Asianet Suvarna News Asianet Suvarna News

ರಾಜಕೀಯದಲ್ಲಿ CD ಬಿರುಗಾಳಿ; ದಿನೇಶ್ ಕಲ್ಲಹಳ್ಳಿ ಯೂ ಟರ್ನ್ ಹೊಡೆದಿದ್ಯಾಕೆ..?

ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿ, ರಮೇಶ್ ಜಾರಕಿಹೊಳಿ ರಾಜಿನಾಮೆಗೆ ಕಾರಣವಾಗಿದ್ದ  ಸಿ.ಡಿ. ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 

ಬೆಂಗಳೂರು (ಮಾ. 08): ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿ, ರಮೇಶ್ ಜಾರಕಿಹೊಳಿ ರಾಜಿನಾಮೆಗೆ ಕಾರಣವಾಗಿದ್ದ  ಸಿ.ಡಿ. ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.  ಮಾಜಿ ಸಚಿವರ ವಿರುದ್ಧ ನೀಡಿದ್ದ ದೂರು ಹಿಂಪಡೆಯಲು ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಪತ್ರ ಬರೆದಿದ್ದಾರೆ.

ಸಾಹುಕಾರ್ ರಾಸಲೀಲೆ ಕೇಸ್ : ಸಿಂಗಲ್ ಬೆಡ್‌ ರೂಂ, ಸೀಡಿ ಲೇಡಿಗಾಗಿ ತಲಾಶ್..!

'ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಐದು ಕೋಟಿ ರು. ಡೀಲ್‌ ನಡೆ​ದಿದೆ ಎಂದು ನನ್ನ ಮೇಲೆ ಗುರುತರ ಆರೋಪ ಮಾಡಿ​ದ್ದಾ​ರೆ. ಅವರ ಈ ಹೇಳಿಕೆಯಿಂದ ಜನ ನನ್ನನ್ನು ಸಂಶಯದಿಂದ ನೋಡುವಂತಾಗಿದೆ. ಮಾಹಿತಿ ಕೊಡುವವರನ್ನು ಟಾರ್ಗೆಟ್‌ ಮಾಡುತ್ತಿರುವುದು ನೋವಿನ ಸಂಗತಿ. ಇದ​ರಿಂದ ಮಾನ​ಸಿಕವಾಗಿ ನೊಂದು ದೂರು ವಾಪಸ್‌ ಪಡೆ​ಯಲು ನಿರ್ಧರಿಸಿದ್ದೇನೆ' ಎಂದಿದ್ಧಾರೆ.