14 ಜಿಲ್ಲೆಗಳಿಗೆ ರಿಲೀಫ್: ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಿಷ್ಟು..!
ಗ್ರೀನ್ ಝೋನ್ನಲ್ಲಿ ಬರುವ 14 ಜಿಲ್ಲೆಗಳಲ್ಲಿ ಅಂಗಡಿ-ಮುಂಗಟ್ಟು ತೆರೆಯಲು ಅನುಮತಿ ನೀಡಲಾಗಿದೆ. ಇನ್ನು ರೆಡ್ ಝೋನ್ಗೆ ಯಾವುದೇ ವಿನಾಯ್ತಿ ನೀಡಿಲ್ಲ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಕೂಡಾ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಬೆಂಗಳೂರು(ಏ.28): ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಎರಡನೇ ಹಂತದ ಲಾಕ್ಡೌನ್ ಜಾರಿಯಲ್ಲಿದೆ. ಹೀಗಿರುವಾಗಲೇ ಒಂದೂ ಪ್ರಕರಣಗಳು ದಾಖಲಾಗದ ಗ್ರೀನ್ ಝೋನ್ಗೆ ಸರ್ಕಾರ ಕೆಲವೊಂದ ಅಗತ್ಯ ವಿನಾಯ್ತಿಗಳನ್ನು ನೀಡಿದೆ.
ಗ್ರೀನ್ ಝೋನ್ನಲ್ಲಿ ಬರುವ 14 ಜಿಲ್ಲೆಗಳಲ್ಲಿ ಅಂಗಡಿ-ಮುಂಗಟ್ಟು ತೆರೆಯಲು ಅನುಮತಿ ನೀಡಲಾಗಿದೆ. ಇನ್ನು ರೆಡ್ ಝೋನ್ಗೆ ಯಾವುದೇ ವಿನಾಯ್ತಿ ನೀಡಿಲ್ಲ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಕೂಡಾ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಲಾಕ್ಡೌನ್: ಗ್ರೀನ್ ಝೋನ್ನಲ್ಲಿರುವವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ..!
ಇನ್ನುಳಿದಂತೆ ಮೇ 04ರ ನಂತರ ತಾಲೂಕು ಹಂತದಲ್ಲಿ ಯಾವೆಲ್ಲಾ ಗ್ರೀನ್ ಝೋನ್ ಪ್ರದೇಶಗಳಿವೆಯೋ ಅಲ್ಲೆಲ್ಲಾ ಕೆಲವೊಂದು ವಿನಾಯಿತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತನಾಡುವುದಾಗಿಯೂ ಅಶೋಕ್ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.