Asianet Suvarna News Asianet Suvarna News

Karnataka Rain: ಅಕಾಲಿಕ ಮಳೆಗೆ ಮನೆಗೆ ಬರಲಿಲ್ಲ ಬೆಳೆ, ರೈತ ಕಂಗಾಲು, ರಾಜ್ಯ ತತ್ತರ

ರಾಜ್ಯದಲ್ಲಿ ಹಿಂಗಾರು ಅಬ್ಬರದಿಂದ ಅಕಾಲಿಕ ಮಳೆ ಮುಂದುವರೆದಿದೆ. ಕಟಾವಾಗಿ ಮನೆ ಸೇರಬೇಕಿದ್ದ ಫಸಲು ಸಂಪೂರ್ಣ ನಾಶವಾಗಿದೆ. ರಾಜ್ಯಾದ್ಯಂತ 92 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ.

ಬೆಂಗಳೂರು (ನ. 21): ರಾಜ್ಯದಲ್ಲಿ ಹಿಂಗಾರು ಅಬ್ಬರದಿಂದ ಅಕಾಲಿಕ ಮಳೆ ( Untimely Rain) ಮುಂದುವರೆದಿದೆ. ಕಟಾವಾಗಿ ಮನೆ ಸೇರಬೇಕಿದ್ದ ಫಸಲು (Crop)  ಸಂಪೂರ್ಣ ನಾಶವಾಗಿದೆ. ರಾಜ್ಯಾದ್ಯಂತ 92 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. 1400 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

News Hour: ಎಲ್ಲಾ ಕಡೆ ಅಕಾಲಿಕ ಮಳೆ ಅಬ್ಬರ, ಕೃಷಿ ಮಸೂದೆ ಹಿಂದಕ್ಕೆ ಪಡೆಯಲು ಅಸಲಿ ಕಾರಣ

30 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. 59 ಕುಟುಂಬಗಳ 413 ಕ್ಕೂ ಹೆಚ್ಚು ಮಂದಿ ಪರಿಹಾರ ಕೇಂದ್ರಕ್ಕೆ ಶಿಫ್ಟ್ ಅಗಿದ್ದಾರೆ. ಹಾವೇರಿಯಲ್ಲಿ 6 ಸಾವಿರಕ್ಕೂ ಹೆಚ್ಚು ಕೋಳಿಗಳು ಜಲಸಮಾಧಿಯಾಗಿವೆ. ಚಿತ್ರದುರ್ಗದಲ್ಲಿ 60 ಎಕರೆಯಲ್ಲಿ ಬೆಳೆದಿದ್ದ ಕಡಲೆ ಬೆಳೆ ನಾಶವಾಗಿದೆ. ನದಿ, ಕೆರೆಗಳು ತುಂಬಿ ಜಮೀನಿಗೆ ನೀರು ನುಗ್ಗಿದೆ. 

 

Video Top Stories