Asianet Suvarna News Asianet Suvarna News

ಈ ಬಾರಿ ಬೆಳಗಾವಿ ಪಾಲಿಕೆ ಕಾಂಗ್ರೆಸ್‌ಮಯವಾಗಲಿದೆ: ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ

ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿವೆ. ಬಿಜೆಪಿ ಕಡೆಯಿಂದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಘಟಾನುಘಟಿ ನಾಯಕರಿಂದ ಅಬ್ಬರದ ಪ್ರಚಾರವಿತ್ತು. 

ಬೆಳಗಾವಿ (ಸೆ.03): ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿವೆ. ಬಿಜೆಪಿ ಕಡೆಯಿಂದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಘಟಾನುಘಟಿ ನಾಯಕರಿಂದ ಅಬ್ಬರದ ಪ್ರಚಾರವಿತ್ತು. ಕಾಂಗ್ರೆಸ್ ಕಡೆಯಿಂದ ಖುದ್ದು ಡಿಕೆಶಿ ಅಖಾಡಕ್ಕಿಳಿದಿದ್ದರು. 

ಹುಬ್ಬಳ್ಳಿ- ಧಾರವಾಡ ಪಾಲಿಕೆಗೆ ಮತದಾನ: ಹ್ಯಾಟ್ರಿಕ್ ಗೆಲುವಿನ ನಗೆ ಬೀರುತ್ತಾ ಬಿಜೆಪಿ.?

' ಈ ಬಾರಿ ಮತದಾರರು ಬೆಳಗಾವಿ ಪಾಲಿಕೆಯನ್ನು ಮತದಾರರು ಕಾಂಗ್ರೆಸ್‌ಮಯ ಮಾಡುತ್ತಾರೆಂಬ ವಿಶ್ವಾಸವಿದೆ. ಕಾಂಗ್ರೆಸ್ ಭಾಷೆ ರಾಜಕಾರಣ, ಜಾತಿ ರಾಜಕಾರಣ ಮಾಡಿಲ್ಲ. ಜನ ಬಿಜೆಪಿ ಆಡಳಿತದಿಂದ ಬೇಸತ್ತು ಹೋಗಿದಾರೆ. ಸಿದ್ದರಾಮಯ್ಯ ಕಾಲದಲ್ಲಿ ನಾವು ಉತ್ತಮ ಆಡಳಿತ ನೀಡಿದ್ದೆವು. ಮತದಾರರು ಈ ಬಾರಿ ಕಾಂಗ್ರೆಸ್ ಪರ ನಿಲ್ಲುವ ವಿಶ್ವಾಸವಿದೆ' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. 

Video Top Stories