Asianet Suvarna News Asianet Suvarna News

ಕೊರೋನಾ ನಿಯಂತ್ರಣ ಕಾರ್ಯಕ್ಕೆ ಅಧಿಕಾರಿಗಳ ಹಿಂದೇಟು..!

ಕೊರೋನಾ ವಾರಿಯರ್ಸ್‌ಗಳು ಹಗಲು-ರಾತ್ರಿ ಎನ್ನದೇ ಕೋವಿಡ್ 19 ಹೆಮ್ಮಾರಿಯ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಕೆಲವು ಹೊಣೆಗೇಡಿ ಅಧಿಕಾರಿಗಳು ಮಾತ್ರ ಕೊರೋನಾ ವಿರುದ್ಧ ಹೋರಾಟದಲ್ಲಿ  ಹಿಂದೇಟು ಸಾಕುತ್ತಿದ್ದಾರೆ.

ಬೆಂಗಳೂರು(ಜು.18): ರಾಜ್ಯದಲ್ಲಿ ಕೊರೋನಾ ಹೆಮ್ಮಾರಿಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ಜತೆಗೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಂತೂ ಶರವೇಗದಲ್ಲಿ ಕೊರೋನಾ ಸೋಂಕು ಹಬ್ಬುತ್ತಿದೆ.

ಇಂತಹ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್‌ಗಳು ಹಗಲು-ರಾತ್ರಿ ಎನ್ನದೇ ಕೋವಿಡ್ 19 ಹೆಮ್ಮಾರಿಯ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಕೆಲವು ಹೊಣೆಗೇಡಿ ಅಧಿಕಾರಿಗಳು ಮಾತ್ರ ಕೊರೋನಾ ವಿರುದ್ಧ ಹೋರಾಟದಲ್ಲಿ  ಹಿಂದೇಟು ಸಾಕುತ್ತಿದ್ದಾರೆ.

ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡ್ಬೇಡಿ..!

ಕೊರೋನಾ ಕೆಲಸಕ್ಕೆ ನಿಯೋಜಿಸುವ ಕೆಲಸದಿಂದ ಕೈಬಿಡಿ ಎಂದು ಅಧಿಕಾರಿಗಳು ಬಿಬಿಎಂಪಿ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ. ಅಧಿಕಾರಿಗಳ ಗೈರು ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories