ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?

ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ನಿಗೂಢ ಸುರಂಗ ಮಾರ್ಗಗಳಿವೆ. ರಾಜರ ಕಾಲದಿಂದ ಬ್ರಿಟಿಷರವರೆಗೆ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿದೆ ಎಂದು ಸ್ಥಳೀಯರು ಬಲವಾಗಿ ನಂಬಿದ್ದರೂ, ಅಧಿಕೃತ ದಾಖಲೆಗಳಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. 

Share this Video
  • FB
  • Linkdin
  • Whatsapp

ಇವತ್ತು ನಿಮಗೊಂದು ಸಿನಿಮಿಯಾ ಸ್ಟೋರಿಯೊಂದನ್ನು ಹೇಳುತ್ತಿದ್ದೇವೆ. ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ನಿಗೂಢ ಹಾಗೂ ದುರ್ಗಮವಾದ ಸುರಂಗ ಮಾರ್ಗಗಳು ಶತಮಾನಗಳ ಕಾಲದಿಂದಲೂ ಇವೆ. ಏಕಿವೆ ಅನ್ನೋದನ್ನ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹೌದು, ರಾಜ ಮಹರಾಜರುಗಳ ಕಾಲದಿಂದಲೂ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿದೆ. ಬ್ರಿಟಿಷರು ಕೂಡ ಇಲ್ಲಿ ಸಾಕಷ್ಟು ಚಿನ್ನವನ್ನು ಕೆರೆದುಕೊಂಡು ಹೋಗಿದ್ದಾರೆ. ಆದ್ರೆ, ನಮ್ಮ ಅಧಿಕೃತ ದಾಖಲೆಗಳಲ್ಲಿ ಮಾತ್ರ ಇಲ್ಲೊಂದು ಗಣಿಗಾರಿಕೆ ನಡೆದಿತ್ತು. ಚಿನ್ನದ ನಿಕ್ಷೇಪವಿತ್ತು ಅನ್ನೋ ಮಾಹಿತಿ ಇಲ್ಲ. ಆದ್ರೆ, ಸುವರ್ಣ ನ್ಯೂಸ್​​​ ಆ ದುರ್ಗಮ ಸುರಂಗವನ್ನು ಹೊಕ್ಕು ಅದ್ರೊಳಗೆ ಏನಿದೆ ಅನ್ನೋದನ್ನ ಪತ್ತೆ ಮಾಡಿದೆ. ಆ ಡೀಟೈಲ್​​ ಇಲ್ಲಿದೆ ನೋಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಪ್ಪತಗುಡ್ಡ ಅರಣ್ಯ ಪ್ರದೇಶ ಸೇರಿದಂತೆ ಇಲ್ಲಿನ ಸುತ್ತಮೂತ್ತಲೂ ಸಾಕಷ್ಟು ಕಡೆಗಳಲ್ಲಿ ಚಿನ್ನದ ನಿಕ್ಷೇಪಗಳು ಇವೆಯಂತೆ. ಕಣಿವೆಹೊಸೂರಿನಲ್ಲಿಯೂ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು ಅಂತ ಇಲ್ಲಿನ ಜನ್ರು ಹೇಳ್ತಾರೆ. ಯಾರೋ ಒಬ್ರು ಇಬ್ರು ಹೇಳಿದ್ರೆ, ಈ ಮಾತನ್ನು ಅಲ್ಲಗಳೆಯ ಬಹುದಿತ್ತು. ಆದ್ರೆ, ಇಲ್ಲಿನ ಮನೆಮನೆಯಲ್ಲೂ ಹಿರಿಯರು ಇದೇ ಮಾತುಗಳನ್ನು ಇಲ್ಲಿನ ಜನ್ರಿಗೆ ಹೇಳಿಕೊಂಡು ಬಂದಿದ್ದಾರೆ. ಹೀಗಾಗಿ ಇಲ್ಲಿನ ಜನ್ರು ಈ ವಿಷ್ಯವನ್ನು ಪ್ರಬಲವಾಗಿ ನಂಬ್ಕೊಂಡು ಬಂದಿದ್ದಾರೆ.

Related Video