Asianet Suvarna News Asianet Suvarna News

ನಿಮಗೆ ಬಡವರ ಯೋಜನೆಗಳು ಮಾತ್ರ ಕಾಣೋದೇನ್ರಿ..? ಸರ್ಕಾರದ ನಡೆಗೆ ಖಾದರ್ ಆಕ್ರೋಶ

ಬಿಪಿಲ್ ಕಾರ್ಡ್ ಮಾನದಂಡದಲ್ಲಿ ಬದಲಾವಣೆ ಮಾಡಿ ಸರ್ಕಾರ ಕಾರ್ಡ್‌ದಾರರಿಗೆ ಶಾಕ್ ನೀಡಿದೆ. ಬೈಕ್ , ಫ್ರಿಡ್ಜ್, ಬೈಕ್, ಟಿವಿ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಸರ್ಕಾರ ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಸಚಿವ ಯು ಟಿ ಖಾದರ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಫೆ. 15): ಬಿಪಿಲ್ ಕಾರ್ಡ್ ಮಾನದಂಡದಲ್ಲಿ ಬದಲಾವಣೆ ಮಾಡಿ ಸರ್ಕಾರ ಕಾರ್ಡ್‌ದಾರರಿಗೆ ಶಾಕ್ ನೀಡಿದೆ. ಬೈಕ್ , ಫ್ರಿಡ್ಜ್, ಬೈಕ್, ಟಿವಿ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಸರ್ಕಾರ ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಸಚಿವ ಯು ಟಿ ಖಾದರ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಎಪಿಲ್ ಕಾರ್ಡ್ ರದ್ದು : ಕತ್ತಿ ಹೇಳಿಕೆಗೆ ಜನರ ಆಕ್ರೋಶ  

ಕತ್ತಿಯವರ ಹೇಳಿಕೆ ಜನಸಾಮಾನ್ಯರಿಗೆ ವಿರುದ್ಧವಾಗಿರುವಂತದ್ದು. ಇದನ್ನು ಕೂಡಲೇ ವಾಪಸ್ ಪಡೆಯಬೇಕು. ಶ್ರೀಮಂತರ ಬಳಿ BPL ಕಾರ್ಡ್  ಇದ್ರೆ ವಾಪಸ್ ಪಡೆಯಿರಿ. ಆಹಾರ ಪಡೆಯುವುದು ಜನರ ಹಕ್ಕು. ಅವರ ಹಕ್ಕಿಗೆ ಕಲ್ಲು ಹಾಕೋದು ಸರಿನಾ..? ಎಂದು ಯು ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. 

 

Video Top Stories