Asianet Suvarna News Asianet Suvarna News

ರಾರಾ ಜಾರಕಿ ಎಂದವಳು ಒನ್ಸ್ ಮೋರ್ ಅಂದಳಾ ಸೀಡಿ ಲೇಡಿ..?

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮರು ಹೇಳಿಕೆ ನೀಡಿದ್ದಾಳೆ ಎಂಬ ವದಂತಿ ಸುದ್ದಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಬೆಂಗಳೂರು (ಏ. 13): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮರು ಹೇಳಿಕೆ ನೀಡಿದ್ದಾಳೆ ಎಂಬ ವದಂತಿ ಸುದ್ದಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯು ಸೋಮವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಎದುರು ಹಾಜರಾದಳು. ಈ ವೇಳೆ, ‘ಯುವತಿ ನ್ಯಾಯಾಧೀಶರ ಎದುರು ಮೊದಲು ನೀಡಿದ್ದ ಹೇಳಿಕೆಗೆ ತದ್ವಿರುದ್ಧ ಹೇಳಿಕೆಯನ್ನು ಎಸ್‌ಐಟಿ ಮುಂದೆ ನೀಡಿದ್ದಾಳೆ. ಇದೀಗ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾಳೆ’ ಎಂದು ಹೇಳಲಾಗಿತ್ತು. ಆದರೆ ಇದನ್ನು ಯುವತಿ ಪರ ವಕೀಲರು ಹಾಗೂ ಎಸ್‌ಐಟಿ ಅಧಿಕಾರಿಗಳು ಬಲವಾಗಿ ನಿರಾಕರಿಸಿದ್ದಾರೆ. ಹಾಗಾದರೆ ನಡೆದಿದ್ದೇನು..? ಏನಿದು ಉಲ್ಟಾ ಹೇಳಿಕೆ ರಹಸ್ಯ..? 

ಉಲ್ಟಾ ಹೇಳಿಕೆ ವದಂತಿಗೆ ತೆರೆ ಎಳೆದ ಸೀಡಿ ಲೇಡಿ, ಮತ್ತೊಂದು ವಿಡಿಯೋ ರಿಲೀಸ್