'SDPI ಮೇಲೆ ನಿಷೇಧ ಹೇರಬೇಕು ಎಂದಾಗ ಸಿದ್ದರಾಮಯ್ಯನವರಿಗೆ ಏಕೆ ನೋವಾಗುತ್ತದೆ'?
SDPI ಮೇಲೆ ನಿಷೇಧ ಹೇರಬೇಕು ಎಂಬ ಮಾತು ಬಂದಾಗಲೆಲ್ಲಾ ಸಿದ್ದರಾಮಯ್ಯನವರಿಗೆ ಯಾಕಾಗಿ ನೋವಾಗುತ್ತದೆ? SDPI ರಕ್ಷಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು. ಅಧಿಕಾರದಲ್ಲಿದ್ದಾಗ ದಲಿತರನ್ನು ಮಟ್ಟ ಹಾಕಲು ಕೆಲಸ ಮಾಡಿದ್ದರು' ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಬೆಂಗಳೂರು (ಆ. 20): SDPI ಮೇಲೆ ನಿಷೇಧ ಹೇರಬೇಕು ಎಂಬ ಮಾತು ಬಂದಾಗಲೆಲ್ಲಾ ಸಿದ್ದರಾಮಯ್ಯನವರಿಗೆ ಯಾಕಾಗಿ ನೋವಾಗುತ್ತದೆ? SDPI ರಕ್ಷಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು. ಅಧಿಕಾರದಲ್ಲಿದ್ದಾಗ ದಲಿತರನ್ನು ಮಟ್ಟ ಹಾಕಲು ಕೆಲಸ ಮಾಡಿದ್ದರು' ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
'ಪರಮೇಶ್ವರ್ಗೆ ಡಿಸಿಎಂ ಹುದ್ದೆ ತಪ್ಪಿಸಿದ್ದು ಇದೇ ಸಿದ್ದರಾಮಯ್ಯ. ಶ್ರೀನಿವಾಸ್ ಪ್ರಸಾದ್ರನ್ನು ತುಳಿದಿದ್ದು ಕೂಡಾ ಇದೇ ಸಿದ್ದರಾಮಯ್ಯ. ಈಗ ಅವರದೇ ಪಕ್ಷದ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಸುಟ್ಟು ಭಸ್ಮವಾದರೂ ಮಾತಾಡುತ್ತಿಲ್ಲ' ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.