ಸಚಿವ ಸಂಪುಟ ಸರ್ಕಸ್; ಹೈಕಮಾಂಡ್ ಮಟ್ಟದಲ್ಲಿ ರಾಮ್ದಾಸ್ ಲಾಬಿ!
ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಅನ್ನೋದು ಇನ್ನೂ ಬಗೆಹರಿದಿಲ್ಲ. ಮೂಲ ಬಿಜೆಪಿಗರಲ್ಲಿ ಮಂತ್ರಿಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ. ರಾಮದಾಸ್ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಶತಾಯಗತಾಯ ಸ್ಥಾನ ಪಡೆಯಲೇಬೇಕೆಂಬ ಪ್ರಯತ್ನದಲ್ಲಿದ್ಧಾರೆ.
ಬೆಂಗಳೂರು (ಫೆ. 01): ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಅನ್ನೋದು ಇನ್ನೂ ಬಗೆಹರಿದಿಲ್ಲ. ಮೂಲ ಬಿಜೆಪಿಗರಲ್ಲಿ ಮಂತ್ರಿಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.
ಸಂಪುಟ ವಿಸ್ತರಣೆಯಲ್ಲಿ ಜಾತಿ ಸಮೀಕರಣ; ಹೇಗೆ ಲೆಕ್ಕಾಚಾರ ಹಾಕಿದ್ರೂ ಪಕ್ಕಾ ಆಗ್ತಿಲ್ಲ!
ಒಂದು ಕಡೆ ರಾಮದಾಸ್ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಶತಾಯಗತಾಯ ಸ್ಥಾನ ಪಡೆಯಲೇಬೇಕೆಂಬ ಪ್ರಯತ್ನದಲ್ಲಿದ್ದರೆ ಇನ್ನೊಂದು ಕಡೆ ಸಿಪಿ ಯೋಗೇಶ್ವರ್ಗೆ ಅದೃಷ್ಟ ಒಲಿಯಬಹುದೆಂಬ ಲೆಕ್ಕಾಚಾರ ಶುರುವಾಗಿದೆ.