BJP ಭಿನ್ನಮತೀಯ ಪಡೆಯಲ್ಲೇ ಶುರುವಾಯ್ತು ಒಡಕು..!

ಇದೀಗ ಬಿಜೆಪಿಯ ಅಸಮಾಧಾನದ ಬೆಂಕಿಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದ್ದು, ಭಿನ್ನಮತೀಯರ ನಡುವೆಯೇ ಒಬ್ಬರ ಮೇಲೆ ಸಂಶಯ ಶುರುವಾಗಿದೆ. ಬೇರೆಯವರನ್ನು ಎತ್ತಿಕಟ್ಟಿ ತಾವು ಒಳ್ಳೆಯವರಾಗಲು ಕೆಲವು ಶಾಸಕರು ಯತ್ನಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.31): ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ವಿರುದ್ಧವೇ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದ ಉತ್ತರ ಕರ್ನಾಟಕದ 27 ಬಿಜೆಪಿ ಶಾಸಕ ನಡುವೆಯೇ ಬಿರುಕು ಉಂಟಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿಯ ಅಸಮಾಧಾನದ ಬೆಂಕಿಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದ್ದು, ಭಿನ್ನಮತೀಯರ ನಡುವೆಯೇ ಒಬ್ಬರ ಮೇಲೆ ಸಂಶಯ ಶುರುವಾಗಿದೆ. ಬೇರೆಯವರನ್ನು ಎತ್ತಿಕಟ್ಟಿ ತಾವು ಒಳ್ಳೆಯವರಾಗಲು ಕೆಲವು ಶಾಸಕರು ಯತ್ನಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಮಹತ್ವದ ಆದೇಶ: ಯಡಿಯೂರಪ್ಪಗೆ ಥ್ಯಾಂಕ್ಸ್ ಹೇಳಿದ ಸಿದ್ದರಾಮಯ್ಯ..!

ಕೆಲವು ನಾಯಕರು ಹೌದು ನಾವು ಸಭೆ ನಡೆಸಿದ್ದೇವೆ ಎಂದರೆ ಮತ್ತೆ ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ನಾವು ಸಭೆಯಲ್ಲಿ ಪಾಲ್ಗೊಂಡಿಲ್ಲ ಎನ್ನುತ್ತಿದ್ದಾರೆ. ಈ ವಿಚಾರವನ್ನು ಧೈರ್ಯವಾಗಿ ಹೇಳಿಕೊಳ್ಳಲು ಕೆಲವು ಬಿಜೆಪಿ ಶಾಸಕರು ಹೆದರುತ್ತಿದ್ದಾರೆ. ಭಿನ್ನಮತೀಯರ ನಡುವೆ ಒಡಕು ಮೂಡಲು ಕಾರಣವೇನು ಎನ್ನುವುದರ ಬಗೆಗಿನ ಎಕ್ಸ್‌ಕ್ಲೂಸಿವ್ ಸ್ಟೋರಿ ಸುವರ್ಣ ನ್ಯೂಸ್ ನಿಮ್ಮ ಮುಂದಿಡುತ್ತಿದೆ ನೋಡಿ.

Related Video