ಪಶ್ಚಿಮ ಬಂಗಾಳ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ: ಬಿಎಲ್ ಸಂತೋಷ್
- ಪ್ರಜಾಪ್ರಭುತ್ವಕ್ಕೆ ಮಮತಾ ಅಪಾಯಕಾರಿ: ಸಂತೋಷ್
- ಬಂಗಾಳದಲ್ಲಿ ಹಿಂಸಾ ರಾಜಕೀಯ ಇದೆಯೇ ಹೊರತು ಅಭಿವೃದ್ಧಿ ಅಲ್ಲ
- ಎಲ್ಲ ಕ್ಷೇತ್ರಗಳಲ್ಲೂ ಗೂಂಡಾಗಿರಿ ಇದೆ, ಹಿಂಸೆ ಬಗ್ಗೆ ಸುಪ್ರೀಂಗೆ ಅರ್ಜಿ
ಬೆಂಗಳೂರು (ಮೇ. 23): ಪಶ್ಚಿಮ ಬಂಗಾಳ ದಲ್ಲಿ ಬರೀ ಹಿಂಸೆಯ ರಾಜಕೀಯ ಮಾತ್ರ ನಡೆಯುತ್ತಿದೆಯೇ ಹೊರತು ಅಭಿವೃದ್ಧಿ ನಡೆಯುತ್ತಿಲ್ಲ. ಅಲ್ಲಿನ ಎಲ್ಲ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಬಿಜೆಪಿ ಪ್ರಶ್ನೆ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಜಗತ್ತಿನ ನಂ 1 ಸ್ಥಾನಕ್ಕೇರಲು ಚೀನಾ ಮಾಡುತ್ತಿರುವ ಪ್ಲ್ಯಾನ್ ಇದು
ಆ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ರಾಜಕೀಯಕರಣಗೊಂಡಿದೆ. ಆರು ಸಾವಿರ ಘಟನೆಗಳಲ್ಲಿ ಕೇವಲ 30 ಘಟನೆಗಳ ಬಗ್ಗೆ ಮಾತ್ರ ಎಫ್ಐಆರ್ ದಾಖಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಅಪರಾಧೀಕರಣ ಆಗಿದೆ. ರೇಷನ್ ಅಂಗಡಿಗೆ, ಪರಿಹಾರದ ಹಣಕ್ಕೆ ಟಿಎಂಸಿ ಪಕ್ಷದವರೇ ಮಾಲೀಕರು. ಈ ಚುನಾವಣೆಯ ಬಳಿಕ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದು ಕೊಲೆ ಆಗಿದೆ. ಇದು ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ನಡೆಯುತ್ತಿರುವ ಅಪರಾಧಗಳು ಎಂದು ಹರಿಹಾಯ್ದಿದ್ದಾರೆ.