
Karnataka Rain: ಸಿಎಂಗೆ ಕರೆ, ರಾಜ್ಯದಲ್ಲಿ ಮಳೆ ಹಾನಿ ಬಗ್ಗೆ ವಿವರ ಪಡೆದ ಪ್ರಧಾನಿ ಮೋದಿ
ಅಕಾಲಿಕ ಮಳೆಯಿಂದ ಅಪಾರ ಆಸ್ತಿಪಾಸ್ತಿ, ಬೆಳೆ ನಷ್ಟಕ್ಕೊಳಗಾಗಿರುವ ಪ್ರದೇಶಗಳಲ್ಲಿ ರೈತರ ಜಮೀನುಗಳಿಗೆ ತೆರಳಿ ಸಿಎಂ ಬೊಮ್ಮಾಯಿ ಪರಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಕೆಲವು ಕಡೆ ಮಳೆ ಅವಾಂತರವಾಗಿದೆ. ಅದನ್ನೂ ಪರಿಶೀಲಿಸಿದ್ದಾರೆ.
ಬೆಂಗಳೂರು (ನ. 23): ಅಕಾಲಿಕ ಮಳೆಯಿಂದ (Untimely Rain) ಅಪಾರ ಆಸ್ತಿಪಾಸ್ತಿ, ಬೆಳೆ ನಷ್ಟಕ್ಕೊಳಗಾಗಿರುವ ಪ್ರದೇಶಗಳಲ್ಲಿ ರೈತರ ಜಮೀನುಗಳಿಗೆ ತೆರಳಿ ಸಿಎಂ ಬೊಮ್ಮಾಯಿ (CM Bommai) ಪರಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಕೆಲವು ಕಡೆ ಮಳೆ ಅವಾಂತರವಾಗಿದೆ. ಅದನ್ನೂ ಪರಿಶೀಲಿಸಿದ್ದಾರೆ.
Add Asianetnews Kannada as a Preferred Source

MLC Elections : ಬೊಮ್ಮಾಯಿಗೆ ಪರಿಷತ್ ಚುನಾವಣಾ ಸವಾಲು, ಹಿನ್ನಡೆಯಾದರೆ ಸಾಮೂಹಿಕ ನಾಯಕತ್ವ.?
ಪ್ರಧಾನಿ ಮೋದಿ, (PM Modi) ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಮಳೆ ಹಾನಿ, ಅವಾಂತರ, ಪ್ರವಾಹದ ಸ್ಥಿತಿಗತಿಗಳ ಬಗ್ಗೆ ವಿಚಾರಿಸಿದ್ದಾರೆ. ' ರಾಜ್ಯದಲ್ಲಿ ಮಳೆ ಹಾನಿ, ಪ್ರವಾಹ, ಪ್ರಾಣ ಹಾನಿ ಬಗ್ಗೆ ವಿಚಾರಿಸಿದ್ದಾರೆ. ನಾವು ಮಾಹಿತಿ ನೀಡಿದ್ದೇವೆ. ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡಾ ಕರೆ ಮಾಡಿ ವಿಚಾರಿಸಿದ್ದಾರೆ' ಎಂದು ಸಿಎಂ ಬೊಮ್ಮಾಯಿ ಹೇಳಿದರು.