ರಾಯ್ಪುರ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾದ ಸಿಬ್ಬಂದಿಯನ್ನು ತೆಗೆದುಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3 ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಹಾಗಿದ್ದರೆ ನಿಧಿ ದುರುಪಯೋಗ ಬೆಳಕಿಗೆ ಬರುವ ಮೊದಲು ಅವರನ್ನು ಯಾರು ರಕ್ಷಿಸುತ್ತಿದ್ದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಅಯೋಧ್ಯಾ ಕಿ ಲೂಟ್ ಝಾಂಕಿ ಹೈ, ಕಾಶಿ-ಮಥುರಾ ಅಭಿ ಬಾಕಿ ಹೈ (ಅಯೋಧ್ಯೆಯಲ್ಲಿ ಆಪಾದಿತ ಲೂಟಿ ಕೇವಲ 1 ನೋಟ ಮಾತ್ರ, ಕಾಶಿ ಮತ್ತು ಮಥುರಾ ಇನ್ನೂ ಬಾಕಿ ಇದೆ)’ ಎಂದು ಕುಟುಕಿದರು.
‘ರಾಮ ಮಂದಿರ ಆಡಳಿತವನ್ನು ಆರ್ಎಸ್ಎಸ್ ಮತ್ತು ಪಿಎಂಒ ನೇರವಾಗಿ ನೋಡಿಕೊಳ್ಳುತ್ತಿದೆ. ಅಲ್ಲಿ ಏನಾದರೂ ತಪ್ಪು ನಡೆದಿದ್ದರೆ, ಬುಲ್ಡೋಜರ್ ಹೋಗುವುದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಿವಾಸಕ್ಕೋ ಅಥವಾ ಪಿಎಂಒಗೋ?’ ಎಂದೂ ಖೇರಾ ಪ್ರಶ್ನಿಸಿದರು.
10:47 PM (IST) Jun 30
ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ Raveena Tandon, ತಮ್ಮನ್ನು 'ರಾಶಾಳ ಅಮ್ಮ' ಅಂತ ಪರಿಚಯಿಸಿಕೊಂಡಿದ್ದಾರೆ. ಯುವ ಪೀಳಿಗೆಗೆ ತನ್ನ ಮಗಳ ಮೂಲಕವೇ ಹೆಚ್ಚು ಪರಿಚಿತಳಾಗಿರಬಹುದು ಎಂಬ ಕಾರಣಕ್ಕೆ ಹೀಗೆ ಹೇಳಿದ್ದಾಗಿ ತಿಳಿಸಿದ್ದಾರೆ.
10:00 PM (IST) Jun 30
Samantha ತಾಯಿಯಾಗುತ್ತಿರುವ ಸಿಹಿ ಸುದ್ದಿ ನೀಡಿದ್ದಾರೆ. ಸಮಂತಾ ಮತ್ತು ಅವರ ಪತಿ, ನಿರ್ದೇಶಕ ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಬೇಬಿ ಬಂಪ್ ಫೋಟೋ ಕೂಡ ಹಂಚಿಕೊಂಡಿದ್ದಾರೆ.
09:32 PM (IST) Jun 30
Mumbai Police: ಗಿರ್ಗಾಂವ್ನ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ಮರಾಠಿ ಹಾಗೂ ಬೆಂಗಾಲಿ ಚಿತ್ರರಂಗದ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ.
08:48 PM (IST) Jun 30
ಕಲ್ಕತ್ತಾ ಹೈಕೋರ್ಟ್ ಆದೇಶದ ನಂತರ, ಪಶ್ಚಿಮ ಬಂಗಾಳ ಸರ್ಕಾರವು ಒಬಿಸಿ ಮೀಸಲಾತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹೊಸ ತಿದ್ದುಪಡಿಯ ಅಡಿಯಲ್ಲಿ, ಟಿಎಂಸಿ ಸರ್ಕಾರದ ಅವಧಿಯಲ್ಲಿ ಸೇರಿಸಲಾಗಿದ್ದ 65 ಮುಸ್ಲಿಂ ಮತ್ತು 9 ಹಿಂದೂ ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕಲಾಗಿದೆ.
08:12 PM (IST) Jun 30
Haseen Dillruba: ಇತ್ತೀಚಿನ ದಿನಗಳಲ್ಲಿ ಓಟಿಟಿಗಳಲ್ಲಿ ಅದ್ಭುತವಾದ ಕಂಟೆಂಟ್ಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಹೊಸ ಹೊಸ ಸಿನಿಮಾಗಳು, ಸೀರಿಸ್ಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿವೆ. ಜನರು ಹೆಚ್ಚಾಗಿ ಕ್ರೈಂ ಥ್ರಿಲ್ಲರ್ಗಳನ್ನು ಇಷ್ಟಪಡುತ್ತಿದ್ದಾರೆ.
07:41 PM (IST) Jun 30
07:14 PM (IST) Jun 30
07:01 PM (IST) Jun 30
ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಬ್ಯಾಂಕ್ ಸೇರಿದಂತೆ ನಾಲ್ಕು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳು 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ಒಟ್ಟು ₹9,439 ಕೋಟಿ ಲಾಭಾಂಶವನ್ನು ಪಾವತಿಸಿವೆ.
07:01 PM (IST) Jun 30
Riya Sen: ಒಂದು ಕಾಲದಲ್ಲಿ ಬಾಲಿವುಡ್ನ ಗ್ಲಾಮರಸ್ ನಟಿಯಾಗಿದ್ದ ರಿಯಾ ಸೇನ್ ಅವರ ಕೆರಿಯರ್, ಒಂದು ಎಂಎಂಎಸ್ ವಿವಾದದಿಂದಾಗಿ ಸಂಪೂರ್ಣವಾಗಿ ಹಾಳಾಗಿತ್ತು. ಆದರೆ ನಂತರ ಅವರು ವೆಬ್ ಸೀರೀಸ್ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಮತ್ತೆ ಗುರುತಿಸಿಕೊಂಡರು.
06:45 PM (IST) Jun 30
Hardik Pandya relocates to Bengaluru: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರೆ. ಹೌದು, ಬಹುತೇಕ ಮುಂಬೈನಲ್ಲಿ ಕ್ರಿಕೆಟ್ ಟೀಂ ಸದಸ್ಯರೇ ನೆಲೆಸಿದ್ದಾರೆ. ಆದರೆ ಹಾರ್ದಿಕ್ ಮಾತ್ರ ಮುಂಬೈ ಬಿಟ್ಟು, ಸಿಲಿಕಾನ್ ಸಿಟಿಗೆ ಬಂದಿದ್ದಾರಂತೆ.
06:31 PM (IST) Jun 30
ಮಾಜಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಎಚ್ಡಿಎಫ್ಸಿ ಬ್ಯಾಂಕ್ನ ನೂತನ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಿಂದಿನ ಅಧ್ಯಕ್ಷ ಅತನು ಚಕ್ರವರ್ತಿ ಅವರ ವಿವಾದಾತ್ಮಕ ರಾಜೀನಾಮೆಯ ನಂತರ ಈ ನೇಮಕಾತಿ ನಡೆದಿದೆ.
06:24 PM (IST) Jun 30
ರೈಲು ಪ್ರಯಾಣ, ಆಧಾರ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪೆಟ್ರೋಲ್-ಡೀಸೆಲ್ ಸೇರಿದಂತೆ ಕೆಲ ನಿಯಮಗಳು ಜುಲೈ 1 ರಿಂದ ಬದಲಾಗುತ್ತಿದೆ. ಹೀಗಾಗಿ ಈ ಸೇವೆ ಪಡೆದುಕೊಳ್ಳುವ ಮುನ್ನ ಹೊಸ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ
06:04 PM (IST) Jun 30
Why do the armpits of my shirts smell after washing: ಕೆಲವೊಮ್ಮೆ ಡ್ರೆಸ್ನಿಂದ ಕೆಟ್ಟ ವಾಸನೆ ಬರೋದುಂಟು, ವಾಶ್ ಮಾಡಿದರೂ ಕೂಡ ವಾಸನೆ ಬರುತ್ತದೆ. ಆಗ ಏನು ಮಾಡೋದು ಎಂದು ಅನೇಕರು ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾದರೆ ಏನು ಮಾಡೋದು? ಈ ಬಗ್ಗೆ ಮಾಹಿತಿ ಇಲ್ಲಿದೆ.
05:43 PM (IST) Jun 30
05:39 PM (IST) Jun 30
05:23 PM (IST) Jun 30
Future Of Marriage: ಒಂದು ಕಡೆ ಮದುವೆ ಆಗೋಕೆ ಹೆಣ್ಣು ಸಿಗ್ತಿಲ್ಲ. ಮತ್ತೊಂದು ಕಡೆ ಮದುವೆಯಾದವ್ರಲ್ಲಿ ಒಂದಲ್ಲ ಒಂದು ಸಮಸ್ಯೆಗಳು. ಗಂಡ, ಹೆಂಡತಿಯನ್ನು ಕೊಲೆ ಮಾಡಿಸೋದು, ಹೆಂಡತಿ ಗಂಡನನ್ನು ಕೊಲೆ ಮಾಡಿಸೋದು ಈಗ ಸಾಮಾನ್ಯ ಆಗಿದೆ. ಆದರೆ ಭಾರತದಲ್ಲಿ 2047ರ ವೇಳೆಗೆ ಮದುವೆ ವ್ಯವಸ್ಥೆ ಇರೋದಿಲ್ವಂತೆ.
05:20 PM (IST) Jun 30
05:05 PM (IST) Jun 30
05:05 PM (IST) Jun 30
04:52 PM (IST) Jun 30
ಭಾವಿ ಪತ್ಯೆ ಸಿಯಾ ಗೊಯೆಲ್ ಲೋಹಘಡದಲ್ಲಿ ಕೇತನ್ ಕಳ್ಳಿ ಹಾಕಿ ಹತ್ಯೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಈ ಘಟನೆ ಬಳಿಕ ಲೋಹಘಡಕ್ಕೆ ಪ್ರವಾಸಿಗರ ಸಂಖ್ಯೆ ಡಬಲ್ ಆಗಿದೆ. ಪ್ರವಾಸಿಗರು ಕೋಟೆ, ಪರ್ವತ ಸೌಂದರ್ಯಕ್ಕಿಂತ ಸಿಯಾ ಪಾಯಿಂಟ್ ವೀಕ್ಷಿಸುತ್ತಿದ್ದಾರೆ.
04:44 PM (IST) Jun 30
04:43 PM (IST) Jun 30
Aishwarya Rai: ಇಂಟರ್ನೆಟ್ ಅಂದ್ರೆನೇ ಒಂದು ವಿಚಿತ್ರ ಜಗತ್ತು. ಇಲ್ಲಿ ಯಾವಾಗ, ಯಾವುದು, ಯಾಕೆ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಈಗ ಅಂತಹದ್ದೇ ಒಂದು ವಿಚಾರ ಸಖತ್ ಸದ್ದು ಮಾಡ್ತಿದೆ.
04:40 PM (IST) Jun 30
ರಾಜಸ್ಥಾನದ ಭಿಲ್ವಾರಾದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿದ ಕಳ್ಳನೊಬ್ಬ ಮೊಬೈಲ್ ಅಂಗಡಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ದೋಚಿದ್ದಾನೆ.
04:28 PM (IST) Jun 30
04:05 PM (IST) Jun 30
ಬಿಗ್ಬಾಸ್ ವಿನ್ನರ್ ಗೌರವ್ ಖನ್ನಾ ಮತ್ತು ನಟಿ ಆಕಾಂಕ್ಷಾ ಚಮೋಲಾ ತಮ್ಮ 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿದ್ದಾರೆ. ತನಗೆ ಮಕ್ಕಳು ಬೇಡ, ಕರಿಯರ್ ಮುಖ್ಯ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಕಾಂಕ್ಷಾ 'ಲಾಕ್ ಅಪ್' ಶೋನಲ್ಲಿ ಬಹಿರಂಗಪಡಿಸಿದ್ದಾರೆ.
03:59 PM (IST) Jun 30
ಐರ್ಲೆಂಡ್ ಎದುರಿನ ಎರಡು ಪಂದ್ಯಗಳ ಟಿ20 ಸರಣಿ ವೈಟ್ವಾಷ್ ಅನುಭವಿಸಿದ ಬೆನ್ನಲ್ಲೇ ಇದೀಗ ಟೀಂ ಇಂಡಿಯಾ, ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಮೊದಲ ಪಂದ್ಯದ ಆರಂಭಿಕ ಸಮಯದಲ್ಲಿ ಇದೀಗ ಬದಲಾವಣೆಯಾಗಿದೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ.
03:52 PM (IST) Jun 30
Muddu Sose Kannada Serial: ‘ಮುದ್ದುಸೊಸೆ’ ಧಾರಾವಾಹಿಯಲ್ಲಿ ಅಮ್ಮಮ್ಮ ಸತ್ತಿರೋ ರೀತಿ ನಾಟಕ ಮಾಡುತ್ತಿದ್ದಾಳೆ. ಎಲ್ಲರೂ ಅಮ್ಮಮ್ಮ ಹೋದಳು ಎಂದು ಅಳುತ್ತಿದ್ದಾರೆ. ಮೊಮ್ಮಗನ ಕುಟುಂಬವನ್ನು, ಸಂಸಾರವನ್ನು ಸರಿ ಮಾಡೋಕೆ ಅಮ್ಮಮ್ಮ ಈ ರೀತಿ ಮಾಡ್ತಿರೋದು ಎಂದು ಎಲ್ಲರಿಗೂ ಗೊತ್ತಿಲ್ಲ.
03:32 PM (IST) Jun 30
03:31 PM (IST) Jun 30
02:25 PM (IST) Jun 30
ಆಯೋಧ್ಯಾ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬಳಿಕ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ ಹಾಗೂ ಕಾಂಗ್ರೆಸ್ ಟೀಕೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿರುಗೇಟು ನೀಡಿದ್ದು, ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಇಂದು ರಾಮಭಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿ.
02:01 PM (IST) Jun 30
01:46 PM (IST) Jun 30
Bollywood Actor Ram Kapoor: ಈ ಹಿಂದೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ ಖ್ಯಾತ ನಟ ರಾಮ್ ಕಪೂರ್ ಈ ಬಾರಿ 'ಲಾಕ್ ಅಪ್ ಸೀಸನ್ 2' (Lock Upp Season 2) ರಿಯಾಲಿಟಿ ಶೋನಲ್ಲಿ ಕೂಡ ಮಾತನಾಡಿದ್ದಾರೆ. ಇದನ್ನು ನೋಡಿ ಅನೇಕರು ಬೇಸರ ಹೊರಹಾಕಿದ್ದಾರೆ.
01:03 PM (IST) Jun 30
12:34 PM (IST) Jun 30
12:09 PM (IST) Jun 30
whatsapp news: ಮೆಟಾ ಇತ್ತೀಚೆಗೆ ತನ್ನ ಎಲ್ಲಾ ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಪಾವತಿ ಆಧಾರಿತ ಚಂದಾದಾರಿಕೆ ಯೋಜನೆಗಳನ್ನು ಜಾಗತಿಕವಾಗಿ ಪರಿಚಯಿಸಿದೆ. ಇದು ಬಳಕೆದಾರರಲ್ಲಿ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಹಠಾತ್ ಶುಲ್ಕದ ನಿರ್ಧಾರದ ಹಿಂದಿನ ಕಾರಣಗಳೇನು?
11:20 AM (IST) Jun 30
10:57 AM (IST) Jun 30
10:07 AM (IST) Jun 30
ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಮತ್ತೆ ನೇರ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ಪಾಲಿನ ನೀರನ್ನು ಪಡೆಯಲು ಯತ್ನಿಸಿದರೆ ಕೈ ಕತ್ತರಿಸುವುದಾಗಿ ಉದ್ಧಟತನದ ಹೇಳಿಕೆ ನೀಡಿದ್ದು, ಈ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
09:29 AM (IST) Jun 30
08:44 AM (IST) Jun 30