Asianet Suvarna News Asianet Suvarna News

ಮೈಸೂರು : ಸಿಎಸ್‌ ಬಂದ್ರೂ ಇತ್ಯರ್ಥವಾಗದ ಜಗಳ, ಸಿಎಂಗೆ ಇಂದು ವರದಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಮುಖ್ಯ ಕಾರ್ಯದರ್ಶಿ ರವಿಕುಮಾರ್ ನಿನ್ನೆ ಇಬ್ಬರಿಂದಲೂ ವಿವರಣೆ ಪಡೆದಿದ್ದಾರೆ. 

ಮೈಸೂರು (ಜೂ. 05): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಮುಖ್ಯ ಕಾರ್ಯದರ್ಶಿ ರವಿಕುಮಾರ್ ನಿನ್ನೆ ಇಬ್ಬರಿಂದಲೂ ವಿವರಣೆ ಪಡೆದಿದ್ದಾರೆ.

ಡೀಸಿ VS ಆಯುಕ್ತೆ ಗುದ್ದಾಟ: ಸಿಎಸ್ ವರದಿ ಆಧರಿಸಿ ಸಿಎಂ ಮುಂದಿನ ಕ್ರಮ..?

ಲೆಕ್ಕ ಕೇಳಿದ್ದೆ, ಕೊಟ್ಟಿಲ್ಲ, ದೂರಲು ಬೇರೆ ವೇದಿಕೆ ಇದೆ ಎಂದು ಡೀಸಿ ರೋಹಿಣಿ ಸಿಂಧೂರಿ ಹೇಳಿದರೆ, ಇಲ್ಲಿ ಯಾರೂ ದೊಡ್ಡವರಲ್ಲಿ, ವ್ಯವಸ್ಥೆಯೇ ಸುಪ್ರೀಂ ಎಂದು ಶಿಲ್ಪಾ ನಾಗ್ ಹೇಳುತ್ತಾರೆ. ಸಿಎಸ್‌ ರವಿಕುಮಾರ್, ಇಂದು ಸಿಎಂಗೆ ವರದಿ ನೀಡಲಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಸಿಎಂ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. 

 

Video Top Stories