Asianet Suvarna News Asianet Suvarna News

National Flag Row : ವಿಧಾನಪರಿಷತ್ ನಲ್ಲಿ ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ

ಸದನದಲ್ಲಿ ಮುಂದುವರಿದ ಧ್ವಜ ಕದನ
ವಿಧಾನಪರಿಷತ್ ನಲ್ಲಿ ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ
ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆಗೆ ಪಟ್ಟು

ಬೆಂಗಳೂರು (ಫೆ.17): ರಾಷ್ಟ್ರಧ್ವಜದ (National Flag) ವಿಚಾರದಲ್ಲಿ ಕೆಎಸ್ ಈಶ್ವರಪ್ಪ (KS Eshwarappa)ನೀಡಿರುವ ಹೇಳಿಕೆ ಉಭಯ ಸದನಗಳಲ್ಲೂ ಕೋಲಾಹಲಕ್ಕೆ ಕಾರಣವಾಗಿದೆ. ಎರಡೂ ಪಕ್ಷಗಳ ನಾಯಕರು ತಮ್ಮ ತಮ್ಮ ಹೇಳಿಕೆ ನೀಡುತ್ತಿರುವ ಹಂತದಲ್ಲಿ ವಿಧಾನಪರಿಷತ್ ನಲ್ಲಿ ( Legislative Council ) ಕಾಂಗ್ರೆಸ್ (Cogress) ಪಕ್ಷದ ಪ್ರತಿಭಟನೆ ಮುಂದುವರಿದಿದೆ.

ಈ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, "ನಿಮ್ಮ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಹಿಜಾಬ್ ವಿಚಾರದಲ್ಲಿ ನಿಮ್ಮ ಪಕ್ಷ ಸಂಪೂರ್ಣವಾಗಿ ಹೈರಾಣಾಗಿದೆ. ಹಾಗಾಗಿ ಈ ರೀತಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಜನರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದೀರಿ' ಎಂದು ಹೇಳಿದ್ದಾರೆ. ಇನ್ನು ಅರಗ ಜ್ಞಾನೇಂದ್ರ ಮಾತಿಗೆ ಪರಿಷತ್ ನಲ್ಲಿ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದರಿಂದಾಗಿ ಪರಿಷತ್ ನಲ್ಲಿ ತೀವ್ರ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.

Karnataka Politics ಈಶ್ವರಪ್ಪರನ್ನ ಸಚಿವ ಸಂಪುಟದಿಂದ ಕೈಬಿಡುವಂತೆ ಪಟ್ಟು
ಇನ್ನು ಕಾಂಗ್ರೆಸ್ ಪಕ್ಷ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದೆ. ಕಾಂಗ್ರೆಸ್ ನವರು ಎಷ್ಟು ಬೇಕಾದರೂ ಗಲಾಟೆ ಮಾಡಲಿ, ನಾನು ರಾಜೀನಾಮೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ರಾಷ್ಟ್ರಧ್ವಜಕ್ಕೆ ನಿನ್ನೆ ಸದನದಲ್ಲಿ ಅಪಮಾನ ಮಾಡಿದವರು ಮೊದಲು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ, ನಾನೇಕೆ ರಾಜೀನಾಮೆ ನೀಡಬೇಕು ಎಂದು ಕೇಳಿದ್ದಾರೆ.

Video Top Stories