Asianet Suvarna News Asianet Suvarna News

Shivarame Gowda Audio Row:ನೊಟೀಸ್ ಕೊಡಲಿ, ಆಮೇಲೆ ಉತ್ತರಿಸ್ತೀನಿ: ಶಿವರಾಮೇ ಗೌಡ

'ಮಾದೇಗೌಡ ಅಂತ ಒಬ್ಬ ಇದ್ದ. ಅವನ ಮನೆ ಹಾಳಾಗ. ಅವನು ಸತ್ತು 20 ವರ್ಷ ಆಗಬೇಕಿತ್ತು. ಮೊನ್ನೆ ಸತ್ತ. ಅವನಿಗೊಮ್ಮೆ ಶ್ರವಣಬೆಳಗೊಳದಲ್ಲಿ ಹಿಡ್ಕೊಂಡು ಎಕ್ಕಡದಲ್ಲಿ ಹೊಡೆದ್ವಿ. ಜಿಲ್ಲಾ ಪರಿಷತ್‌ ಸದಸ್ಯನಾಗಿದ್ದೆ. ಅವನು ಎಂಪಿಯಾಗಿದ್ದ' ಎಂದು ಶಿವರಾಮೇ ಗೌಡ್ರು ಹೇಳಿರುವ ಆಡಿಯೋ ವೈರಲ್ ಆಗಿದೆ. 

'ಮಾದೇಗೌಡ ಅಂತ ಒಬ್ಬ ಇದ್ದ. ಅವನ ಮನೆ ಹಾಳಾಗ. ಅವನು ಸತ್ತು 20 ವರ್ಷ ಆಗಬೇಕಿತ್ತು. ಮೊನ್ನೆ ಸತ್ತ. ಅವನಿಗೊಮ್ಮೆ ಶ್ರವಣಬೆಳಗೊಳದಲ್ಲಿ ಹಿಡ್ಕೊಂಡು ಎಕ್ಕಡದಲ್ಲಿ ಹೊಡೆದ್ವಿ. ಜಿಲ್ಲಾ ಪರಿಷತ್‌ ಸದಸ್ಯನಾಗಿದ್ದೆ. ಅವನು ಎಂಪಿಯಾಗಿದ್ದ' ಎಂದು ಶಿವರಾಮೇ ಗೌಡ್ರು ಹೇಳಿರುವ ಆಡಿಯೋ ವೈರಲ್ ಆಗಿದೆ.

LR Shivarame Gowda ಮಾಜಿ ಸಂಸದಗೆ ಆಡಿಯೋ ತಂದ ಆಪತ್ತು, ಪಕ್ಷದಿಂದ ಹೊರಹಾಕುವಂತೆ ಎಚ್‌ಡಿಕೆ ಸೂಚನೆ 

ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ಶಿಸ್ತುಕ್ರಮಕ್ಕೆ ಮುಂದಾಗಿದೆ. ಉಚ್ಛಾಟನೆ ಮಾಡುವಂತೆ ಕುಮಾರಸ್ವಾಮಿ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. 'ನಾನು ಎಚ್‌ಡಿಕೆಯನ್ನು ಭೇಟಿ ಮಾಡುತ್ತೇನೆ. ಅವರು ನೋಟಿಸ್ ಕೊಡಲಿ, ಆಮೇಲೆ ಉತ್ತರಿಸುತ್ತೇನೆ. ಮಾದೇಗೌಡರ ಬಗ್ಗೆ ಮಾತನಾಡಿರುವುದು ನನಗೆ ತಪ್ಪೇ ಅನಿಸಿದೆ. ಮಾತಿನ ಭರದಲ್ಲಿ ಹೇಳಿದ್ದು ಸತ್ಯ, ಪಶ್ಚಾತ್ತಾಪಪಟ್ಟಿದ್ದೇನೆ' ಎಂದು ಸ್ವತಃ ಶಿವರಾಮೇ ಗೌಡರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ.