Asianet Suvarna News Asianet Suvarna News

17 ವರ್ಷದಿಂದ 'ಆತನ' ಪರಿಚಯ...! ಯುವರಾಜ್, ರಾಧಿಕಾ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!

ಯುವರಾಜ್, ರಾಧಿಕಾ ಪ್ರಕರಣದಲ್ಲಿ ಕಂಡೂ ಕೇಳರಿಯದ ಟ್ವಿಸ್ಟ್ ಬಂದೆರಗಿದೆ. ನಿನ್ನೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಯಾದವ್ ಹೆಸರು ಕೇಳಿ ದಂಗಾಗಿದ್ದರು. ಅಷ್ಟಕ್ಕೂ ಯಾರು ಈ ಯಾದವ್? ಆತನಿಗೂ ಸ್ವಾಮಿಗೂ ಏನು ನಂಟು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಬೆಂಗಳೂರು(ಜ.07)ಯುವರಾಜ್, ರಾಧಿಕಾ ಪ್ರಕರಣದಲ್ಲಿ ಕಂಡೂ ಕೇಳರಿಯದ ಟ್ವಿಸ್ಟ್ ಬಂದೆರಗಿದೆ. ನಿನ್ನೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಯಾದವ್ ಹೆಸರು ಕೇಳಿ ದಂಗಾಗಿದ್ದರು. ಅಷ್ಟಕ್ಕೂ ಯಾರು ಈ ಯಾದವ್? ಆತನಿಗೂ ಸ್ವಾಮಿಗೂ ಏನು ನಂಟು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ನ್ಯೂಸ್ ಅವರ್; ರಾಧಿಕಾ ಖಾತೆ ಹಕೀಕತ್ತು... ಸಂಪುಟ ವಿಸ್ತರಣೆ ಯಾವತ್ತು?

ಹಲವರನ್ನು ದಾಳವಾಗಿಸಿಕೊಂಡಿದ್ದ ಯುವರಾಜ್, ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಪ್ರತಿಷ್ಠಿತ ವ್ಯಕ್ತಿಗಳ ಭೇಟಿಯಾಗುತ್ತಿದ್ದ. ಆದರೆ ಯುವರಾಜನ ಈ ಎಲ್ಲಾ ಪ್ಲಾನ್‌ಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದದ್ದೇ ಯಾದವ್ ಎಂಬುವುದು ಉಲ್ಲೇಖನೀಯ. ಇದೇ ಯಾದವ್ 17 ವರ್ಷಗಳಿಂದ ರಾಧಿಕಾ ಕುಮಾರಸ್ವಾಮಿಗೂ ಅತೀ ಆಪ್ತನಾಗಿದ್ದ. 

ಕಳ್ಳ ಸ್ವಾಮಿ ಯುವರಾಜ್ ಜೊತೆ ರಾಧಿಕಾ ಕುಮಾರಸ್ವಾಮಿ ನಂಟು: ಮಹತ್ವದ ಸುದ್ದಿಗೋಷ್ಠಿ!

ಇನ್ನು ಯುವರಾಜನಿಂದ ಅತೀ ಹೆಚ್ಚು ಕರೆಗತಳು ಹೋಗುತ್ತಿದ್ದದ್ದೇ ಯಾದವ್‌ಗೆ. ನಟಿ, ರಾಜಕಾರಣಿಗಳನ್ನು ಭೇಟಿಯಾಗುವುದಕ್ಕೂ ಮೊದಲು ಕೂಡಾ ಯುವರಾಜ್ ಯಾದವ್‌ಗೆ ಕರೆ ಮಾಡುತ್ತಿದ್ದ. ಈ ಕುರಿತಾದ ಇನ್ನೂ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ

Video Top Stories