ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಕೇಸ್: ಪೊಲೀಸರಿಗೆ ಕಮಿಷನರ್ ಖಡಕ್ ಸೂಚನೆ

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪುಂಡಾಟ ಪ್ರಕರಣದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಳಿಕ ಕಮಿಷನರ್ ಕಮಲ್ ಪಂಥ್, ಅಲರ್ಟ್ ಆಗಿದ್ದಾರೆ. ಘಟನೆ ನಡೆದು 3 ದಿನವಾದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರನ್ನು ಪ್ರಶ್ನಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 25): ನಿರ್ಮಾಪಕ ಸೌಂದರ್ಯ ಜಗದೀಶ್ (soundarya Jagadesh) ಪುತ್ರ ಸ್ನೇಹಿತ್ ಪುಂಡಾಟ ಪ್ರಕರಣದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಳಿಕ ಕಮಿಷನರ್ ಕಮಲ್ ಪಂಥ್, ಅಲರ್ಟ್ ಆಗಿದ್ದಾರೆ. ಘಟನೆ ನಡೆದು 3 ದಿನವಾದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರನ್ನು ಪ್ರಶ್ನಿಸಿದ್ದಾರೆ. 

ನಿರ್ಮಾಪಕ ಸೌಂದರ್ಯ ಜಗದೀಸ್ ಪುತ್ರನ ಪುಂಡಾಟ ಕೇಸ್, ಮಗನನ್ನು ಬಂಧಿಸದಂತೆ ಖಾಕಿ ಮೇಲೆ ಒತ್ತಡ..?

'ಸಂಪೂರ್ಣ ಮಾಹಿತಿ ಕಲೆ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಯಾರೇ ಇರಲಿ. ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಿ' ಎಂದಿದ್ದಾರೆ. ಮಗನನ್ನು ಬಚಾವ್ ಮಾಡಲು ಸೌಂದರ್ಯ ಜಗದೀಶ್ ಅವರು ಪೊಲೀಸರ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. 

Related Video