ಯೋಧನನ್ನು ಮದುವೆಯಾಗ್ತಿರೋ ವೈಷ್ಣವಿ ಗೌಡ; ಭಾವಿ ಪತಿ ಹುದ್ದೆ ಬಗ್ಗೆ ಸೀತಾರಾಮ ನಟಿ ಮಾತು!
ಯೆಸ್ ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಪ್ರೀತಿ ಗಳಿಸಿದ್ದ ವೈಷ್ಣವಿ ಹೊಸ ಬಾಳಿಗೆ ಕಾಲಿಡ್ತಾ ಇದ್ದಾರೆ. ಸೋಮವಾರ ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ವೈಷ್ಣವಿ ಎಂಗೇಜ್ಮೆಂಟ್ ಅದ್ದೂರಿಯಾಗಿ ನಡೆದಿದೆ. ಅಸಲಿಗೆ ವೈಷುಗೆ ನೂರಾರು ಮದುವೆ ಪ್ರಪೋಸಲ್ ಬಂದಿದ್ವು. ಅವನ್ನೆಲ್ಲಾ ಬಿಟ್ಟು ನಾರ್ತಿ ಹುಡುಗನ್ನ ಮೆಚ್ಚಿದ್ದೇಕೆ ವೈಷ್ಣವಿ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ. ಅನುಕೂಲ್ ಮೀಶ್ರಾ ಏರ್ಫೋರ್ಸ್ನಲ್ಲಿ ಕೆಲಸ ಮಾಡ್ತಾ ಇದ್ದು ಕೆಲ ತಿಂಗಳಿಂದ ಇಬ್ಬರ ನಡುವೆ ಗೆಳೆತನ ಶುರುವಾಗಿತ್ತು. ಇದೀಗ ಇಬ್ಬರ ಮನೆಯಲ್ಲೂ ಈ ಸಂಬಂಧಕ್ಕೆ ಒಪ್ಪಿಗೆ ಸಿಕ್ಕಿದ್ದು ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಉಂಗುರ ಬದಲಿಸಿಕೊಂಡಿದೆ. ಹಿಂದಿಯಲ್ಲಿ ವೈಷುಗೆ ಪ್ರಪೋಸ್ ಮಾಡಿರೋ ಅನುಕೂಲ್ ಚೂರು ಚೂರೇ ಕನ್ನಡ ಕಲೀತಾ ಇದ್ದಾರೆ. ವೈಷ್ಣವಿ ಭಾವಿ ಪತಿಗೆ ಕನ್ನಡ ಕಲಿಸ್ತಾ ಇದ್ದಾರೆ. ಇಬ್ಬರು ಸಂಭ್ರಮದಿಂದ ಹೊಸ ಬದುಕಿಗೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ.