Asianet Suvarna News Asianet Suvarna News

ಸರ್ಪದೋಷ ಅಂದ್ರೆ ಇದೇನಾ?..ಬಾಲಕನನ್ನು ಬಿಟ್ಟು ಮತ್ಯಾರಿಗೂ ಕಾಣದ ನಾಗಪ್ಪ, 2 ತಿಂಗಳಲ್ಲಿ 9 ಬಾರಿ ಕಚ್ಚಿದ ಹಾವು!


ಇದು ಸರ್ಪದೋಷವೋ ಅಥವಾ ಹುಡುಗನ ದುರಾದೃಷ್ಟವೋ ಗೊತ್ತಿಲ್ಲ. ಕಲಬುರಗಿಯಲ್ಲಿ ಬಾಲಕನೊಬ್ಬನಿಗೆ ಎರಡು ತಿಂಗಳ ಅವಧಿಯಲ್ಲಿ 9 ಬಾರಿ ನಾಗರಹಾವು ಕಚ್ಚಿದೆ. 9 ಬಾರಿಯೂ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
 

First Published Aug 29, 2023, 9:04 PM IST | Last Updated Aug 29, 2023, 9:04 PM IST

ಕಲಬುರಗಿ (ಆ.29): ಹಾವಿನ ದ್ವೇಷನ ಹನ್ನೆರಡು ವರುಷ ಅನ್ನೋದು ಮಾತು. ತನ್ನ ಸೇಡು ತೀರೋವರೆಗೂ ನಾಗರಹಾವು ಬಿಡೋದಿಲ್ಲ. ಅದೇ ರೀತಿಯ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ. 

ಇಲ್ಲಿ ಈ ಬಾಲಕನ ಹೊರತಾಗಿ ಯಾರೊಬ್ಬರಿಗೂ ನಾಗರ ಹಾವು ಕಾಣೋದಿಲ್ಲ. 2 ತಿಂಗಳ ಅವಧಿಯಲ್ಲಿ 9 ಬಾರಿ ನಾಗರಹಾವು ಈತನಿಗೆ ಕಚ್ಚಿದೆ.  ಹಾವಿನ ಕಾಟದಿಂದ ಬೇಸತ್ತಿರುವ ಬಾಲಕನ ಕುಟುಂಬ ಸರ್ಪದೋಷ ಇರಬಹುದು ಎನ್ನುವ ಕಾರಣಕ್ಕೆ ಮನೆಯನ್ನು ಕೂಡ ತೊರೆದಿದೆ.

ವಿರಾಟ್‌ ಕೊಹ್ಲಿ ದಾಖಲೆ ಮುರಿದ ಇಸ್ರೋ, ಚಂದ್ರಯಾನ-3ಗೆ ಸಿಕ್ಕಿತು ಮತ್ತೊಂದು ಹಿರಿಮೆ!

ಹಲಕರ್ಟಿ ಗ್ರಾಮದ ವಿಜಯ್‌ ಕುಮಾರ್ ಹಾಗೂ ಉಷಾ ದಂಪತಿಯ ಪುತ್ರ 15 ವರ್ಷದ ಪ್ರಜ್ವಲ್‌ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಜುಲೈ 3 ರಂದು ಮೊದಲ ಬಾರಿಗೆ ತನಗೆ ಹಾವು ಕಡಿದಿತ್ತು. ಅಲ್ಲಿಂದ ಇಲ್ಲಿಯವರೆಗೂ 9 ಬಾರಿ ಹಾವು ತನಗೆ ಕಚ್ಚಿದೆ ಎಂದು ಪ್ರಜ್ವಲ್‌ ಹೇಳಿಕೊಂಡಿದ್ದಾರೆ. ಇನ್ನು ಪ್ರಜ್ವಲ್‌ನ ಪೋಷಕರು ಹಾವಿನಿಂದ ಮುಕ್ತಿ ಕೊಡಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

Video Top Stories