ಕಷ್ಟಕಾಲದಲ್ಲಿ ಕಾಪಾಡಿದ ಇಸ್ಕಾನ್ ಮೇಲೆ ಬಾಂಗ್ಲಾಗೆ ಯಾಕಿಷ್ಟು ದ್ವೇಷ?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಸಂತರ ಬಂಧನ ಮತ್ತು ವಕೀಲರ ಹತ್ಯೆಯಂತಹ ಘಟನೆಗಳು ಈ ಆಕ್ರೋಶಕ್ಕೆ ಕಾರಣವಾಗಿವೆ. 

Share this Video
  • FB
  • Linkdin
  • Whatsapp

ಬಾಂಗ್ಲಾದೇಶದ ಹಣೆಬರಹ ತೀರಾ ಹದಗೆಟ್ಟಿರೋ ಹಾಗೆ ಕಾಣ್ತಾ ಇದೆ,. ವಿನಾಶಕಾಲೆ ವಿಪರೀತ ಬುದ್ಧಿ ಅನ್ನೋಕೆ, ಬಾಂಗ್ಲಾದ ರಕ್ಕಸರ ಹುಚ್ಚಾಟಗಳು ಉದಾಹರಣೆಯಾಗೋ ಸಾಧ್ಯತೆ ಇದೆ. ಸಾಲು ಸಾಕು ಸಂತರ ಸೆರೆ ಹಿಡಿದರು.. ಅವರ ಪರ ನಿಂತ ವಕೀಲರ ಕೊಲೆಯೇ ನಡೆದೋಯ್ತು.. ಇದೆಲ್ಲದರ ಫಲವಾಗಿ ಬಾಂಗ್ಲಾದಲ್ಲಿ ಹಿಂದೂಗಳ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ.. ಕೆಣಕಿದ ಬಾಂಗ್ಲಾದೇಶಕ್ಕೆ, ಭಯಾನಕ ಉತ್ತರ ಕೊಡೋಕೆ ಕೆರಳಿ ನಿಂತಿದೆ ಭಾರತ.. ಏನಾಗಲಿದೆ ಗೊತ್ತಾ ಇದರ ಪರಿಣಾಮ? ಬಾಂಗ್ಲಾ ಹಿಂದೂಗಳ ಆಕ್ರಂದನ ಜಗತ್ತಿನ ಮೂಲೆ ಮೂಲೆಗೂ ಕೇಳುಸ್ತಾ ಇರೋ ಹೊತ್ತಲ್ಲಿ, ಹಿಂದೂಗಳ ಮೇಲೆ ದಾಳಿ ನಡೆದೇ ಇಲ್ಲ ಅಂತ ಅಂತಿದ್ದಾನೆ, ಬಾಂಗ್ಲಾದ ಮುಖಂಡ.. ಆ ಮಾತಿಗೆ ಭಾರತ ಕೊಟ್ಟ ತಪರಾಕಿ ಎಂಥದ್ದು? ಅದೆಲ್ಲದರ ಫುಲ್ ಡೀಟೇಲ್ಸ್ ನಿಮ್ಮ ಮುಂದಿಡೋದೇ ಇವತ್ತಿನ ಸ್ಪೆಷಲ್ ಸ್ಟೋರಿ, ಹಿಂದೂ ಆಕ್ರೋಶ.. ಬಾಂಗ್ಲಾ ನಾಶ?

Related Video