ದಳಪತಿಗಳ ಶ್ವೇತ ಬಾವುಟ, ಸೈಲೆಂಟ್ ಆಗ್ತಿಲ್ಲ ಎಂಪಿ ಸುಮಲತಾ, ಅಕ್ರಮ ಗಣಿಗಾರಿಕೆ ವಿರುದ್ಧ ಶಪಥ
- ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಿಲ್ಲಲ್ಲ: ಸುಮಲತಾ
- ನಾಳೆ, ನಾಡಿದ್ದು ಮಂಡ್ಯ, ಮೈಸೂರಿಗೆ ಭೇಟಿ
- ಸುಮಲತಾ ಪರವಾಗಿ ನಿಂತಿದ್ಧಾರೆ ಅಂಬಿ ಅಭಿಮಾನಿಗಳು
ಬೆಂಗಳೂರು (ಜು. 12): ಸುಮಲತಾ VS ಎಚ್ಡಿಕೆ ಹೋರಾಟ, ಜೆಡಿಎಸ್ VS ಅಂಬಿ ಅಭಿಮಾನಿಗಳ ಹೋರಾಟವಾಗಿ ತಿರುಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಭಿಮಾನಿಗಳು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸುಮಲತಾ ಅಂಬಿ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ.
HDK ಪರ ಬ್ಯಾಟ್ ಬೀಸಿದ್ದ ಡಿಕೆಶಿಗೆ ಸುಮಲತಾ ಬೌನ್ಸರ್..ಹೊಣೆ ಹೊರ್ತೀರಾ?
'ಮಂಡ್ಯ ಜಿಲ್ಲೆ ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ಹೋರಾಟಕ್ಕೆ ಹಲವರು ಸೇರಿಕೊಂಡಿದ್ದಾರೆ. ಹೋರಾಟ ಮುಂದುವರೆಸುತ್ತೇನೆ' ಎಂದು ಸುಮಲತಾ ಹೇಳಿದ್ಧಾರೆ.