದಪರ-ವಿರೋಧ ಅಭಿಪ್ರಾಯಗಳು ಬೆನ್ನಲ್ಲೇ ಭಾಗವತ್ ವ್ಯಕ್ತಪಡಿಸಿದ ಈ ಅಭಿಪ್ರಾಯ ಭಾರೀ ಮಹತ್ವ ಪಡೆದುಕೊಂಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:33 PM (IST) Aug 07

70 ವರ್ಷಗಳಿಂದ ‘Old Monk’ ಇಷ್ಟು ಫೇಮಸ್ ಆಗಿದ್ದು ಹೇಗೆ? ಭಾರತದ ಐಕಾನಿಕ್ ರಮ್ ಕಥೆ ಗೊತ್ತಾ?

ಭಾರತದಲ್ಲಿ ರಮ್ ಎಂದಾಕ್ಷಣ ಅನೇಕರಿಗೆ ಮೊದಲು ನೆನಪಾಗುವ ಹೆಸರು ‘ಓಲ್ಡ್ ಮಾಂಕ್’. ಏಳು ದಶಕಗಳಿಗೂ ಹೆಚ್ಚು ಕಾಲ ಭಾರತೀಯರೊಂದಿಗೆ ಬೆಸೆದುಕೊಂಡಿರುವ ಈ ಡಾರ್ಕ್ ರಮ್, ಕೇವಲ ಮದ್ಯದ ಬ್ರ್ಯಾಂಡ್ ಆಗಿ ಉಳಿದಿಲ್ಲ.

Read Full Story

09:26 PM (IST) Aug 07

ಎಲ್ಲಿಂದ ಎಲ್ಲಿಗೆ ಲಿಂಕ್? 'ಕೇಸರಿ ಬಣ್ಣ'ದ ಉಡುಪು ಧರಿಸಿದ್ದಕ್ಕೆ ವಿಚಿತ್ರ ಪ್ರಶ್ನೆ, 'ಕಣ್ಸನ್ನೆ' ಬೆಡಗಿಯ ಸಖತ್ ರಿಪ್ಲೈ ವೈರಲ್!

'ಪ್ರಿಯಾ ಅವರೇ, ನೀವು ಇಂದು ಕೇಸರಿ ಬಣ್ಣದ ಉಡುಪನ್ನೇ ಏಕೆ ಧರಿಸಿದ್ದೀರಿ? ಇದಕ್ಕೆ ಯಾವುದಾದರೂ ವಿಶೇಷ ಕಾರಣವಿದೆಯೇ? ಕೇರಳದಲ್ಲಿ ಸದ್ಯ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ, ಅದಕ್ಕೇನಾ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಮರೆಯಲಾಗದ ಉತ್ತರ ಕೊಟ್ಟಿದ್ದಾರೆ, ನೋಡಿ..!

Read Full Story

07:34 PM (IST) Aug 07

ಬೋಲ್ಡ್ ಇಮೇಜ್ ಮರೆತು ಸಿಲ್ಕ್ ಸ್ಮಿತಾ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಈ ನಿರ್ಮಾಪಕರಿಗಾಗಿ!

ಒಂದು ಕಾಲದಲ್ಲಿ ಸ್ಟಾರ್ ನಟಿಯರಿಗಿಂತ ಹೆಚ್ಚು ಜನಪ್ರಿಯತೆ ಗಳಿಸಿದ್ದ ನಟಿ ಸಿಲ್ಕ್ ಸ್ಮಿತಾ. ಆದರೆ ಬೋಲ್ಡ್ ಪಾತ್ರಗಳಿಗೆ ಸೀಮಿತವಾದ ಕಾರಣ ಅವರ ಹೆಸರು ಮರೆಯಾಯ್ತು. ಬರೀ ಬೋಲ್ಡ್ ಪಾತ್ರಗಳನ್ನೇ ಮಾಡುತ್ತಿದ್ದ ಈ ನಟಿಗೆ ರೇಷ್ಮೆ ಸೀರೆ ಉಡಿಸಿ, ವಿಭಿನ್ನ ಪಾತ್ರ ನೀಡಿದ ನಿರ್ಮಾಪಕ ಯಾರು ಗೊತ್ತಾ?

Read Full Story

07:09 PM (IST) Aug 07

‘ದಸರಾ’ಗಿಂತಲೂ ನಾನಿಯ ಈ ಲುಕ್ ಹಿಂದೆ ಇದೆ ಭಯಾನಕ ಕಥೆ - ‘ದಿ ಪ್ಯಾರಡೈಸ್’ ಟೀಸರ್‌ನಲ್ಲಿ ಏನಿದೆ?

ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಓದೆಲಾ ಕಾಂಬಿನೇಷನ್‌ನ ಪ್ಯಾನ್-ಇಂಡಿಯಾ ಸಿನಿಮಾ 'ದಿ ಪ್ಯಾರಡೈಸ್'. 'ದಸರಾ' ಬ್ಲಾಕ್‌ಬಸ್ಟರ್ ಹಿಟ್ ನಂತರ ಈ ತಂಡ ಮತ್ತೆ ಒಂದಾಗಿದೆ.

Read Full Story

06:28 PM (IST) Aug 07

ಐಪಿಎಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಬೆನ್ನಲ್ಲೇ ಈ ತಂಡದ ಪರ ಆಡಲು ರೆಡಿಯಾದ ಅಜಿಂಕ್ಯ ರಹಾನೆ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಭಾರತದ ಮಾಜಿ ನಾಯಕ ಅಜಿಂಕ್ಯ ರಹಾನೆ ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅವರು ಸ್ಟೀವ್ ವಾ ಮತ್ತು ಅಭಿಷೇಕ್ ಬಚ್ಚನ್ ಸಹ-ಮಾಲೀಕತ್ವದ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡವನ್ನು ಸೇರಿಕೊಂಡಿದ್ದು, ತಮ್ಮ ಅನುಭವದಿಂದ ತಂಡಕ್ಕೆ ಬಲ ತುಂಬಲಿದ್ದಾರೆ.
Read Full Story

06:02 PM (IST) Aug 07

Tirumala Devotees - ತಿರುಮಲ ಕ್ಯೂಲೈನ್‌ನಲ್ಲಿ ಭಕ್ತರ ಕಷ್ಟಗಳಿಗೆ ಚೆಕ್‌ಮೇಟ್; ಇನ್ಮೇಲೆ ಕಾಯೋದಕ್ಕೆ ಬ್ರೇಕ್, ಶೀಘ್ರ ದರ್ಶನ!

ತಿರುಮಲದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿ ಕ್ಯೂ ಲೈನ್‌ನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲುವ ಭಕ್ತರಿಗೆ ಸರಿಯಾದ ಸಮಯದಲ್ಲಿ ಅನ್ನಪ್ರಸಾದ ಪೂರೈಸುವ ಹೊಸ ವಿಧಾನವನ್ನು ಟಿಟಿಡಿ ಜಾರಿ ಮಾಡುತ್ತಿದೆ. ಪ್ರಯೋಗಾತ್ಮಕಾಗಿ ಈ ಯೋಜನೆ ಜಾರಿಯಾಗಿದ್ದು, ಭಕ್ತರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

Read Full Story

05:34 PM (IST) Aug 07

ರಾಜಮೌಳಿ ಸೊಸೆ ಹಿನ್ನೆಲೆ ಗೊತ್ತಾ? ಖ್ಯಾತ ನಟ ಜಗಪತಿ ಬಾಬು ಜೊತೆಗಿರುವ ಸಂಬಂಧವೇನು?

ವಿಶ್ವವೇ ಮೆಚ್ಚಿದ ತೆಲುಗು ನಿರ್ದೇಶಕ ರಾಜಮೌಳಿ. ಅವರ ಕುಟುಂಬದ ಪ್ರತಿಯೊಬ್ಬರಿಗೂ ಸಿನಿಮಾದ ನಂಟಿದೆ. ಆದರೆ ರಾಜಮೌಳಿ ಮನೆಗೆ ಸೊಸೆಯಾಗಿ ಬಂದ ಪೂಜಾ ಪ್ರಸಾದ್ ಕೂಡ ದೊಡ್ಡ ಸಿನಿಮಾ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ ಎಂಬ ವಿಚಾರ ನಿಮಗೆ ಗೊತ್ತಾ?

Read Full Story

05:16 PM (IST) Aug 07

ಇದು 'ರಾಜಾಹುಲಿ' ಸ್ಟೋರಿ.. 'ಟಾಕ್ಸಿಕ್' ಟ್ರೇಲರ್ ಈವೆಂಟ್‌ ಜಾಗಕ್ಕೂ ಯಶ್‌ಗೂ ಮರೆಯಲಾಗದ ನಂಟಿದೆ, ಏನದು ನೋಡಿ!

ಯಶ್ ನಟನೆ, ಗೀತೂ ಮೋಹನದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಟಾಕ್ಸಿಕ್ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಾಳೆ ಟ್ರೇಲರ್ ಬಿಡುಗಡೆ..

Read Full Story

05:16 PM (IST) Aug 07

1987ರಿಂದ ಒಂಟಿ ಜೀವನ, ಸಾವಿಗೂ ಭಯವಿಲ್ಲ - 80ರ ವಯಸ್ಸಿನಲ್ಲೂ ನಟಿಸುತ್ತಿರುವ ಉಷಾ ನಾಡಕರ್ಣಿ

Usha Nadkarni: ಹಿರಿಯ ನಟಿ ಉಷಾ ನಾಡಕರ್ಣಿ ಅವರಿಗೆ ಈಗ 80 ವರ್ಷ. 1987ರಿಂದಲೂ ಮುಂಬೈನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಭಯವಿದ್ದರೂ ಈಗ ಒಂಟಿತನವನ್ನೇ ಅಪ್ಪಿಕೊಂಡಿದ್ದಾರೆ.

Read Full Story

04:34 PM (IST) Aug 07

Monsoon Cloud - ಚೀನಾದಿಂದ ಬಂತು 3500KM ಉದ್ದದ ಮಾನ್ಸೂನ್ ಮೋಡ; ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭರ್ಜರಿ ಮಳೆ ಅಲರ್ಟ್!

ಭಾರತದ ಇನ್ಸಾಟ್-3ಡಿಎಸ್ ಉಪಗ್ರಹವು ಚೀನಾದಿಂದ ಭಾರತದವರೆಗೆ ಹರಡಿರುವ ಬೃಹತ್ ಮಾನ್ಸೂನ್ ಮೋಡದ ಚಿತ್ರವನ್ನು ಸೆರೆಹಿಡಿದಿದೆ. ಇದು ಚಂಡಮಾರುತವಲ್ಲದಿದ್ದರೂ, ಗುಡುಗು ಸಹಿತ ಭಾರಿ ಮಳೆಯನ್ನು ತರುವ ಸಕ್ರಿಯ ಮಾನ್ಸೂನ್ ಮಾರುತಗಳ ಸರಣಿಯಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
Read Full Story

03:39 PM (IST) Aug 07

ಲಂಕಾ ಟೆಸ್ಟ್‌ಗೂ ಮುನ್ನವೇ ಸರ್ಪರಾಜ್ ಖಾನ್ ನಿಗೂಢ ಪೋಸ್ಟ್ - ಭಾರೀ ವಿವಾದ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಿಂದ ಕೈಬಿಟ್ಟ ನಂತರ, ಬ್ಯಾಟರ್ ಸರ್ಫರಾಜ್ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ರಹಸ್ಯ ಪೋಸ್ಟ್ ಹಂಚಿಕೊಂಡಿದ್ದಾರೆ. ಕಳೆದ ಸರಣಿಯಲ್ಲಿ ಶತಕ ಸಿಡಿಸಿದ್ದರೂ ತಮ್ಮನ್ನು ಕಡೆಗಣಿಸಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪೋಸ್ಟ್ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Read Full Story

03:37 PM (IST) Aug 07

ನಿಮ್ಮ ದೇಹದಲ್ಲಿ ಕಿಡ್ನಿ ವರ್ಕ್‌ ಆಗ್ತಿಲ್ಲ ಅಂತಾ ಮುನ್ಸೂಚನೆ ನೀಡೋ ವಿಚಾರಗಳಿವು..

ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಾಗಿದ್ದು, ರಕ್ತವನ್ನು ಶುದ್ಧೀಕರಿಸಿ ತ್ಯಾಜ್ಯವನ್ನು ಹೊರಹಾಕುತ್ತವೆ. ಈ ಲೇಖನವು ಕಿಡ್ನಿಗಳ ಕಾರ್ಯಗಳು, ವೈಫಲ್ಯದ ಆರಂಭಿಕ ಲಕ್ಷಣಗಳು, ಮತ್ತು ಅವುಗಳನ್ನು ಆರೋಗ್ಯವಾಗಿಡಲು ಬೇಕಾದ ಉಪಾಯಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತದೆ.
Read Full Story

03:17 PM (IST) Aug 07

ಕೊಹ್ಲಿಯೂ ಅಲ್ಲ, ಧೋನಿಯೂ ಅಲ್ಲ, ಗಂಗೂಲಿ ಅಲ್ಲವೇ ಅಲ್ಲ! ಈತನೇ ಭಾರತದ ಅತ್ಯುತ್ತಮ ಕ್ಯಾಪ್ಟನ್ ಎಂದ ಅಜಿಂಕ್ಯ ರಹಾನೆ!

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನಾಗಿ ಅಜಿಂಕ್ಯ ರಹಾನೆ ಅಚ್ಚರಿಯ ಹೆಸರನ್ನು ಆಯ್ಕೆ ಮಾಡಿದ್ದಾರೆ. ಧೋನಿ, ಕೊಹ್ಲಿ ಬದಲು ಸಚಿನ್ ತೆಂಡೂಲ್ಕರ್ ಅವರನ್ನು ಹೆಸರಿಸಿದ್ದು, ಅವರ ಈ ಆಯ್ಕೆಯ ಹಿಂದಿನ ಕಾರಣ ಮತ್ತು ಸಚಿನ್ ಅವರ ನಾಯಕತ್ವದ ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ.
Read Full Story

03:12 PM (IST) Aug 07

ಸಾಲ ವಸೂಲಾತಿ ನಿಯಮಗಳನ್ನು ಬಿಗಿಗೊಳಿಸಿದ ಆರ್‌ಬಿಐ; ನೂತನ ಮಾರ್ಗದರ್ಶಿ ಸೂತ್ರ ಪ್ರಕಟ

ಸಾಲದ ಕಂತು ಪಾವತಿಸದ ಗ್ರಾಹಕರಿಗೆ ಆಗುವ ಕಿರುಕುಳ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಾಲ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Read Full Story

03:12 PM (IST) Aug 07

ಅಲಾಸ್ಕಾದಲ್ಲಿ ಕರಗಿದ ಹಿಮನದಿ, ಜನ್ಮತಳೆದ ಹೊಸ ದ್ವೀಪ! ನಾಸಾ ಉಪಗ್ರಹ ಚಿತ್ರಗಳಲ್ಲಿ ಬಯಲಾಯ್ತು ಪ್ರಕೃತಿಯ ಭೀಕರತೆ!

ಜಾಗತಿಕ ತಾಪಮಾನದಿಂದ ಅಲಾಸ್ಕಾದ ಅಲ್ಸೆಕ್ ಹಿಮನದಿ ಕರಗಿ, 'ಪ್ರೋ ನಾಬ್' ಎಂಬ ಭೂಭಾಗವು ಹೊಸ ದ್ವೀಪವಾಗಿ ಮಾರ್ಪಟ್ಟಿದೆ. ನಾಸಾ ದತ್ತಾಂಶಗಳು ಈ ಬದಲಾವಣೆಯನ್ನು ದೃಢಪಡಿಸಿದ್ದು, ಇದು ಅಲ್ಸೆಕ್ ನದಿಯ ಮಾರ್ಗ ಬದಲಾವಣೆ ಮತ್ತು ಜೀವವೈವಿಧ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ.
Read Full Story

03:10 PM (IST) Aug 07

Big updates - ಗೂಗಲ್ ಮ್ಯಾಪ್ ಬಳಸೋರು ಓದಲೇಬೇಕಾದ ಸ್ಟೋರಿ..!

ಕಳೆದ ಎರಡು ದಶಕಗಳಿಂದ ನಮಗೆ ಅಪರಿಚಿತ ದಾರಿಗಳಲ್ಲಿ ದಾರಿದೀಪವಾಗಿದ್ದ ಗೂಗಲ್ ಮ್ಯಾಪ್ಸ್ (Google Maps) ಈಗ ಕೇವಲ ನಕ್ಷೆಯಾಗಿ ಉಳಿದಿಲ್ಲ. ಗೂಗಲ್ ಸಂಸ್ಥೆಯು ತನ್ನ ಮ್ಯಾಪ್ಸ್ ಅಪ್ಲಿಕೇಶನ್‌ಗೆ ಭರ್ಜರಿ ಅಪ್‌ಡೇಟ್ ನೀಡಿದ್ದು, ಇನ್ನು ಮುಂದೆ ಇದು ನಿಮ್ಮ ಪರ್ಸನಲ್ ಅಸಿಸ್ಟೆಂಟ್‌ನಂತೆ ಕೆಲಸ ಮಾಡಲಿದೆ. ಏನದು ? ತಿಳಿದುಕೊಳ್ಳಲು ಸ್ಟೋರಿ ಓದಿ..

Read Full Story

02:59 PM (IST) Aug 07

ಒಂದು ತಿಂಗಳು ವೆಬ್ ಸೀರಿಸ್ ನೋಡಿ ಪತ್ನಿ ಹತ್ಯೆ, ₹12 ಲಕ್ಷ ಜೊತೆ ಪರಾರಿಯಾದ ಪತಿ ಅರೆಸ್ಟ್ ಆಗಿದ್ದು ಹೇಗೆ?

ಸತತ ಒಂದು ತಿಂಗಳಿನಿಂದಲೂ ಹೆಚ್ಚು ಕಾಲ ಕ್ರೈಂ ಹಾಗೂ ಎಸ್ಕೇಪ್ ಕುರಿತ ವೆಬ್ ಸೀರಿಸ್ ನೋಡಿದ್ದಾನೆ. ಎಲ್ಲಾ ವಿದ್ಯೆ ಕರಗತ ಮಾಡಿಕೊಂಡ ಗಂಡ, ಪತ್ನಿಯನ್ನೇ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈತನ ಅರೆಸ್ಟ್ ಕೂಡ ವೆಬ್ ಸಿರೀಸ್ ಪ್ರಕಾರವೇ ನಡೆದಿದೆ.

Read Full Story

02:56 PM (IST) Aug 07

ಭಾರತ ವಿಶ್ವದ AI ಬಳಕೆಯ ರಾಜಧಾನಿಯಾಗಲಿದೆ, ದೊಡ್ಡ ಕಂಪನಿಗಳಲ್ಲಿ ಲೇ ಆಫ್, ಸಣ್ಣ ಉದ್ಯಮಗಳಿಗೆ ವರ - ನಂದನ್ ನಿಲೇಕಣಿ

ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಭಾರತವು ಬೃಹತ್ AI ಮಾದರಿಗಳ ಬದಲು ಸಾರ್ವಜನಿಕ ಸೇವೆಗಳಲ್ಲಿ 'ಅನ್ವಯಿಕ AI' ಅಳವಡಿಕೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದ್ದಾರೆ. ಎಐ ಯಾಂತ್ರೀಕರಣದಿಂದಾಗಿ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ನಷ್ಟವಾಗಲಿದ್ದು, ಭವಿಷ್ಯದಲ್ಲಿ ಸಣ್ಣ, ವೈಯಕ್ತಿಕ ಉದ್ಯಮಗಳು ಆರ್ಥಿಕತೆಗೆ ಆಧಾರವಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Read Full Story

02:34 PM (IST) Aug 07

19ನೇ ವಯಸ್ಸಿನಲ್ಲಿ ಮಾರಕ ಕಾಯಿಲೆಗೆ ಎರಡೂ ಕಾಲು ಕಳೆದುಕೊಂಡರೂ ಬದುಕಿನ ಹೊಸ ಅಧ್ಯಾಯ ಬರೆದ ಆಮಿ ಸ್ಪೂರ್ತಿದಾಯಕ ಕಥೆ!

19ನೇ ವಯಸ್ಸಿನಲ್ಲಿ ಅಪರೂಪದ ಸೋಂಕಿನಿಂದ ಎರಡೂ ಕಾಲುಗಳನ್ನು ಕಳೆದುಕೊಂಡ ಆಮಿ ಪರ್ಡಿ, ನಂತರ ಮೂತ್ರಪಿಂಡ ವೈಫಲ್ಯವನ್ನೂ ಎದುರಿಸಿದರು. ಆದರೆ, ಈ ಎಲ್ಲಾ ಆಘಾತಗಳನ್ನು ಮೀರಿ, ಅವರು ಮೂರು ಬಾರಿಯ ಪ್ಯಾರಾಲಿಂಪಿಕ್ ಪದಕ ವಿಜೇತೆಯಾಗಿ, ತಮ್ಮ ಅಂಗವೈಕಲ್ಯವನ್ನೇ ಶಕ್ತಿಯಾಗಿಸಿಕೊಂಡು ಜಗತ್ತಿಗೆ ಸ್ಪೂರ್ತಿಯಾದರು.
Read Full Story

02:03 PM (IST) Aug 07

12 ವರ್ಷದ ಬಾಲೆ ಈಗ AI ಎಂಜಿನಿಯರ್​ - ಅಪ್ಪನ ಕಷ್ಟಕ್ಕೆ ಮುಕ್ತಿ ಕೊಟ್ಟು ಜಗತ್ತಿನ ಕಿರಿಯ CEO ಆದವಳ ಸ್ಟೋರಿ

ಬ್ರಿಟಿಷ್ ಕೊಲಂಬಿಯಾದ 12 ವರ್ಷದ ಬಾಲಕಿ ಮನಾ ಜಂಪಾಲ, ತನ್ನದೇ ಆದ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್ಅಪ್ 'ವೋಕ್ಸಾ' ಅನ್ನು ಸ್ಥಾಪಿಸುವ ಮೂಲಕ ವಿಶ್ವದ ಅತಿ ಕಿರಿಯ AI ಉದ್ಯಮಿ ಎನಿಸಿಕೊಂಡಿದ್ದಾಳೆ. ತನ್ನ ತಂದೆಯ ವ್ಯವಹಾರದಲ್ಲಿನ ಸಮಸ್ಯೆಯಿಂದ ಸ್ಫೂರ್ತಿ ಪಡೆದು, ಗ್ರಾಹಕರ ಕರೆಗಳನ್ನು 24/7 ನಿರ್ವಹಿಸಲು ಸಹಾಯ ಮಾಡುವ AI-ಚಾಲಿತ ಸ್ವಾಗತಕಾರನನ್ನು ಈಕೆ ಅಭಿವೃದ್ಧಿಪಡಿಸಿದ್ದಾಳೆ.
Read Full Story

01:22 PM (IST) Aug 07

ಹತ್ತಾರು ವರ್ಷ ಕೆಲ್ಸ ಮಾಡಿದ್ರೂ ಹೊರ ದಬ್ಬುತ್ತಿದೆ ಅಮೆರಿಕ - ಬರಿಗೈನಲ್ಲಿ ಭಾರತಕ್ಕೆ ವಾಪಸಾಗ್ತಿರೋರ ಕಣ್ಣೀರ ಕಥೆ

ಅಮೆರಿಕದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳುವ ಕನಸಿನೊಂದಿಗೆ 12 ವರ್ಷಗಳ ಹಿಂದೆ ತೆರಳಿದ್ದ ಭಾರತೀಯ ಮಹಿಳೆಯೊಬ್ಬರು ಇದೀಗ ಬರಿಗೈಯಲ್ಲಿ ತಾಯ್ನಾಡಿಗೆ ಮರಳುವಂತಾಗಿದೆ. ಉದ್ಯೋಗದಾತರು ಆರು ತಿಂಗಳಿಂದ ಸಂಬಳ ನೀಡದ ಕಾರಣ H-1B ವೀಸಾ ರದ್ದಾಗಿದ್ದು, ತಮ್ಮ ಮೂವರು ಮಕ್ಕಳೊಂದಿಗೆ ಕಷ್ಟಪಟ್ಟು ಸಂಪಾದಿಸಿದ್ದನ್ನೆಲ್ಲಾ ಕಳೆದುಕೊಂಡು ಭಾರತಕ್ಕೆ ಮರಳುತ್ತಿರುವುದಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
Read Full Story

01:19 PM (IST) Aug 07

ಒಂಟಿ ಕಾಫಿ ಕಪ್ ಫೋಟೋ ಕಳುಹಿಸಿ, ಆಕರ್ಷಕ ಗಿಫ್ಟ್ ಗೆಲ್ಲಿ - ಟೀ - ಕಾಫಿ ಪ್ರಿಯರಿಗಾಗಿ ವಿನೂತನ ಆಫರ್!

ಜನಪ್ರಿಯ ಬ್ರ್ಯಾಂಡ್ ಬಿಸ್ಕಾಫ್ ಹಾಗೂ ಸ್ವಿಗ್ಗಿ ಡೈನ್‌ಔಟ್ 'ಡಿಎಂ ಎ ಲೋನ್ಲಿ ಕಪ್' ಎಂಬ ವಿನೂತನ ಅಭಿಯಾನವನ್ನು ಆರಂಭಿಸಿವೆ. ಈ ಅಭಿಯಾನದ ಅಡಿಯಲ್ಲಿ, ಗ್ರಾಹಕರು ಒಂಟಿ ಟೀ/ಕಾಫಿ ಕಪ್‌ಗಳ ಫೋಟೋ ಕಳುಹಿಸಿ ವಿಶೇಷ ಕಿಟ್ ಗೆಲ್ಲಬಹುದು ಹಾಗೂ ಭಾರತದ 8 ನಗರಗಳ 55ಕ್ಕೂ ಹೆಚ್ಚು ಕೆಫೆಗಳಲ್ಲಿ ಉಚಿತ ಬಿಸ್ಕಾಫ್ ಕುಕ್ಕೀಸ್ ಪಡೆಯಬಹುದು.
Read Full Story

12:58 PM (IST) Aug 07

10th ಬೇಸಿಗೆ ರಜಾದಲ್ಲಿ ಸುಮ್ನೆ ಮಜಾ ಮಾಡಲು ಬಂದು ಸೂಪರ್ ಸ್ಟಾರ್ ಆಗಿದ್ದು ಹೇಗೆ ಈ ಸುಂದರಿ!

ಚಿರಂಜೀವಿ, ಕಮಲ್ ಹಾಸನ್, ವಿಜಯ್, ಪ್ರಭಾಸ್, ಮಹೇಶ್ ಬಾಬು, ಅಜಿತ್, ವಿಕ್ರಮ್ ಹೀಗೆ ಸೌತ್ ಇಂಡಸ್ಟ್ರಿಯ ಎಲ್ಲ ಘಟಾನುಘಟಿಗಳ ಜೊತೆ ಸ್ಕ್ರೀನ್ ಶೇರ್ ಮಾಡಿರುವ ತ್ರಿಶಾ, ಪ್ರತಿ ಸಿನಿಮಾದಲ್ಲೂ ಹೊಸತನ ಮೆರೆದಿದ್ದಾರೆ. ಆದರೆ, ತ್ರಿಷಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಹೇಗೆ? ಈ ಸ್ಟೋರಿ ನೋಡಿ, ಶಾಕ್ ಆಗ್ತೀರಾ!

Read Full Story

12:56 PM (IST) Aug 07

ದಕ್ಷಿಣ ಕಾಶಿ 'ಕಾಳೇಶ್ವರ' ದೇಗುಲಕ್ಕೆ ಬುಲ್ಡೋಜರ್ ನುಗ್ಗಿಸಿದ ರೇವಂತ್ ರೆಡ್ಡಿ ಸರ್ಕಾರ..

'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ ಶೈವ ಕ್ಷೇತ್ರ ಕಾಳೇಶ್ವರ ಮುಕ್ತೇಶ್ವರ ದೇವಾಲಯ ಹೊಸ ರೂಪ ಪಡೆಯುತ್ತಿದೆ. ಪ್ರಾಣಹಿತ, ಗೋದಾವರಿ ಮತ್ತು ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಈ ದೇವಾಲಯದ ಭವ್ಯ ಪುನರ್ನಿರ್ಮಾಣ ಕಾರ್ಯ ಚುರುಕಿನಿಂದ ಸಾಗುತ್ತಿದೆ.

Read Full Story

12:43 PM (IST) Aug 07

ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್-ಸ್ಟಾಲಿನ್ ಮಧ್ಯೆ ಕಾವೇರಿ ಕಿಚ್ಚು, ಕರ್ನಾಟಕದೊಂದಿಗೆ ಮಾತನಾಡಿದ್ರೆ ತಪ್ಪೇನಿದೆ?

ಕಾವೇರಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ಕುರಿತು ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ತೀವ್ರ ವಾಗ್ವಾದ ನಡೆಯಿತು. ಸರ್ಕಾರದ ಕ್ರಮಗಳನ್ನು ಸ್ಟಾಲಿನ್ ಪ್ರಶ್ನಿಸಿದರೆ, ರೈತರ ಹಿತರಕ್ಷಣೆಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಸಿಎಂ ವಿಜಯ್ ತಿರುಗೇಟು ನೀಡಿದರು.
Read Full Story

12:28 PM (IST) Aug 07

ಇಂಡಿಗೋ 20ನೇ ವರ್ಷಾಚರಣೆಗೆ ಭರ್ಜರಿ ಗಿಫ್ಟ್, ಪ್ರಯಾಣಿಕರಿಗೆ ಉಚಿತ ಟಿಕೆಟ್, ಪಡೆಯುವುದು ಹೇಗೆ?

ಇಂಡಿಗೋ 20ನೇ ಆ್ಯನಿವರ್ಸರಿ ಆಚರಿಸುತ್ತಿದೆ. 20 ಸಾವಿರ ಲಕ್ಕಿ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡುತ್ತಿದೆ. 10 ರೂಪಾಯಿ ವರೆಗಿನ ಪ್ರಯಾಣ ಟಿಕೆಟ್ ಉಚಿತವಾಗಿ ಸಿಗಲಿದೆ. ಇಂಡಿಗೋದಲ್ಲಿ ಉಚಿತ ಟಿಕೆಟ್ ಪಡೆಯುವುದು ಹೇಗೆ?

Read Full Story

12:27 PM (IST) Aug 07

ಇಲ್ಲಿ ದ್ರಾಕ್ಷಿ ತೋಟಗಳ ರಕ್ಷಣೆಗೆ ಗೂಬೆಗಳ ನೇಮಕ.. ಕೋಟಿ, ಕೋಟಿ ಬೆಳೆಗಳಿಗೆ ಸೈನಿಕರಂತೆ ರಕ್ಷಣೆ..!

ರೈತರಿಗೆ ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಎಂದರೆ ಅದು 'ಆಕಾಶದ ಬೇಟೆಗಾರ' ಗೂಬೆಗಳು. ಕೋಟ್ಯಂತರ ರೂಪಾಯಿ ಬೆಳೆ ನಾಶ ಮಾಡುತ್ತಿದ್ದ ಇಲಿಗಳ ಗುಂಪನ್ನು ಬೇಟೆಯಾಡಲು ದ್ರಾಕ್ಷಿ ತೋಟಗಳ ಮಾಲೀಕರು ಒಂದು ವಿಶಿಷ್ಟ ತಂತ್ರ ರೂಪಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..

Read Full Story

12:01 PM (IST) Aug 07

ಇಂದು ಸಿಎಂ ವಿಜಯ್-ಸಂಗೀತಾ ಡಿವೋರ್ಸ್ ಕೇಸ್ ವಿಚಾರಣೆ; ಗಂಡ-ಹೆಂಡ್ತಿ ಒಂದಾಗೋ ಚಾನ್ಸ್‌ ಎಷ್ಟು ಪರ್ಸೆಂಟ್ ಇದೆ?

ದಶಕಗಳ ಕಾಲ ಪ್ರೀತಿಯಿಂದ ಸಂಸಾರ ನಡೆಸಿದ್ದ ಈ ಜೋಡಿಯ ನಡುವೆ ಇತ್ತೀಚಿನ ದಿನಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಸಂಗೀತಾ ಅವರು ಪತಿಯಿಂದ ಬೇರ್ಪಡಲು ನಿರ್ಧರಿಸಿ, ಡಿಸೆಂಬರ್ 23, 2025 ರಂದು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಂದು ರಿಸಲ್ಟ್‌ ಏನಾಗಬಹುದು? ಈ ಸ್ಟೋರಿ ನೋಡಿ..

Read Full Story

11:45 AM (IST) Aug 07

ಬಜೆಟ್‌ ಫ್ರೆಂಡ್ಲಿ ಬೆಲೆಯಲ್ಲಿ ಹೊಸ ಇವಿ? - ಆಗಸ್ಟ್ 29ಕ್ಕೆ ಲಾಂಚ್ ಆಗಲಿದೆ 'ಏಥರ್ ಕೋನಾರ್ಕ್'

ಏಥರ್ ಎನರ್ಜಿ ತನ್ನ ಹೊಸ ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ 'ಏಥರ್ ಕೋನಾರ್ಕ್' ಅನ್ನು ಆಗಸ್ಟ್ 29 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ 'ಇಎಲ್' ಪ್ಲಾಟ್‌ಫಾರ್ಮ್ ಆಧಾರಿತ ಈ ಸ್ಕೂಟರ್, ₹1 ಲಕ್ಷದಿಂದ ₹1.20 ಲಕ್ಷದ ಅಂದಾಜು ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ.

Read Full Story

11:27 AM (IST) Aug 07

ಲಂಕಾ ಟೆಸ್ಟ್ ಸರಣಿಗೂ ಮುನ್ನ ಬಿಗ್ ಶಾಕ್! ಇವತ್ತಿನ ಪಂದ್ಯದಿಂದ ಗಿಲ್ ಹೊರಕ್ಕೆ, KL ಕ್ಯಾಪ್ಟನ್!

ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ದೊಡ್ಡ ಆಘಾತ ಆಗಿದೆ. ಕ್ಯಾಪ್ಟನ್ ಶುಬ್ಮನ್ ಗಿಲ್ ಗಾಯದಿಂದ ಹೊರಬಿದ್ದಿದ್ದಾರೆ. ಅಷ್ಟಕ್ಕೂ ಗಿಲ್ ಅವರಿಗೆ ಏನಾಯ್ತು ಅನ್ನೋ ವಿವರ ಇಲ್ಲಿದೆ..

Read Full Story

11:01 AM (IST) Aug 07

Guidelines for LPG Customers - ಬಿಗ್ ಅಪ್ ಡೇಟ್, ನಿಮ್ಮ ಮನೆಯಲ್ಲಿ LPG ಸಿಲಿಂಡರ್ ಇದ್ದರೆ ಆಗಸ್ಟ್ 16ರ ಡೆಡ್ಲೈನ್ ಮಿಸ್ ಮಾಡಿಕೊಳ್ಳಬೇಡಿ; ಕಟ್ ಆಗುತ್ತೆ ಸಬ್ಸಿಡಿ!

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ತಮ್ಮ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸಲು ಆಗಸ್ಟ್ 16ರ ಗಡುವಿನೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕಿದೆ.

Read Full Story

10:28 AM (IST) Aug 07

ಪ್ರಸ್ತುತ ಬಿಜೆಪಿಯಲ್ಲಿ ನಿಮ್ಮಿಷ್ಟದ ರಾಜಕಾರಣಿ ಯಾರು? ಸ್ಪೆಷಲ್‌ ಹೆಸರಿನ ಮೂಲಕ ಸರ್‌ಪ್ರೈಸ್‌ ನೀಡಿದ ರಾಹುಲ್‌ ಗಾಂಧಿ

ಇನ್‌ಸ್ಟಾಗ್ರಾಮ್ ಸಂವಾದದಲ್ಲಿ, ರಾಹುಲ್ ಗಾಂಧಿ ಅವರು ಬಿಜೆಪಿಯಲ್ಲಿ ತಮ್ಮ ನೆಚ್ಚಿನ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅವರ ಶಾಂತ ಸ್ವಭಾವ ಮತ್ತು ಸೇನಾ ಜ್ಞಾನವನ್ನು ರಾಹುಲ್‌ ಗಾಂಧಿ ಶ್ಲಾಘಿಸಿದ್ದಾರೆ.

Read Full Story

09:58 AM (IST) Aug 07

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಶಿಲ್ಪಾಗೆ ಒಲಿದ ಅದೃಷ್ಟದ ಬಾಗಿಲು!

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ.ಶೈಲಾ ಅವರಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ ದೊರೆತಿದೆ. ಈ ಯಶಸ್ಸಿಗಾಗಿ ರಾಜ್ಯ ಸರ್ಕಾರವು ಅವರಿಗೆ ₹15 ಲಕ್ಷ ನಗದು ಬಹುಮಾನ ಮತ್ತು ಗ್ರೂಪ್ ‘ಬಿ’ ಹುದ್ದೆ ನೀಡುವುದಾಗಿ ಘೋಷಿಸಿದೆ.
Read Full Story

09:33 AM (IST) Aug 07

ಸತತ ಸೋಲು ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಫಿಟ್ನೆಸ್‌ ಪರೀಕ್ಷೆ ಕಠಿಣಗೊಳಿಸಿದ ಬಿಸಿಸಿಐ

ಭಾರತ ಕ್ರಿಕೆಟ್‌ ತಂಡದ ಆಟಗಾರರ ಪದೇ ಪದೇ ಗಾಯದ ಸಮಸ್ಯೆಯಿಂದಾಗಿ, ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ವೈದ್ಯಕೀಯ ತಂಡವು ಫಿಟ್ನೆಸ್‌ ಪರೀಕ್ಷೆಯನ್ನು ಕಠಿಣಗೊಳಿಸಿದೆ. ಯೋ-ಯೋ ಟೆಸ್ಟ್ ಬದಲು ಬ್ರಾಂಕೋ ಪರೀಕ್ಷೆ ಸೇರಿದಂತೆ ಹೊಸ ಮಾನದಂಡಗಳನ್ನು ಪರಿಚಯಿಸಲಾಗಿದ್ದು, ಹಿರಿಯ ಆಟಗಾರರಿಗಿದ್ದ ವಿನಾಯಿತಿಗಳನ್ನು ತೆಗೆದುಹಾಕಲಾಗಿದೆ.
Read Full Story

09:06 AM (IST) Aug 07

ಪ್ರಾದೇಶಿಕ ಪಕ್ಷಗಳಿಗೆ ಹರಿದುಬಂತು ₹1050 ಕೋಟಿ ದೇಣಿಗೆ - ₹366 ಕೋಟಿ ಸ್ವೀಕರಿಸಿ ಡಿಎಂಕೆ ದೇಶದಲ್ಲೇ ನಂ.1!

2024-25ನೇ ಸಾಲಿನಲ್ಲಿ ಪ್ರಾದೇಶಿಕ ಪಕ್ಷಗಳು 1051 ಕೋಟಿ ರು. ದೇಣಿಗೆ ಸ್ವೀಕರಿಸಿದ್ದು, ಇದು ಹಿಂದಿನ ವರ್ಷಕ್ಕಿಂತ 3 ಪಟ್ಟು ಹೆಚ್ಚಾಗಿದೆ. ಎಡಿಆರ್‌ ವರದಿ ಪ್ರಕಾರ, ಡಿಎಂಕೆ ಅತಿ ಹೆಚ್ಚು ದೇಣಿಗೆ ಪಡೆದಿದ್ದು, ಕಾರ್ಪೊರೇಟ್‌ ಸಂಸ್ಥೆಗಳಿಂದ ಹೆಚ್ಚಿನ ಹಣ ಹರಿದುಬಂದಿದೆ.
Read Full Story

08:45 AM (IST) Aug 07

ಎಸ್ಸಿ, ಎಸ್ಟಿಗೆ ಕೆನೆಪದರ ನೀತಿ ಅನ್ವಯವಿಲ್ಲ - ಕೇಂದ್ರ

ಎಸ್‌ಸಿ, ಎಸ್ಟಿ ಸಮುದಾಯದ ಮೀಸಲಾತಿಗೆ ಕೆನೆಪದರ ನೀತಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿರುವ ಸರ್ಕಾರ, ತನ್ನ ವಾದಕ್ಕೆ ಪೂರಕವಾಗಿ ಹಿಂದಿನ ಸಾಂವಿಧಾನಿಕ ಪೀಠದ ತೀರ್ಪನ್ನು ಉಲ್ಲೇಖಿಸಿದೆ.
Read Full Story

08:30 AM (IST) Aug 07

ಚಂದ್ರನ ಮೇಲೆ ಅಪ್ಪಳಿಸಿದ ಸ್ಪೇಸ್‌ ಎಕ್ಸ್‌ ರಾಕೆಟ್‌ - 60 ಅಡಿ ಅಗಲ ಕುಳಿ ನಿರ್ಮಾಣ

ಒಂದು ವರ್ಷದಿಂದ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್‌-9 ರಾಕೆಟ್‌ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅಪ್ಪಳಿಸಿದೆ. ಗಂಟೆಗೆ 5,400 ಮೈಲಿ ವೇಗದಲ್ಲಿ ಅಪ್ಪಳಿಸಿದ ಈ ರಾಕೆಟ್, ಚಂದ್ರನ ಮೇಲೆ ದೊಡ್ಡ ಕುಳಿಯನ್ನು ಸೃಷ್ಟಿಸಿರಬಹುದೆಂದು ಅಂದಾಜಿಸಲಾಗಿದೆ.

Read Full Story

08:08 AM (IST) Aug 07

ಕಳೆದ ವರ್ಷ ಮೋದಿ ವಿದೇಶ ಪ್ರವಾಸಕ್ಕೆ ₹180 ಕೋಟಿ ವೆಚ್ಚ

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ 23 ದೇಶಗಳ ಪ್ರವಾಸಕ್ಕೆ 180 ಕೋಟಿ ರೂ. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ. 2021ಕ್ಕೆ ಹೋಲಿಸಿದರೆ ಈ ವೆಚ್ಚವು 5 ಪಟ್ಟು ಹೆಚ್ಚಾಗಿದ್ದು, ಕಳೆದ 5 ವರ್ಷಗಳಲ್ಲಿ ಒಟ್ಟು 557.5 ಕೋಟಿ ರೂ. ಖರ್ಚಾಗಿದೆ.
Read Full Story

07:57 AM (IST) Aug 07

ಪ್ರಧಾನಿ ಮೋದಿ ಮತ್ತೊಂದು ವಿಡಿಯೋ ; ಈ ಬಾರಿ ಮನವಿ ಮಾಡಿದ್ದು ಏನೆಂದರೆ..

ಪ್ರಧಾನಿ ನರೇಂದ್ರ ಮೋದಿಯವರು, ಫ್ರೆಂಡ್‌ಶಿಪ್ ಡೇಯಷ್ಟೇ ಉತ್ಸಾಹದಿಂದ ಆಗಸ್ಟ್ 7ರ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲು ಯುವಜನರಿಗೆ ಕರೆ ನೀಡಿದ್ದಾರೆ. ವಿಡಿಯೋದಲ್ಲಿ ಏನೆಲ್ಲ ಮನವಿ ಮಾಡಿದರು ಅನ್ನೋ ವಿವರ ಇಲ್ಲಿದೆ..

Read Full Story

07:55 AM (IST) Aug 07

ಮೀಸಲಾತಿ ಇರುವುದು ದಮನಿತರ ಸಬಲೀಕರಣಕ್ಕೆ, ಅದು ಶಾಶ್ವತವಲ್ಲ - ಮೋಹನ್‌ ಭಾಗ್ವತ್‌

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಅವರು, ಮೀಸಲಾತಿ ಶಾಶ್ವತವಲ್ಲ ಮತ್ತು ಪ್ರಗತಿ ಸಾಧಿಸಿದವರು ಇತರರಿಗೆ ಅವಕಾಶ ನೀಡಬೇಕು ಎಂದು ಕರೆ ನೀಡಿದ್ದಾರೆ. ಜೆನ್‌ ಝೀ ಪ್ರತಿಭಟನೆಗಳನ್ನು ದೇಶವಿರೋಧಿ ಎಂದು ಪರಿಗಣಿಸಬಾರದು ಎಂದಿದ್ದಾರೆ.

Read Full Story

More Trending News