LIVE NOW
Published : Jun 30, 2026, 06:49 AM ISTUpdated : Jun 30, 2026, 12:35 PM IST

India Latest News Live: ಯುಪಿ ಕೋಟ್ಯಧಿಪತಿ ಮಗನ ಘರ್ ವಾಪ್ಸಿ - ಇಸ್ಲಾಂ ತೊರೆದು ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಆಯುಷ್ ಮಲಿಕ್!

ಸಾರಾಂಶ

ರಾಯ್‌ಪುರ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾದ ಸಿಬ್ಬಂದಿಯನ್ನು ತೆಗೆದುಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3 ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಹಾಗಿದ್ದರೆ ನಿಧಿ ದುರುಪಯೋಗ ಬೆಳಕಿಗೆ ಬರುವ ಮೊದಲು ಅವರನ್ನು ಯಾರು ರಕ್ಷಿಸುತ್ತಿದ್ದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಪವನ್ ಖೇರಾ, ‘ಅಯೋಧ್ಯಾ ಕಿ ಲೂಟ್ ಝಾಂಕಿ ಹೈ, ಕಾಶಿ-ಮಥುರಾ ಅಭಿ ಬಾಕಿ ಹೈ (ಅಯೋಧ್ಯೆಯಲ್ಲಿ ಆಪಾದಿತ ಲೂಟಿ ಕೇವಲ 1 ನೋಟ ಮಾತ್ರ, ಕಾಶಿ ಮತ್ತು ಮಥುರಾ ಇನ್ನೂ ಬಾಕಿ ಇದೆ)’ ಎಂದು ಕುಟುಕಿದರು.

‘ರಾಮ ಮಂದಿರ ಆಡಳಿತವನ್ನು ಆರ್‌ಎಸ್‌ಎಸ್ ಮತ್ತು ಪಿಎಂಒ ನೇರವಾಗಿ ನೋಡಿಕೊಳ್ಳುತ್ತಿದೆ. ಅಲ್ಲಿ ಏನಾದರೂ ತಪ್ಪು ನಡೆದಿದ್ದರೆ, ಬುಲ್ಡೋಜರ್‌ ಹೋಗುವುದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಿವಾಸಕ್ಕೋ ಅಥವಾ ಪಿಎಂಒಗೋ?’ ಎಂದೂ ಖೇರಾ ಪ್ರಶ್ನಿಸಿದರು.

12:34 PM (IST) Jun 30

ಯುಪಿ ಕೋಟ್ಯಧಿಪತಿ ಮಗನ ಘರ್ ವಾಪ್ಸಿ - ಇಸ್ಲಾಂ ತೊರೆದು ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಆಯುಷ್ ಮಲಿಕ್!

ಉತ್ತರ ಪ್ರದೇಶದ ಕೋಟ್ಯಾಧಿಪತಿ ಉದ್ಯಮಿಯ ಪುತ್ರ ಆಯುಷ್ ಮಲಿಕ್, ಫಿಸಿಯೋಥೆರಪಿಸ್ಟ್ ಪ್ರೇಮಕ್ಕೆ ಬಿದ್ದು ಇಸ್ಲಾಂಗೆ ಮತಾಂತರಗೊಂಡಿದ್ದರು. ಕುಟುಂಬದ ಆಸ್ತಿ ಲಪಟಾಯಿಸುವ ಪಿತೂರಿಯ ಆರೋಪದಡಿ ತನಿಖೆ ನಡೆಯುತ್ತಿದ್ದಂತೆಯೇ, ಇದೀಗ ಅವರು ಪೋಷಕರ ನೋವು ಕಂಡು 'ಘರ್ ವಾಪ್ಸಿ' ಮೂಲಕ ಹಿಂದೂ ಧರ್ಮಕ್ಕೆ ಮರಳಿದ್ದಾರೆ.
Read Full Story

12:09 PM (IST) Jun 30

ಮಾರ್ಕ್ ಜುಕರ್‌ಬರ್ಗ್ ಕನಸು! WhatsApp ಬಳಕೆ ಮಾಡೋರು 79 ರೂಪಾಯಿ ಕೊಡ್ಬೇಕು; ಯಾಕೆ?

whatsapp news: ಮೆಟಾ ಇತ್ತೀಚೆಗೆ ತನ್ನ ಎಲ್ಲಾ ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಪಾವತಿ ಆಧಾರಿತ ಚಂದಾದಾರಿಕೆ ಯೋಜನೆಗಳನ್ನು ಜಾಗತಿಕವಾಗಿ ಪರಿಚಯಿಸಿದೆ. ಇದು ಬಳಕೆದಾರರಲ್ಲಿ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಹಠಾತ್ ಶುಲ್ಕದ ನಿರ್ಧಾರದ ಹಿಂದಿನ ಕಾರಣಗಳೇನು? 

Read Full Story

11:20 AM (IST) Jun 30

ಪಂಜಾಬ್ ಕಿಂಗ್ಸ್ ಸ್ಟಾರ್ ಕ್ರಿಕೆಟಿಗ ಶಶಾಂಕ್ ಸಿಂಗ್‌ ಮೇಲೆ FIR ದಾಖಲು! ಅಯ್ಯೋ, ಯುವ ಕ್ರಿಕೆಟಿಗ ಹೀಗಾ ಮಾಡೋದು?

ಪಂಜಾಬ್ ಕಿಂಗ್ಸ್ ತಂಡದ ಕ್ರಿಕೆಟಿಗ ಶಶಾಂಕ್ ಸಿಂಗ್ ಮತ್ತು ಅವರ ತಂದೆ, ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಡುಗೆಯ ವಿಚಾರವಾಗಿ ತಮ್ಮ ಮನೆಯ ಕುಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲಿದೆ. ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

10:57 AM (IST) Jun 30

ಆಷಾಢ ಮೊದಲ ದಿನವೇ ಬಂಪರ್, ಇಳಿಕೆಯಾಯ್ತು ಚಿನ್ನದ ಬೆಲೆ; 18 ಸಾವಿರ ರೂ.ಗಳಷ್ಟು ಕಡಿಮೆಯಾದ ದರ

ಆಷಾಢ ಮಾಸದ ಮೊದಲ ದಿನದಂದೇ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಈ ಲೇಖನವು 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ ಹಾಗೂ ಪ್ರಮುಖ ನಗರಗಳಲ್ಲಿನ ಬೆಳ್ಳಿ ಮತ್ತು ಚಿನ್ನದ ಬೆಲೆ ವಿವರಗಳನ್ನು ನೀಡುತ್ತದೆ.
Read Full Story

10:07 AM (IST) Jun 30

Indus Water Treaty dispute - ಆಪರೇಷನ್ ಸಿಂದೂರ್ ಬಳಿಕವೂ ಬುದ್ಧಿ ಕಲಿಯದ ಪಾಕ್; ಭಾರತಕ್ಕೆ ಮತ್ತೆ ನೇರ ಬೆದರಿಕೆ! (Video))

ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಮತ್ತೆ ನೇರ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ಪಾಲಿನ ನೀರನ್ನು ಪಡೆಯಲು ಯತ್ನಿಸಿದರೆ ಕೈ ಕತ್ತರಿಸುವುದಾಗಿ ಉದ್ಧಟತನದ ಹೇಳಿಕೆ ನೀಡಿದ್ದು, ಈ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Read Full Story

09:29 AM (IST) Jun 30

ಐರ್ಲೆಂಡ್ ವಿರುದ್ಧ ಹೀನಾಯ ಸೋಲು, ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಮುಗಿಬಿದ್ದ ಫ್ಯಾನ್ಸ್!

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಸೋತ ನಂತರ, ಹೆಡ್ ಕೋಚ್ ಗೌತಮ್ ಗಂಭೀರ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ತಂಡದ ಆಯ್ಕೆ ಮತ್ತು ಅವರ 'ಆಲ್‌ರೌಂಡರ್' ನೀತಿಯ ಬಗ್ಗೆ ಸಂಜಯ್ ಮಂಜ್ರೇಕರ್ ಅವರಂತಹ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಐಸ್‌ಲ್ಯಾಂಡ್ ಕ್ರಿಕೆಟ್ ಕೂಡ ಗಂಭೀರ್ ಅವರನ್ನು ಅಣಕಿಸಿದೆ.
Read Full Story

08:44 AM (IST) Jun 30

ಭಾರತದ ಮೊಟ್ಟಮೊದಲ ‘ಕಡಲ ಏರ್ಪೋರ್ಟ್’ - ಮುಂಬೈ ಸಮುದ್ರದಲ್ಲೇ ತಲೆಯೆತ್ತಲಿದೆ ಅತ್ಯಾಧುನಿಕ ವಿಮಾನ ನಿಲ್ದಾಣ!

ಭಾರತದ ಮೊಟ್ಟಮೊದಲ 'ಆಫ್‌ಶೋರ್‌ ಏರ್ಪೋರ್ಟ್‌' ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ಕಡಲಿನಲ್ಲಿ ನಿರ್ಮಾಣವಾಗಲಿದೆ. ವಾಧ್ವಾನ್‌ ಬಂದರು ಯೋಜನೆಯ ಭಾಗವಾಗಿರುವ ಈ ನಿಲ್ದಾಣವು, ಬುಲೆಟ್ ಟ್ರೈನ್ ಹಾಗೂ ಸೀ ಲಿಂಕ್ ಸಂಪರ್ಕದೊಂದಿಗೆ ವಾರ್ಷಿಕ 9 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಗುರಿ ಹೊಂದಿದೆ.
Read Full Story

08:37 AM (IST) Jun 30

ಗ್ರೂಪ್ ಹಂತದಲ್ಲೇ ವಿಶ್ವಕಪ್‌ ಸೋತರೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ; ಪುರುಷರ ತಂಡದ ಭವಿಷ್ಯ ಡಿಸೆಂಬರ್‌ನಲ್ಲಿ ನಿರ್ಧಾರ!

ನವದೆಹಲಿ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದರೂ, ಭಾರತ ಮಹಿಳಾ ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಇನ್ನು ಪುರುಷರ ತಂಡದ ಕಥೆ ಏನು? ಅರ್ಹತಾ ಮಾನದಂಡಗಳೇನು? ನೋಡೋಣ ಬನ್ನಿ.

Read Full Story

08:35 AM (IST) Jun 30

ದೆಹಲಿಯಲ್ಲಿ 2028ರ ಏಪ್ರಿಲ್ 1ರಿಂದ ಇ-ಬೈಕ್‌ ಮಾತ್ರ ನೋಂದಣಿ; ಸರ್ಕಾರಿಂದ ಆರ್ಥಿಕ ಪ್ರೋತ್ಸಾಹ

ವಾಯುಮಾಲಿನ್ಯವನ್ನು ತಗ್ಗಿಸಲು, ರಾಜ್ಯ ಸರ್ಕಾರವು ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿಯನ್ನು ಅನುಮೋದಿಸಿದೆ. ಈ ನೀತಿಯ ಅಡಿಯಲ್ಲಿ, 2028ರಿಂದ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯನ್ನು ಹಂತಹಂತವಾಗಿ ನಿಲ್ಲಿಸಲಾಗುವುದು ಮತ್ತು ಇ-ವಾಹನ ಖರೀದಿಗೆ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು.

Read Full Story

07:48 AM (IST) Jun 30

FIFA World Cup 2026 - ಪ್ರಿ ಕ್ವಾರ್ಟರ್‌ಗೆ ಬ್ರೆಜಿಲ್‌, ಕೆನಡಾ ಲಗ್ಗೆ

ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ನಾಕೌಟ್‌ ಪಂದ್ಯಗಳಲ್ಲಿ ಬ್ರೆಜಿಲ್‌ ಹಾಗೂ ಕೆನಡಾ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಜಪಾನ್‌ ವಿರುದ್ಧ ಬ್ರೆಜಿಲ್‌ 2-1 ಗೋಲುಗಳಿಂದ ಗೆದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಕೆನಡಾ 1-0 ಅಂತರದಲ್ಲಿ ಐತಿಹಾಸಿಕ ಜಯ ಸಾಧಿಸಿತು.
Read Full Story

07:03 AM (IST) Jun 30

ಅಯೋಧ್ಯೆ ರಾಮಮಂದಿರದ ಹುಂಡಿ ಕಳ್ಳತನಕ್ಕೆ ಕರ್ನಾಟಕ ನಂಟು - ಅಖಿಲೇಶ್ ಯಾದವ್ ಆರೋಪ

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ದೇಣಿಗೆ ಕಳ್ಳತನದ ನಂಟು ಕರ್ನಾಟಕದ 'ಭೂಗತ' ವ್ಯಕ್ತಿಗಳಿಗೂ ವಿಸ್ತರಿಸಿದೆ ಎಂದು ಅವರು ಹೊಸ ಬಾಂಬ್ ಸಿಡಿಸಿದ್ದು, ಬಿಜೆಪಿ ದೇಶಕ್ಕಿಂತ ದೇಣಿಗೆಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.
Read Full Story

More Trending News