Asianet Suvarna News Asianet Suvarna News

ಗದ್ದೆಗೆ ನುಗ್ಗಿದ ನೀರು; ರಕ್ಷಣೆಗಾಗಿ 3 ಗಂಟೆಗಳ ಕಾಲ ಮರವೇರಿ ಕುಳಿತ ವೃದ್ಧ

ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಉಡುಪಿ, ಕೊಡಗು, ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ನಿನ್ನೆ ಒಂದು ದಿನ ನಾಲ್ವರು ಬಲಿಯಾಗಿದ್ದಾರೆ. ಬೇರ ಬೇರೆ ಕಡೆ ಗುಡ್ಡ ಕುಸಿತವಾಗಿದೆ. ಬೆಳಗಾವಿಯಲ್ಲಿ ರಕ್ಷಣೆಗಾಗಿ ವೃದ್ಧರೊಬ್ಬರು ಮರವೇರಿ ಕುಳಿತಿದ್ದರು. ನಂತರ ಅವರನ್ನು ರಕ್ಷಿಸಲಾಗಿದೆ. 

ಬೆಂಗಳೂರು (ಆ. 06): ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಉಡುಪಿ, ಕೊಡಗು, ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ನಿನ್ನೆ ಒಂದು ದಿನ ನಾಲ್ವರು ಬಲಿಯಾಗಿದ್ದಾರೆ. ಬೇರ ಬೇರೆ ಕಡೆ ಗುಡ್ಡ ಕುಸಿತವಾಗಿದೆ. ಬೆಳಗಾವಿಯಲ್ಲಿ ರಕ್ಷಣೆಗಾಗಿ ವೃದ್ಧರೊಬ್ಬರು ಮರವೇರಿ ಕುಳಿತಿದ್ದರು. ನಂತರ ಅವರನ್ನು ರಕ್ಷಿಸಲಾಗಿದೆ.

ಅಪಾಯದ ಮಟ್ಟ ಮೀರಿ ಪಾಂಡ್ರಿ ನದಿ ಹರಿಯುತ್ತಿದೆ. ಪಾಂಡ್ರಿ ನದಿಯ ನೀರು ನುಗ್ಗಿ ವಿಲಾಸ್ ದೇಸಾಯಿಯವರ ಗದ್ದೆ ಜಲಾವೃತವಾಗಿದೆ. ಜಮೀನು ಜಲಾವೃತವಾಗಿದ್ದರಿಂದ ಈ ವೃದ್ಧ ಮರವೇರಿ ಕುಳಿತಿದ್ದರು. 

ವರುಣನ ಆರ್ಭಟಕ್ಕೆ ತುಂಬಿದ ಕಬಿನಿ; ಜಲಾಶಯದಿಂದ ನೀರು ಬಿಡುಗಡೆ