ಕೊರೋನಾ ನಿವಾರಣೆಗೆ ಹೊಸದೊಂದು 'ಬೆಂಕಿ ಟಿಪ್ಸ್' ನೀಡಿದ ಆರೋಗ್ಯ ಸಚಿವ ಶ್ರೀರಾಮುಲು..!
ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿಕೊಂಡು ಚೆನ್ನಾಗಿ ಬಾಯಿ ಮುಕ್ಕುಳಿಸಿ ಆ ನೀರನ್ನು ಕುಡಿದರೆ ಕೊರೋನಾ ಹತ್ತಿರವೂ ಸುಳಿಯೋದಿಲ್ಲ ಎಂದು ಆರೋಗ್ಯ ಸಚಿವರು ಹೊಸ ಟಿಪ್ಸ್ ನೀಡಿದ್ದಾರೆ.
ಬೆಂಗಳೂರು(ಏ.18): ಕೆಲ ದಿನಗಳ ಹಿಂದಷ್ಟೇ ಬಿಸಿಲು ಜಾಸ್ತಿಯಾದರೇ ಕೊರೋನಾ ಬರಲ್ಲ ಎಂದಿದ್ದ ಆರೋಗ್ಯ ಸಚಿವ ಶ್ರೀರಾಮುಲು ಇಂದು ಕೊರೋನಾ ನಿವಾರಣೆಗೆ ಮತ್ತೊಂದು ಟಿಪ್ಸ್ ನೀಡಿದ್ದಾರೆ.
ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿಕೊಂಡು ಚೆನ್ನಾಗಿ ಬಾಯಿ ಮುಕ್ಕುಳಿಸಿ ಆ ನೀರನ್ನು ಕುಡಿದರೆ ಕೊರೋನಾ ಹತ್ತಿರವೂ ಸುಳಿಯೋದಿಲ್ಲ ಎಂದು ಆರೋಗ್ಯ ಸಚಿವರು ಹೊಸ ಟಿಪ್ಸ್ ನೀಡಿದ್ದಾರೆ.
ಕೊರೋನಾ ಎಕ್ಸ್ಪ್ರೆಸ್: ವದಂತಿ ಹಬ್ಬಿಸಿದ ಬಿಜೆಪಿ ಸಂಸದನ ವಿರುದ್ಧ ಕೇಸ್ ದಾಖಲು..!
ಒಂದು ಕಡೆ ಕೊರೋನಾ ವಾರಿಯರ್ಸ್ ಪಡೆ ಹಗಲು-ರಾತ್ರಿಯೆನ್ನದೇ ಕೊರೋನಾ ವಿರುದ್ದ ಹೋರಾಟ ನಡೆಸುತ್ತಿದ್ದರೆ, ಇತ್ತ ಆರೋಗ್ಯ ಸಚಿವರ ಇಂತಹ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.