'ವಿರೋಧ ಪಕ್ಷದವರು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಜನರ ದಾರಿ ತಪ್ಪಿಸಿದರು'

- ಲಸಿಕೆ ಕೊರತೆಗೆ ವಿರೋಧ ಪಕ್ಷದವರೇ ಕಾರಣ: ಸಂಸದ ಮುನಿಸ್ವಾಮಿ- ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಜನರ ದಾರಿ ತಪ್ಪಿಸಿದರು- ಶೀಘ್ರದಲ್ಲೇ ಲಸಿಕೆ ಸಿಗಲಿದೆ 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 13): ಸಂಸದರು ಯಾಕೆ ಮೌನವಾಗಿದ್ದೀರಿ.? ಕೇಂದ್ರದ ಬಳಿ ಯಾಕೆ ಕೇಳುತ್ತಿಲ್ಲ.? ಎಂದು ಮಾಧ್ಯಮದವರು ಸಂಸದ ಮುನಿಸ್ವಾಮಿಯನ್ನು ಪ್ರಶ್ನಿಸಲು ತಡಬಡಾಯಿಸಿದ್ದಾರೆ. 

Add Asianetnews Kannada as a Preferred SourcegooglePreferred

ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಾಗಿಲ್ಲ; ಡಿವಿಎಸ್ ಸಮಜಾಯಿಷಿ

'ಕೊರೊನಾ ಲಸಿಕೆಯನ್ನು ಮೊದಲು ಬಿಟ್ಟಾಗ ಇದು ಮೋದಿ ಲಸಿಕೆ, ಬಿಜೆಪಿ ಲಸಿಕೆ, ಇದರಲ್ಲಿ ಲೋಪವಿದೆ ಅಂತೆಲ್ಲಾ ರಾಜಕಾರಣ ಮಾಡಿದರು. ಜನರ ದಾರಿ ತಪ್ಪಿಸಿದರು. ಈಗ ಎಲ್ಲರೂ ಲಸಿಕೆಗಾಗಿ ಮುಗಿ ಬೀಳುತ್ತಿದ್ದಾರೆ. ಬೇಡಿಕೆ ಹೆಚ್ಚಿದ್ದರಿಂದ ಕೊರತೆಯಾಗಿದೆ. ಸದ್ಯದಲ್ಲೇ ಎಲ್ಲವೂ ಸರಿಯಾಗಲಿದೆ' ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ. 

Related Video