
Russia Ukraine Crisis: ತಾಯಿ ನೆಲದ ರಕ್ಷಣೆಗಾಗಿ ಸೈನಿಕರಾದ ನಾಗರಿಕರು!
ಶರಣಾಗ್ತೀರಾ? ಇಲ್ಲ ದೇಶಕ್ಕಾಗಿ ಜೀವ ಬಿಡ್ತೀರಾ? ಅಂದ್ರೆ ಎರಡನೇ ಆಯ್ಕೆಯೇ ಇರಲಿ ಎನ್ನುತ್ತಿದೆ ಉಕ್ರೇನ್. ದಂಡಿಗೂ ಹೆದರುತ್ತಿಲ್ಲ, ದಾಳಿಗೂ ಬಗ್ಗುತ್ತಿಲ್ಲ. ಹೌದು ಸದ್ಯ ಉಕ್ರೇನ್ನಲ್ಲಿ ನಾಗರಿಕರೇ ಯೋಧರಾಗಿದ್ದಾರೆ. ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಉಕ್ರೇನ್ ಉಳಿಸಿಕೊಳ್ಳಲು ಇಲ್ಲಿನ ನಾಗರಿಕರ ಸಂಘರ್ಷ.
ಕೀವ್(ಫೆ.28): ಶರಣಾಗ್ತೀರಾ? ಇಲ್ಲ ದೇಶಕ್ಕಾಗಿ ಜೀವ ಬಿಡ್ತೀರಾ? ಅಂದ್ರೆ ಎರಡನೇ ಆಯ್ಕೆಯೇ ಇರಲಿ ಎನ್ನುತ್ತಿದೆ ಉಕ್ರೇನ್. ದಂಡಿಗೂ ಹೆದರುತ್ತಿಲ್ಲ, ದಾಳಿಗೂ ಬಗ್ಗುತ್ತಿಲ್ಲ. ಹೌದು ಸದ್ಯ ಉಕ್ರೇನ್ನಲ್ಲಿ ನಾಗರಿಕರೇ ಯೋಧರಾಗಿದ್ದಾರೆ. ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಉಕ್ರೇನ್ ಉಳಿಸಿಕೊಳ್ಳಲು ಇಲ್ಲಿನ ನಾಗರಿಕರ ಸಂಘರ್ಷ.
Add Asianetnews Kannada as a Preferred Source

ರಷ್ಯಾ ಉಕ್ರೇನ್ ಮೇಲೆ ಸಾರಿರುವ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆದ್ರೆ ತಲೆತಗ್ಗಿಸಿ ಶರಣಾಗಲು ಉಕ್ರೇನ್ ಮಾತ್ರ ಒಪ್ಪುತ್ತಿಲ್ಲ. ಕೊನೆಯ ರಕ್ತದ ಹನಿ ಇರೋವರೆಗೂ ಹೋರಾಡುತ್ತೇವೆಂದು ಹೇಳುತ್ತಾ, ರಷ್ಯಾವನ್ನು ಎದುರಿಸಲು ಮುಂದಾಗಿದೆ. ಇದಕ್ಕೀಗ ಉಕ್ರೇನ್ ನಾಗರಿಕರೂ ಸಾತ್ ನೀಡಿ, ತಾಯಿ ನೆಲದ ರಕ್ಷಣೆಗೆ ಮುಂದಾಗಿದ್ದಾರೆ.