Asianet Suvarna News Asianet Suvarna News

ಪೊಲೀಸರ ಟಫ್ ರೂಲ್ಸ್‌ಗೆ ಬೆಚ್ಚಿಬಿದ್ದ ಪಾದರಾಯನಪುರ ಜನ..!

ಸದ್ಯ ಪಾದರಾಯನಪುರದಲ್ಲಿ ಮನೆಯಿಂದ ಹೊರಬರಲು ಅಲ್ಲಿನ ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಅನಾವಶ್ಯಕವಾಗಿ ಓಡಾಡುವವರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಗಲಭೆ ಸಂಬಂಧ ಪೊಲೀಸರು ವಶಕ್ಕೆ ಪಡೆಯುವ ಭೀತಿಯಿಂದಾಗಿ ಜನ ರಸ್ತೆಗಿಳಿಯಲು ಮೀನಾಮೇಷ ಎಣಿಸುತ್ತಿದ್ದಾರೆ.

ಬೆಂಗಳೂರು(ಏ.21): ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಬೆಂಗಳೂರಿನ ಪಾದರಾಯನಪುರ ಇದೀಗ ಫುಲ್ ಸೈಲೆಂಟ್ ಆಗಿದೆ. ಪೊಲೀಸರ ಕಠಿಣ ರೂಲ್ಸ್‌ಗಳಿಗೆ ಪಾದರಾಯನಪುರದ ಜನ ಬೆಚ್ಚಿಬಿದ್ದಿದ್ದಾರೆ.

ಮನೆಯಿಂದ ಹೊರಬರಲು ಅಲ್ಲಿನ ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಅನಾವಶ್ಯಕವಾಗಿ ಓಡಾಡುವವರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಗಲಭೆ ಸಂಬಂಧ ಪೊಲೀಸರು ವಶಕ್ಕೆ ಪಡೆಯುವ ಭೀತಿಯಿಂದಾಗಿ ಜನ ರಸ್ತೆಗಿಳಿಯಲು ಮೀನಾಮೇಷ ಎಣಿಸುತ್ತಿದ್ದಾರೆ.

ಪಾದರಾಯನಪುರ ಪುಂಡರು ರಾಮನಗರ ಜೈಲಿಗೆ ಶಿಫ್ಟ್..!

ಪಾದರಾಯನಪುರದ ಬಹುತೇಕ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ. ಪಾದರಾಯಪುರದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ ಎನ್ನುವುದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.  


 

Video Top Stories