Asianet Suvarna News Asianet Suvarna News

ಇಲಾಖೆಗಳಲ್ಲಿ ಸಿಎಂ ಬಿಟ್ಟು ಬೇರೆಯವರ ಹಸ್ತಕ್ಷೇಪವಿದ್ರೆ ಅರುಣ್ ಸಿಂಗ್ ಬಳಿ ಹೇಳಲಿ: ಈಶ್ವರಪ್ಪ

- 'ಕೆಲವರು ಬೇರೆ ಬೇರೆ ಇಲಾಖೆಗಳಲ್ಲಿ ಮೂಗು ತೂರಿಸುವ ಆರೋಪವಿದೆ'

-  ಸಿಎಂ ಬಿಟ್ಟು ಬೇರೆಯವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿದ್ದೇನೆ. 

- ಹಾಗೇನಾದರೂ ಇದ್ದರೆ ಅರುಣ್ ಸಿಂಗ್ ಬಳಿ ಹೇಳಿಕೊಳ್ಳಲಿ: ಈಶ್ವರಪ್ಪ

ಬೆಂಗಳೂರು (ಜೂ. 16): ಕೆಲವರು ಬೇರೆ ಬೇರೆ ಇಲಾಖೆಗಳಲ್ಲಿ ಮೂಗು ತೂರಿಸ್ತಾ ಇದಾರೆ. ಸಿಎಂ ಬಿಟ್ಟು ಬೇರೆಯವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ನಾನು ಕೇಳಿದ್ದೇನೆ. ಇದು ನನ್ನ ಗಮನಕ್ಕೆ ಬಂದಿಲ್ಲ.  ಹಾಗೇನಾದರೂ ಇದ್ದರೆ ಅರುಣ್ ಸಿಂಗ್ ಬಳಿ ಹೇಳಿಕೊಳ್ಳಲಿ. ಈ ಬಗ್ಗೆ ಹೈ ಕಮಾಂಡ್ ನಿರ್ಧರಿಸುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ. 

ಗೊಂದಲದ ಹೇಳಿಕೆ: ಉಲ್ಟಾ ಹೊಡೆದ ಸಚಿವ ಕೆ ಎಸ್ ಈಶ್ವರಪ್ಪ

ಇಂದು ಬೆಂಗಳೂರಿಗೆ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ. 3 ದಿನಗಳ ಕಾಲ ರಾಜ್ಯದಲ್ಲಿದ್ದು ಸಚಿವರು, ಶಾಸಕರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆ ಕುತೂಹಲಕ್ಕೆ ಕಾರಣವಾಗಿದೆ.