Asianet Suvarna News Asianet Suvarna News

ಇಂದು ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ 2ನೇ ಪುಣ್ಯಸ್ಮರಣೆ, ಮಠದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ

ಶಿವೈಕ್ಯ, ತ್ರಿವಿಧ ದಾಸೋಹಿ ಶ್ರೀ ಶಿವ​ಕು​ಮಾರ ಸ್ವಾಮೀಜಿ ಅವರ ಎರ​ಡನೇ ಪುಣ್ಯ ಸಂಸ್ಮ​ರ​ಣೋ​ತ್ಸವ ಸಿದ್ಧ​ಗಂಗೆಯಲ್ಲಿ ನೆರವೇರಿದೆ. ಬೆಳಗಿನ ಜಾವ ವಿಶೇಷ ಪೂಜೆ, ರುದ್ರಾ​ಭಿ​ಷೇಕ ನೆರ​ವೇ​ರಿದೆ. 

ಬೆಂಗಳೂರು (ಜ. 21): ಶಿವೈಕ್ಯ, ತ್ರಿವಿಧ ದಾಸೋಹಿ ಶ್ರೀ ಶಿವ​ಕು​ಮಾರ ಸ್ವಾಮೀಜಿ ಅವರ ಎರ​ಡನೇ ಪುಣ್ಯ ಸಂಸ್ಮ​ರ​ಣೋ​ತ್ಸವ ಸಿದ್ಧ​ಗಂಗೆಯಲ್ಲಿ ನೆರವೇರಿದೆ.  ಬೆಳಗಿನ ಜಾವ ವಿಶೇಷ ಪೂಜೆ, ರುದ್ರಾ​ಭಿ​ಷೇಕ ನೆರ​ವೇ​ರಿದೆ. ಕೇಂದ್ರ ಸಚಿವ ಪ್ರತಾಪಚಂದ್ರ ಸಾರಂಗಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು, ನಾಡಿನ ವಿವಿಧ ಭಾಗ​ಗ​ಳಿಂದ 25 ಸಾವಿ​ರಕ್ಕೂ ಹೆಚ್ಚು ಭಕ್ತರು ಆಗ​ಮಿ​ಸುವ ನಿರೀ​ಕ್ಷೆ​ಯಿದೆ.

ಈ ಕಾರ್ಯ​ಕ್ರ​ಮಕ್ಕೆ ಮುಖ್ಯ​ಮಂತ್ರಿ ಬಿ.ಎಸ್‌. ಯಡಿ​ಯೂ​ರಪ್ಪ ಹಾಗೂ ನಾಡಿನ ವಿವಿಧ ಮಠಾ​ಧೀ​ಶರು ಮತ್ತು ಜನ​ಪ್ರ​ತಿ​ನಿ​ಧಿ​ಗಳು ಪಾಲ್ಗೊ​ಳ್ಳು​ತ್ತಿ​ದ್ದಾರೆ. ವೇದಿಕೆ ಕಾರ್ಯ​ಕ್ರ​ಮಕ್ಕೂ ಮುನ್ನ ಯಡಿ​ಯೂ​ರ​ಪ್ಪ​ನ​ವರು ಶಿವೈಕ್ಯ ಶ್ರೀಗಳ ಗದ್ದುಗೆ ದರ್ಶನ ಮಾಡ​ಲಿ​ದ್ದಾ​ರೆ.

ತವರು ಜಿಲ್ಲೆ ದೇಗುಲಗಳಿಗೆ ಕೋಟಿ ಕೋಟಿ ಅನುದಾನ, ಬೇರೆ ಜಿಲ್ಲೆಗಳ ದೇವರಿಗೆ 'ಪೂಜಾರಿ'ತಾರತಮ್ಯ..!

Video Top Stories