Asianet Suvarna News Asianet Suvarna News

ಅಬ್ಬರಿಸಿ ಬೊಬ್ಬಿರಿದ ಟಗರು ಸಿದ್ದು ಕಾಂಗ್ರೆಸ್‌ನಲ್ಲೀಗ ಒಂಟಿ ಒಂಟಿ..!

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲೀಗ ಒಂಟಿಯಾಗಿದ್ದಾರೆ. ಕಾಂಗ್ರೆಸ್ ಕೋಟೆಯಲ್ಲಿಗ ಯುದ್ಧ ಶುರುವಾಗಿದೆ. ಮೂಲ ಕಾಂಗ್ರೆಸ್ಸಿಗರೆಲ್ಲಾ ಒಂದಾಗಿ ಸಿದ್ದರಾಮಯ್ಯ ವಿರುದ್ಧ ಯುದ್ಧಕ್ಕೆ ನಿಂತಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯ  ಕಾಂಗ್ರೆಸ್‌ನಲ್ಲೀಗ ಒಂಟಿಯಾಗಿದ್ದಾರೆ.  ಕಾಂಗ್ರೆಸ್ ಕೋಟೆಯಲ್ಲಿಗ ಯುದ್ಧ ಶುರುವಾಗಿದೆ. ಮೂಲ ಕಾಂಗ್ರೆಸ್ಸಿಗರೆಲ್ಲಾ ಒಂದಾಗಿ ಸಿದ್ದರಾಮಯ್ಯ ವಿರುದ್ಧ ಯುದ್ಧಕ್ಕೆ ನಿಂತಿದ್ದಾರೆ. ಕೆಪಿಸಿಸಿ ಅದ್ಯಕ್ಚರ ಆಯ್ಕೆ ವಿಚಾರ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಜಟಾಪಟಿಗೆ ಕಾರಣವಾಗಿ ಬಿಟ್ಟಿದೆ.

'ಬಿಜೆಪಿಯವ್ರು ಪೌರತ್ವ ಕೊಡ್ತೀವಿ ಅಂತಾರೆ, ಆಚೆನೂ ಹಾಕ್ತಾರೆ'

ಸಿದ್ದರಾಮಯ್ಯ VS ಮೂಲ ಕಾಂಗ್ರೆಸ್ಸಿಗರ ನಡುವೆ ಅಂತ ಅಂತರ್ಯುದ್ಧ ಶುರುವಾಗಿದೆ. ದೊಡ್ಡ ದೊಡ್ಡ ನಾಯಕರೆಲ್ಲಾ ಡಿಕೆಶಿ ಬೆನ್ನಿಗೆ ನಿಂತರೆ ಡಿಕೆಹಾದಿಗೆ ಅಡ್ಡಗಾಲಾಗಿ ನಿಂತಿರುವ ಸಿದ್ದು ಈಗ ಅಕ್ಷರಶಃ ಏಕಾಂಗಿಯಾಗಿದ್ದಾರೆ. ಈಗ ಸಿದ್ದು ಪರ ಬ್ಯಾಟ್ ಬೀಸಲು ಯಾವ ನಾಯಕರು ಇಲ್ಲದಂತಾಗಿದೆ. ಅಷ್ಟಕ್ಕೂ ಸಿದ್ದು ಏಕಾಂಗಿಯಾಗಿದ್ದೇಕೆ? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್ ಸ್ಟೋರಿ!