
News Hour: ಮುಗಿಯದ ಭಾರತೀಯರ ಸಂಕಷ್ಟ, ಎಲ್ಲದಕ್ಕೂ ಕೈ ಕ್ಯಾತೆ!
* ರಷ್ಯಾ-ಉಕ್ರೇನ್ ಯುದ್ಧ ಭೂಮಿಯಲ್ಲಿ ಭಾರತೀಯರ ಸಂಕಷ್ಟ
* ಕೂಡಲೇ ಖಾರ್ಖಿವ್ ಖಾಲಿ ಮಾಡಿ
*ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರುವ ಕಾರ್ಯ ಹೇಗಿದೆ?
* ಆಪರೇಷನ್ ಗಂಗಾಕ್ಕೂ ಕಾಂಗ್ರೆಸ್ ಕ್ಯಾತೆ!
ನವದೆಹಲಿ(ಮೇ. 02) ರಷ್ಯಾ (Russia) ಉಕ್ರೇನ್ ನ (Ukraine) ಖಾರ್ಖಿವ್ ನಗರದ ಮೇಲೆ ಘನಘೋರ ದಾಳಿ ಮಾಡುವ ಸಂಭವ ಇದ್ದು ಕೂಡಲೇ ನಗರವನ್ನು ಖಾಲಿ ಮಾಡಿ ಎಂದು ಭಾರತೀಯ ರಾಯಭಾರ (Indian Embassy) ಕಚೇರಿ ತಿಳಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Russia Ukraine Crisis: ರಷ್ಯಾದ ಸೇನಾ ಟ್ಯಾಂಕರ್ ಅನ್ನೇ ಟೋಯಿಂಗ್ ಮಾಡಿದ ಉಕ್ರೇನ್ ರೈತ!
ಕೇಂದ್ರ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ಕರೆದು ತರುತ್ತಿದೆ. ಕ್ಯಾಬಿನೆಟ್ ಸಚಿವರೇ ಮುಂದೆ ನಿಂತು ನಿರ್ವಹಣೆ ಮಾಡುತ್ತಿದ್ದಾರೆ. ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರುವ ಸವಾಲಿನ ಕೆಲಸವನ್ನು ಸರ್ಕಾರ ಮಾಡುತ್ತಿರುವಾಗ ಕಾಂಗ್ರೆಸ್ ಆಪರೇಷನ್ ಗಂಗಾ ಎಂಬ ಹೆಸರಿಗೆ ಕ್ಯಾತೆ ತೆಗೆದಿದೆ.