Asianet Suvarna News Asianet Suvarna News

Karnataka Rain | ಸಿಎಂ ಬಳಿ ಕೇಂದ್ರದಿಂದ ಅಗತ್ಯ ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಮಳೆ ಹಾನಿ ಕುರಿತು ಮಾಹಿತಿ ಪಡೆದಿದ್ದಾರೆ. ಯಾವ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆ ಹಾನಿ ಯಾವ ಪ್ರಮಾಣದಲ್ಲಾಗಿದೆ ಎನ್ನುವುದನ್ನು ವಿಚಾರಿಸಿದ್ದಾಗಿ ಸಿಎಂ  ಬೊಮ್ಮಾಯಿ ತಿಳಿಸಿದರು.  ಕೇಂದ್ರದಿಂದ ಅಗತ್ಯ ನೆರವು ಒದಗಿಸುವುದಾಗಿಯು ಪ್ರಧಾನಿ ಮೋದಿ ಭರವಸೆ  ನೀಡಿದ್ದಾರೆ

ಬೆಂಗಳೂರು (ನ.23):  ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ  ಭಾರಿ ಪ್ರಮಾಣದಲ್ಲಿ ಮಳೆ (Rain) ಸುರಿಯುತ್ತಿದ್ದು ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಬೆಂಗಳೂರು ನಗರದಲ್ಲಿ  ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ. ಜನವಸತಿ ಪ್ರದೇಶಗಳು ನೀರಿನಿಂದಾವೃತವಾಗಿದೆ.  ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.  ಜಿಲ್ಲೆಗಳಲ್ಲಿ ಬೆಳೆಗಳು ನೀರುಪಾಲಾಗಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಳೆ ಹಾನಿ ಪ್ರದೇಶಕ್ಕೆ ತಾವೇ ಸ್ವತಃ ಭೇಟಿ ನೀಡುವುದಾಗಿ ಹೇಳಿದ್ದಾರೆ. 

Bengaluru Rains: 3 ತಾಸಿನ ಮಳೆಗೆ ತತ್ತರಿಸಿದ ಉದ್ಯಾನ ನಗರಿ : BBMPಗೆ ಜನರ ಹಿಡಿಶಾಪ!

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಮಳೆ ಹಾನಿ ಕುರಿತು ಮಾಹಿತಿ ಪಡೆದಿದ್ದಾರೆ. ಯಾವ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆ ಹಾನಿ ಯಾವ ಪ್ರಮಾಣದಲ್ಲಾಗಿದೆ ಎನ್ನುವುದನ್ನು ವಿಚಾರಿಸಿದ್ದಾಗಿ ಸಿಎಂ  ಬೊಮ್ಮಾಯಿ ತಿಳಿಸಿದರು.  ಕೇಂದ್ರದಿಂದ ಅಗತ್ಯ ನೆರವು ಒದಗಿಸುವುದಾಗಿಯು ಪ್ರಧಾನಿ ಮೋದಿ ಭರವಸೆ  ನೀಡಿದ್ದಾರೆ.  

Video Top Stories